ಅಥವಾ

ಒಟ್ಟು 25 ಕಡೆಗಳಲ್ಲಿ , 14 ವಚನಕಾರರು , 25 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿಕೆ ಉಳ್ಳನ್ನಕ್ಕ ಅರಿವು, ಅರಿವು ಉಳ್ಳನ್ನಕ್ಕ ಕುರುಹು, ಕುರುಹು ಉಳ್ಳನಕ್ಕ ಸತ್ಕಿೃೀ ಮಾರ್ಗಂಗಳು. ಆ ದೆಸೆಯಿಂದ ತ್ರಿವಿಧಸ್ಥಲ ರೂಪಾದವು. ಇಂತೀ ತ್ರಿವಿಧ ತ್ರಿವಿಧದಿಂದ ಷಡುಸ್ಥಲ ರೂಪಾಗಿ ಮೂಲ ಮೊಳೆಯೊಂದರಲ್ಲಿ ಹಲವು ಶಾಖೆ ಹೊಲಬಾದಂತೆ, ಇದು ನಿಜವಸ್ತುವಿನ ವಸ್ತುಕ. ಈ ಗುಣ ನಿರ್ಭಾವ ಭಾವವಾದ ಸಂಬಂಧ. ಇದು ವರ್ತಕ ಭಕ್ತಿಯ ಬ್ಥಿತ್ತಿ. ಉತ್ತರ ಪೂರ್ವದಲ್ಲಿ ಬೆರಸಿ ನಿರುತ್ತರವಾದ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಸ್ಥಲಂಗಳನರಿದು ಆಚರಿಸುವಲ್ಲಿ ಮೂರನರಿದು ಮೂರ ಮರೆದು ಮೂರವೇದಿಸಿ ಐದ ಕಾಣಿಸಿಕೊಂಡು ಆರರ ಅರಿಕೆ ಹಿಂಗಿ ಮತ್ತಿಪ್ಪತ್ತೈದರ ಭೇದವಡಗಿ ಮತ್ತೊಂದರಲ್ಲಿ ಕಂಡೆಹೆನೆಂಬ ಸಂದು ಸಲೆ ಸಂದು ಒಂದಿ ಒಂದಾಹನ್ನಕ್ಕ ಗೋಪತಿನಾಥ ವಿಶ್ವೇಶ್ವರಲಿಂಗವೆಂಬ ಉಭಯನಾಮ ಬಿಡದು.
--------------
ತುರುಗಾಹಿ ರಾಮಣ್ಣ
ಮಾಂಸದೊಳಗಿದ್ದ ಕ್ಷೀರವ, ಕ್ಷೀರದೊಳಗಿದ್ದ ಬೆಸುಗೆಯ ಬಿನ್ನಾಣದಿಂದ ತೆಗೆದ ಬೆಣ್ಣೆಯ, ಆರೈದು ನೋಡಿ, ಕರಗಿ ಕಡೆಯಲ್ಲಿ ಮೀರಿ ಘೃತವಾದುದು ಪಶುವೋ, ಪಯವೋ, ದದ್ಥಿಯೋ ? ನವನೀತವೋ ? ಘೃತಸ್ವಯವೋ ? ಅಲ್ಲ ಬೆಸುಗೆಯ ಎಸಕವೋ ? ಇಂತೀ ಗುಣವೊಂದರಿಂದೊಂದೊಂದ ಕಂಡು ಕಾಣಿಸಿಕೊಂಬ ಮನೋನಾಥನ ಅನುವ ವಿಚಾರಿಸಿ ಮನ ಮನನೀಯ ಭಾವ ಭಾವನೆ ಧ್ಯಾನ ಪ್ರಮಾಣು ಪೂಜೆ ವಿಶ್ವಾಸ ಇವನರಿದುದು ಅರಿಕೆ. ಇಂತಿವನೆಲ್ಲವನೂ ತೆರದರಿಶನದಿಂದರಿದು ಬಿಟ್ಟುದ ಮುಟ್ಟದೆ, ಮುಟ್ಟಿದುದ ಮುಟ್ಟಿ ತನ್ನಷ್ಟ ಉಭಯಭ್ರಾಂತು ಹುಟ್ಟುಗೆಟ್ಟಲ್ಲಿ ಕಮಠೇಶ್ವರಲಿಂಗವು ತಾನಾದ ಶರಣ.
