ಅಥವಾ

ಒಟ್ಟು 21 ಕಡೆಗಳಲ್ಲಿ , 12 ವಚನಕಾರರು , 19 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಯ್ಯೊಳಗಳ ಸಂಚ ಕಣ್ಣಿಗೆ ಮರೆಯಾದಂತೆ, ಎಲ್ಲರಿಗೆ ಚೋದ್ಯವಾಗಿ ತೋರುತ್ತಿಹುದು. ಆ ಪರಿಯಲ್ಲಿ ಅಸು ಘಟದ ಸಂಚವನರಿವ ಸಂಚಿತಾರ್ಥಿಗಳಂಗ, ಮಿಕ್ಕಾದ ಅಸು ಲೆಂಕರಿಗಿಲ್ಲ, ನಿಸ್ಸೀಮರಿಗಲ್ಲದೆ ಸದಾಶಿವಮೂರ್ತಿಲಿಂಗವಿಲ್ಲ.
--------------
ಅರಿವಿನ ಮಾರಿತಂದೆ
ಆದಿ ಮಧ್ಯ ಅವಸಾನ ಉಚಿತದ ಸಾವಧಾನವ ಎಚ್ಚರಿಕೆಯಲ್ಲಿ ಅಸು ಅಡರುವಾಗ ದೆಸೆದಿಕ್ಕಿನಲ್ಲಿ ಕುಚಿತ್ತ ಭಾವವಿಲ್ಲದೆ ಅಂತರಿಕ್ಷ ಸುಮಾನತೆಯಲ್ಲಿ, ದ್ವಾರದಲ್ಲಿ ನೀರೆಯ್ದುವಂತೆ, ಸ್ಫಟಲದಲ್ಲಿ ಪನ್ನಗ ಹೋಹಂತೆ, ಕುಸುಮದಲ್ಲಿ ಗಂಧ ಸಂಚಾರದಲ್ಲಿ ಸಂಗವ ಮಾಡಿದಂತೆ, ಮಿಂಚಿನಲ್ಲಿ ತೋರಿದ ಕುಡಿವೆಳಗಿನ ಗೊಂಚಲ ಸಂಚಲದಂತೆ, ಅಂಚೆ ಸೇವಿಸುವ ಪಯ ಉದಕದ ಹಿಂಚುಮುಂಚನರಿದಂತಿರಬೇಕು. ಸಂಚಿತ ಆಗಾಮಿ ಪ್ರಾರಬ್ಧಕ್ಕೆ ಹೊರಗಾದ ಮಹಂತನ ಐಕ್ಯದಿರವು. ಕಂಚಿನ ನಾದ ಸಂಚಾರ ಮುಂಚಿದಲ್ಲಿಯೆ ಲಯ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಕೆಲ ಜೀವದ ಒಲವು ತಲೆಯ ಕಡಿದು ಬೇರೆ ಮಾಡಿದಲ್ಲಿ ಆಡುತ್ತದೆ ಅಂಗ; ಮತ್ತೆ ನರಜೀವದ ಒಲವು ರುಜೆಯಡಸಿ ಪ್ರಾಣ ಬಿಟ್ಟಾಗ ಅಡಿ ಕರವಾದದ ಪರಿಯ ನೋಡಾ! ಘಟ ಜೀವವೊಂದೆಂಬರು ಅಸು ಬೇರಾಗಿದೆ. ಇದರ ಹುಸಿ ಕವಲ ಹೇಳಾ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಆಶನ ಹಸಿದು ಮನುಷ್ಯರ ನುಂಗುವಾಗ ಅಸು ಆರಿಗೆಂದು ಪ್ರಮಾಣಿಸಬಹುದೆ? ಉದಕದೊಳಗೆ ಮುಳುಗುತ್ತ ತಾ ಗತಿಗೆಡುತ್ತ ಆಸೆ ದೆಸೆಯನರಿಯದೆ ಲಘುವಿನ ಮೇಲೆ ಸಾಗುತಿರ್ಪ ಸಾಧನೆವಂತರ ಸಾಗಿಸಿ ಬದುಕು; ಕ್ರೀ ನಿಃಕ್ರೀಯೆಂಬುಭಯವ ಘಟಿಸಿ ಬದುಕು, ಕಾಲಾಂತಕ ಬ್ಥೀಮೇಶ್ವರಲಿಂಗ
--------------
ಡಕ್ಕೆಯ ಬೊಮ್ಮಣ್ಣ
ಅರಸು ಆಲಯವ ಹಲವ ಕಟ್ಟಿಸಿದಂತೆ, ಶರೀರದಲ್ಲಿ ಆತ್ಮನು ಹಲವು ನೆಲೆವುಂಟೆಂದು ತಿರುಗುತ್ತಿಹ ಭೇದವಾವುದು ಹೇಳಿರಯ್ಯಾ? ಆ ಘಟದೊಳಗಳ ಭೇದ: ಅಸು ಹಿಂಗಿದಾಗ ಘಟವಡಗಿತ್ತು, ಅರಸಿಲ್ಲದಾಗ ಆಲಯ ದೆಸೆಗೆಟ್ಟಿತ್ತು. ಅಳಿವುದೊಂದು, ಉಳಿದಿಹಲ್ಲಿ ಕಾಬುದೊಂದೆ ಭೇದ, ಸದಾಶಿವಮೂರ್ತಿಲಿಂಗವನರಿತಲ್ಲಿ.
