ಅಥವಾ

ಒಟ್ಟು 22 ಕಡೆಗಳಲ್ಲಿ , 1 ವಚನಕಾರರು , 22 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವಸಾಗರವೆಂಬ ಸಮುದ್ರದಲ್ಲಿ, ಸಾಕಾರವೆಂಬ ಹಡಗು, ಚೇತನವೆಂಬ ಅಶ್ವಕಟ್ಟಿ ಬರುತ್ತಿರಲಾಗಿ, ತ್ರಿವಿಧದ ಬಲುಗಿರಿಯ ಹೊಯಿದು, ಹಡಗೊಡೆಯಿತ್ತು. ಲಾಯದ ಅಶ್ವ ನೀರನೊಡಗೂಡಿತ್ತು. ಹಡಗಿನ ಸೆಟ್ಟಿ ಪರಪತಿಗಡಹಿಲ್ಲಾಯೆಂದು ಕುದುರೆಯನೊಡಗೂಡಿದ. ಅರ್ಕೇಶ್ವರಲಿಂಗವ ಕೇಳುವ ಬನ್ನಿ.
--------------
ಮಧುವಯ್ಯ
ಕಾಳಿಂಗನ ಮಡುವ ಕಲಕಿದವನ ನಾಬ್ಥಿಯ ಕೂಸಿನ ಶಿರಪಾಣಿಯಲ್ಲಿ ಬೇಡುವ, ಆತನ ಶಕ್ತಿಯ ಸಮರಸದಲ್ಲಿ ಓಲಾಡುವ, ಮುಕ್ತಿವಂತರೆಲ್ಲರೂ ಕೇಳುವ ಬನ್ನಿ, ಅರ್ಕೇಶ್ವರಲಿಂಗವ.
--------------
ಮಧುವಯ್ಯ
ಬಂಧುಗಳ ಬೆಂಬಳಿಯ ಕಳ್ಳನ ಹೆಂಡತಿಗೆ ಭಗ ಮೂರು, ಬಾಯಾರು, ಪೃಷ್ಠ ಎಂಬತ್ತನಾಲ್ಕುಲಕ್ಷ. ರೋಮ ಎಂಟುಕೋಟಿ. ಹಲ್ಲು ಹದಿನಾರು, ನಾಲಗೆ ಏಳು. ಕಿವಿ ಇಪ್ಪತ್ತೈದು, ನಾಡಿ ಶತದಶ. ಮೂಗು ಮೂವತ್ತೇಳು, ಕಾಲೆಂಟು. ಭುಜವೆರಡು, ಕೈವೊಂದೆ. ಹಿಂದೆ ಮುಂದೆ ನೋಡುವ ಕಣ್ಣು, ಅಬ್ಥಿಸಂದ್ಥಿಯೊಳಗೆ ಒಂದೆ ಅದೆ. ಅರ್ಕೇಶ್ವರಲಿಂಗವ ಕಾಣಬಾರದು.
--------------
ಮಧುವಯ್ಯ
ಕಾಯವಳಿದು ಜೀವ ಬಯಲಾದಲ್ಲಿ, ಭಾವಿಸುವ ಅರಿವ ನೆಲೆಯ ಕುರುಹೆಲ್ಲಿದ್ದಿತ್ತು ? ಅದ ಕೇಳುವ ಬನ್ನಿ, ಅರ್ಕೇಶ್ವರಲಿಂಗವ.
--------------
ಮಧುವಯ್ಯ
ವನದ ಬಾಳೆಯ ಗೊನೆಯ ಹೊಯಿದ ಕಳ್ಳನ ಅಡಿವಜ್ಜೆಯಲ್ಲಿ ಹೋಗಿ, ಹೆಡಗುಡಿಯ ಕಟ್ಟಿ, ಬಾದ್ಥಿಸಿ, ಗೊನೆಯ ತೋರೆಂದಡೆ, ಗೊನೆ ಮನೆಯೊಳಗದೆಯೆಂದ. ಮನೆಯಾಕೆಯ ಕೇಳಿದಡೆ, ಗೊನೆಯ ನಾ ತಿಂದೆ, ಕಳ್ಳನ ತಲೆಯ ಕುಟ್ಟಿ, ಎನ್ನದು ಕೊಯಿದುಕೊಳ್ಳಿಯೆಂದಳು, ಅರ್ಕೇಶ್ವರಲಿಂಗವ ಬಲ್ಲಡೆ.
--------------
ಮಧುವಯ್ಯ
ಅಣ್ಣನ ಮೂರು ಕುತ್ತಿನಲ್ಲಿ, ಅಕ್ಕ ಮೂರು ಮಕ್ಕಳ ಹೆತ್ತು, ಅಪ್ಪನ ಕೈಯಲ್ಲಿ ಕೊಟ್ಟಳು. ಅಣ್ಣ ಹಣ್ಣಿದ ಜಗಳ. ಅಕ್ಕನ ಹೊಟ್ಟೆಯ ಕೇಡು. ಅಕ್ಕನ ಕೂಸು ಅಪ್ಪನ ತಿಂದು, ಎತ್ತ ಹೋಯಿತ್ತೆಂದರಿಯೆ. ಅರ್ಕೇಶ್ವರಲಿಂಗವ ಕೇಳುವ ಬನ್ನಿ.