--------------
ಬಾಲಸಂಗಣ್ಣ
ಓದಿ ಬೋದ್ಥಿಸಿ ಇದಿರಿಗೆ ಹೇಳುವನ್ನಬರ ಚದುರತೆಯಲ್ಲವೆ ? ತಾ ತನ್ನನರಿದಲ್ಲಿ, ಆ ಅರಿಕೆ ಇದಿರಿಗೆ ತೋರಿದಲ್ಲಿ ಅದೆ ದೇವತ್ವವೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅಂಗೈಯದು ಹೆಂಗಳಾಗಿ, ನೋಡುವ ಕಂಗಳು ಪುರುಷನಾಗಿ ಉಭಯವನರಿವುದು, ಪ್ರಜಾಪತಿಯಾಗಿ. ಚಿದ್ಘನಶಕ್ತಿ ಯೋನಿಯಲ್ಲಿ ಕೂಡಿ, ಬಿಂದು ವಿಸರ್ಜನವಾಯಿತ್ತು. ಅದು ಲೀಯವಾಗಲ್ಪಟ್ಟುದು ಲಿಂಗವಾಯಿತ್ತು. ಅದು ಅಂಗೈಯಲ್ಲಿ ಅರಿಕೆ, ಕಂಗಳಿಂಗೆ ಕುರುಹು. ಮಂಗಳಮಯ ಅರ್ಕೇಶ್ವರಲಿಂಗವನರಿವುದಕ್ಕೆ ಇಷ್ಟದ ಗೊತ್ತೆ ? ಅರ್ಕೇಶ್ವರಲಿಂಗವು ತಾನು ತಾನೆ.
--------------
ಮಧುವಯ್ಯ
ಮೊದಲು ಬೀಜ ಬಲಿದು, ಕಡೆಯಲ್ಲಿ ಬೀಜ ಅಳಿದಲ್ಲದೆ ಅಂಕುರವಾಗದು. ಕ್ರೀಯಲ್ಲಿ ಆಚರಿಸಿ, ಅರಿವಿನಲ್ಲಿ ವಿಶ್ರಮಿಸಿ, ತುರೀಯ ಆತುರ ಸಮನವೆಂಬ ತ್ರಿವಿಧ ಲೇಪವಾಗಿ ಕಂಡ ಉಳುಮೆ, ಅರ್ಕೇಶ್ವರಲಿಂಗನ ಅರಿಕೆ.
--------------
ಮಧುವಯ್ಯ
ಮರನುರಿದು ಬೆಂದು ಕರಿಯಾದ ಮತ್ತೆ ಉರಿಗೊಡಲಾದುದ ಕಂಡು, ಆತ್ಮ ಪರಿಭವಕ್ಕೆ ಬಪ್ಪುದಕ್ಕೆ ಇದೆ ದೃಷ್ಟ. ಕರಿ ಭಸ್ಮವಾದ ಮತ್ತೆ ಉರಿಗೊಡಲಿಲ್ಲ, ಅರಿಕೆ ನಿಂದಲ್ಲಿ ಆತ್ಮ ಪರಿಭವಕ್ಕೆ ಬರಲಿಲ್ಲ, ಉರಿಯೊಳಗೊಡಗೂಡಿದ ತಿಲಸಾರ ತುಪ್ಪ ಮರಳಿ ಅಳೆತಕ್ಕುಂಟೆ ? ವಸ್ತುವಿನಲ್ಲಿ ಕರಿಗೊಂಡ ಚಿತ್ತ, ತ್ರಿವಿಧಮಲಕ್ಕೆ ಹೊರಳಿ ಮರಳುವದೆ ? ಈ ಗುಣ ನಡೆ ನುಡಿ ಸಿದ್ಧಾಂತವಾದವನ ಇರವು, ಗಾರುಡೇಶ್ವರಲಿಂಗವ ಕೂಡಿದವನ ಕೂಟ.
--------------
ಉಪ್ಪರಗುಡಿಯ ಸೋಮಿದೇವಯ್ಯ
ನಾ ನಿನ್ನನರಿವಲ್ಲಿ, ನೀನೆನ್ನ ಕೈಯಲ್ಲಿ ಅರಿಯಿಸಿಕೊಂಬಲ್ಲಿ, ಅದೇನು ಭೇದ ? ನಾನೆಂದಡೆ ನಿನ್ನ ಸುತ್ತಿದ ಮಾಯೆ. ನೀನೆಂದಡೆ ನನ್ನ ಸುತ್ತಿದ ಮಾಯೆ. ನಾ ನೀನೆಂಬಲ್ಲಿ ಉಳಿಯಿತ್ತು, ಅರ್ಕೇಶ್ವರಲಿಂಗನ ಅರಿಕೆ.