--------------
ಮಧುವಯ್ಯ
ಕಾಯದ ಸೂತಕವ ನೋಟದಿಂದ ಕಳೆದು, ನೋಟದ ಸೂತಕವ ಭಾವದಿಂದ ಕಳೆದು, ಭಾವದ ಪ್ರಕೃತಿ[ಯ] ಜ್ಞಾನದಿಂದ ಕಳೆದು, ಜ್ಞಾನದ ಬೆಳಗು ನಿಂದಲ್ಲಿ, ಅರ್ಕೇಶ್ವರಲಿಂಗವ ಮುಟ್ಟಿದ ಮುಟ್ಟು.
--------------
ಮಧುವಯ್ಯ
ಲಿಂಗವನರಿತು ಅಂಗ ಲಯವಾಗಬೇಕು. ಅಂಕುರ ತೋರಿ ಬೀಜ ನಷ್ಟವಾದಂತೆ, ಸ್ವಯಂಭು ತೋರಿ ಪ್ರತಿಷ್ಠೆ ನಷ್ಟವಾದಂತೆ, ಅರ್ಕೇಶ್ವರಲಿಂಗವ ಅರಿದ ಗೊತ್ತಿನ ಒಲುಮೆ.
--------------
ಮಧುವಯ್ಯ
ಆಡಿನ ಕಾಲ ಕಡಿದು, ಕೋಡಗದ ಹಲ್ಲ ಕಿತ್ತು, ಉಡುವಿನ ನಾಲಗೆಯ ಒಡಗೂಡಿ ಕೂಡಿ ತಿಂದು, ಮತ್ತೊಡೆಯನನರಿಯಬೇಕು, ಅರ್ಕೇಶ್ವರಲಿಂಗವ.
--------------
ಮಧುವಯ್ಯ
ಬೆಲ್ಲವ ಮೆಲುವಾತನ ಹಲ್ಲು ಕಹಿಯಾಗಿ, ಹಲ್ಲು ಕಲ್ಲಿನೊಳಗಾಗಿ, ಅಲ್ಲಿಯೆ ಅಡಗಿ ನೋಡುತ್ತದೆ. ಅದ ನಾವು ನೀವು ಎಲ್ಲರೂ ಅರಿವ ಬನ್ನಿ, ಅರ್ಕೇಶ್ವರಲಿಂಗವ ಬಲ್ಲವರಹರೆ.
--------------
ಮಧುವಯ್ಯ
ನಾನೆಂದಡೆ ಸ್ವತಂತ್ರಿಯಲ್ಲ. ನೀನೆಂದು ಇದಿರಿಟ್ಟಲ್ಲಿ ಭಾವಕ್ಕೆ ಬ್ಥಿನ್ನ. ನಾನೆನಬಾರದು, ನೀನೆನಬಾರದು. ಅರ್ಕೇಶ್ವರಲಿಂಗವ ಏನೂ ಎನಬಾರದು.
--------------
ಮಧುವಯ್ಯ
ಬಾವಿಯ ನೆಳಲ ಬಗ್ಗಿ ನೋಡುವನಂತೆ, ಜೀವದಾಸೆ ನೋಟದ ಬೇಟ ಬಿಡದಂತೆ, ಸಂಸಾರದ ಘಾತಕತನ, ಅರಿವಿನ ಮಾತಿನ ಮಾಲೆ. ಉಭಯವ ನೇತಿಗಳೆಯದೆ ಅರಿಯಬಾರದು, ಅರ್ಕೇಶ್ವರಲಿಂಗವ.
--------------
ಮಧುವಯ್ಯ
ಸೂನೆಗಾರನ ಮನೆಯಲ್ಲಿ ಮೂವರು ಹಂದೆಗಳು ಹೊಕ್ಕು, ಹೇಳ ಹೆಸರಿಲ್ಲದೆ ಕೊಂದರೆಲ್ಲರ. ಸೂನೆಗಾರ ಏನೂ ಎನ್ನದೆಯಿದ್ದ, ಕೇಳುವ ಬನ್ನಿ, ಅರ್ಕೇಶ್ವರಲಿಂಗವ.
--------------
ಮಧುವಯ್ಯ
ಊರೆಲ್ಲರೂ ಕೂಡಿ, ಬೇಟೆಗೆ ಹೋಗಿ, ಹಾರುವನ ಕೊಂದರು. ತಲೆವುಳಿದು, ಕಾಲ ಕಂಡಿಸಿ, ಕರುಳಡಗಿತ್ತು. ಬೇಟೆ ಬೆಲೆಯಾದುದಿಲ್ಲ. ಕೇಳುವ ಬನ್ನಿ, ಅರ್ಕೇಶ್ವರಲಿಂಗವ.
--------------
ಮಧುವಯ್ಯ
ಮೂರುಲೋಕದ ದೈತೆ ಊರೆಲ್ಲರ ಕೊಂದು ತಿಂದು, ಬೇರೊಂದು ಠಾವಿನಲ್ಲಿ ಆಯಿದಾಳೆ. ಠಾವನರಿತು ದೈತೆಯ ದಾತ ಮುರಿದು, ಅನಿಹಿತವ ನೇತಿಗಳೆದು, ನಿಹಿತವು ತಾನಾದಡೆ, ಅರ್ಕೇಶ್ವರಲಿಂಗವ ಕೂಡಿದ ಕೂಟ.
--------------
ಮಧುವಯ್ಯ
ಇನ್ನಷ್ಟು ... -->