--------------
ಮಧುವಯ್ಯ
ಅಂಗ ಪಿಂಡದಲ್ಲಿ ತೋರುವ ನೆಲೆ ಆತ್ಮನೋ, ಅರಿವೋ ? ಎಂಬುದ ತಿಳಿದಲ್ಲಿ, ಅರಿದು ಮಾಡುವ ಅರಿಕೆ ಮರೆದಿಹಲ್ಲಿ ಮಗ್ನ. ಉಭಯವಂ ವಿಚಾರಿಸಿ ತೊಲಗಿದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಯಾದೆನೆಂಬ ಡಿಂಡೆಯ ಮತದ ಹಿರಿಯರುಗಳೆಲ್ಲಾ ನೀವು ಕೇಳಿರೊ. ಬಲೆಯೊಳಗಾದ ಹುಲಿಗೆ ಬಲಾತ್ಕಾರವುಂಟೆ? ಲಲನೆಯರ ಸಂಸರ್ಗದಲ್ಲಿ ಚಲನೆಯಿಲ್ಲದೆ ಬಿಂದುವುಂಟೆ? ಶಿಲೆಯೊಳಗಣ ಬೆಂಕಿಗೆ ಅಲಂಕಾರ ಉಂಟೆ? ಸಲಿಲದೊಳಗಣ ತೃಷ್ಣೆಗೆ ಅಪ್ಯಾಯನ ಉಂಟೆ? ಅರಿವನರಿದಂಗಕ್ಕೆ, ಮರವೆಗೆ ತೆರನುಂಟೆ? ತೆರನನರಿದು, ಹರಿದಲ್ಲಿಯೆ ಅರಿಕೆ ತಾನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತೃಣ ತ್ರಿಣಯನ ಹೆಡಗೈಯ ಕಟ್ಟಿತ್ತು. ಭಾವ ಕಾಲನ ಸಂಕಲೆಯನಿಕ್ಕಿತ್ತು. ಕುರುಹು ಅರಿವವರ ಕೈಯಲ್ಲಿ, ನೆರೆನಂಬಿ ಎಂದು ತೆರಪ ಹೇಳುತ್ತ, ಈ ಅರಿಕೆ ಇನ್ನಾವುದೊ ? ನುಡಿವಡೆ ಮಾತಿಂಗಗೋಚರ, ನಡೆವರಂಗಕ್ಕೆ ಅಗೋಚರ. ಇಂತಿವರೊಳಗೆ ಭಂಗಿತರಾಗಿ ಸಾವವರಿಗೇಕೆ ಲಿಂಗಾಂಗಸಂಯೋಗ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಬಟ್ಟೆಯ ಬಡಿವ ಕಳ್ಳಂಗೆ, ಬೇಹು ಸಂದು ಕಳವು ದೊರಕಿದಂತಾಯಿತ್ತು. ಕುರುಡನು ಎಡಹುತ್ತ ತಡಹಿ ಹಿಡಿದು ಕಂಡಂತಾಯಿತ್ತು. ನಿರ್ಧನಿಕ ಧನದ ಬಯಕೆಯಲ್ಲಿ ನಡೆವುತ್ತ ಎಡಹಿದ ಕಲ್ಲು ಪರುಷವಾದಂತಾಯಿತ್ತು. ಅರಸುವಂಗೆ ಅರಿಕೆ ತಾನಾದಂತಾಯಿತ್ತು. ಎಲೆ ಗುಹೇಶ್ವರಾ ನೀನು ಎನಗೆ ದೊರಕುವುದೆಂಬುದು, ನಾ ಮುನ್ನ ಮಾಡಿದ ಸುಕೃತದ ಫಲ ! ಏನ ಬಣ್ಣಿಪೆ ಹೇಳಾ ?
--------------
ಅಲ್ಲಮಪ್ರಭುದೇವರು
ಕಾಣೆನೆಂಬ ಅರಿಕೆ, ಕಂಡೆನೆಂಬ ಸಂತೋಷ. ಉಭಯವ ವಿಚಾರಿಸುವನ್ನಬರ ಮರವೆಯ ಬೀಜ. ಕಂಡೆನೆಂಬ ಕಾಣಿಕೆಯವನಲ್ಲ, ಕಾಣೆನೆಂಬ ಸಂಚಾರದವನಲ್ಲ. ಆ ಉಭಯದ ಅಂಗ ಲೇಪವಾದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಅರಿದೆಹೆನೆಂಬನ್ನಕ್ಕ ಆ ತುರಿಯ ಕಂಡೆಹೆನೆಂಬನ್ನಕ್ಕ ಆ ತುರಿಯ ಕಂಡೆನು ಎಂಬಲ್ಲಿ ಸಂದೇಹದ ಸಂದು ಆತುರವೆಂಬ ಅರಿಕೆ ತುರಿಯವೆಂಬ ಮೋಹ ಕಂಡೆನು ಎಂಬ ಸಂದೇಹದ ಸಂದು ನಿಂದಲ್ಲಿ ಅದು ನಿಜದುಳುಮೆ; ಗೋಪತಿನಾಥ ವಿಶ್ವೇಶ್ವರಲಿಂಗವೆ ಪ್ರಮಾಣು.
--------------
ತುರುಗಾಹಿ ರಾಮಣ್ಣ
ಅರಿವು ಕರಿಗೊಂಡಲ್ಲಿ ಇದರ ತೆರನನರಿಯಬೇಕು. ತನ್ನ ಮರೆಯಬೇಕು, ಲಿಂಗವನರಿಯಬೇಕು. ಅರಿದ ಮತ್ತೆ ಎರಡಕ್ಕೆ ತೆರಪಿಲ್ಲ, ಹಿಡಿವುದಕ್ಕೆ ಅಂಗವಿಲ್ಲ. ಅರಿವುದಕ್ಕೆ ಆತ್ಮವಿಲ್ಲ. ಬೇರೆ ಬಿಡುಗಡೆ ಇಲ್ಲವಾಗಿ, ಆ ಅರಿಕೆ ತಾನೆ ಶರಣನಲ್ಲಿ. [ಇದು] ನಿರ್ಲೇಪ, ಶರಣಸ್ಥಲ, ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->