--------------
ಅರಿವಿನ ಮಾರಿತಂದೆ
ಅಸಿಯ ಮೊನೆಯು ಮುರಿದಡೆ ಮಸೆದಡೆ ಮೊನೆಯಾಗದೆ ಅಯ್ಯಾ? ಅಸು ಮರೆದಡೆ ಆತ್ಮನನರಿದಡೆ ಕೇಡುಂಟೆ ಅಯ್ಯಾ? ಮರೆವುದು ಅರಿವುದು ಎರಡುಳ್ಳನ್ನಕ್ಕ, ಮರೆಯದೆ ಪೂಜಿಸು ಸದಾಶಿವಮೂರ್ತಿಲಿಂಗವ.
--------------
ಅರಿವಿನ ಮಾರಿತಂದೆ
ಅಂಗವ ಕಳೆದು ನಿಂದ ವಿಹಂಗವೈರಿಯಂತೆ, ಅಂಗಕ್ಕೆ ಅಸು ಹೊರತೆಯಾಗಿ ನಿಂದುದು. ಅದರಂಗ ಶುದ್ಧ, ಅದರಂದವಿರಬೇಕು. ತ್ರಿವಿಧವ ಹಿಡಿದ ಚಂದ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಅರಿದು ಮರೆಯಲಿಲ್ಲ, ಕುಕ್ಕುರಜ್ಞಾನವಾಗಿ. ಇದಿರ ಕಂಡು ತಾ ಕಾಣದಂತೆ ಇರಲಿಲ್ಲ, ಗತಿಜಿಹ್ವೆಯ ಚತುಃಪಾದಿಯಂತೆ. ಕಾಲವನರಿತು, ಆ ಕಾಲದಲ್ಲಿ ಹೋಹ ಕಾಲಜ್ಞಾನಿಯಂತೆ, ಕೂಗಿ ಕರೆದು, ಕೂಲಿಸಿಕೊಂಬ ಶತಬುದ್ಧಿಪತಿ ಶಿವನಂತೆ, ಮಾಡಿದ ಅಸಿ ಕಾರುಕನೆಂದಡೆ, ಹೊಯಿದಡೆ, ಅಸುವಿನ ನಿಸಿತವ ಕೊಳದೆ ? ತನ್ಮಯವಾದಡೆ, ಮರೆದಡೆ, ಎಳೆಯದೆ ಬಿಡದು, ನಿನ್ನ ಮಾಯೆ. ಆರಿ ನಂದದ ದೀಪದಂತೆ, ರವೆಗುಂದದ ಬೆಳಗಿನಂತೆ, ಹೊರಹೊಮ್ಮದ ದಿನಕರನಂತೆ, ಮಧುಋತು ಅರತ ಮಧುಕರನಂತೆ, ವಾಯು ಅಡಗಿದ ವಾರಿಧಿಯಂತೆ, ಅಸು ಅಡಗಿದ ಘಟಚಿಹ್ನದಂತೆ, ದಿಟಕರಿಸು, ಗುಡಿಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ ಪರಿಪೂರಿತವಾಗಿರು.
--------------
ಮನುಮುನಿ ಗುಮ್ಮಟದೇವ
ಕಸುಗಾಯಲ್ಲಿ ಹಣ್ಣಿನ ರಸವನರಸಿದರುಂಟೆ, ಅಯ್ಯಾ? ಶಿಶು ಗರ್ಭದಲ್ಲಿ ಬಲಿವುದಕ್ಕೆ ಮೊದಲೆ ಅಸು ಘಟಿಸಿದುದುಂಟೆ, ಅಯ್ಯಾ? ಮಾಡುವ ಆಚರಣೆಮಾರ್ಗ ಭಾವಶುದ್ಧವಾಗಿ ನೆಲೆಗೊಳ್ಳದೆ ಕಾಮ್ಯದಲ್ಲಿ ಕಾಮ್ಯಾರ್ಥ ನೆಲೆಗೊಂಬ ಪರಿಯಿನ್ನೆಂತೊ? ಸೂಜಿಕಲ್ಲು ಸೂಜಿಯನರಸುವಂತೆ, ಉಭಯಕ್ಕೆ ಬಾಯಿಲ್ಲದೆ ಕಚ್ಚುವ ತೆರನ ನೋಡಾ, ಅಯ್ಯಾ! ಶಿಲೆ ಲೋಹದಿಂದ ಕಡೆಯೆ ನಿಮ್ಮಯ ಅರಿವಿನ ಭೇದ? ಅದರ ಮರೆಯ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಅಂಗದಲ್ಲಿದ್ದು ಅವಧಾನಿಯಾಗಿ, ಭಾವದಲ್ಲಿದ್ದು ಭವಚ್ಛೇದನವಾಗಿ, ಸುಖದಲ್ಲಿದ್ದು ಅಸು ಅಂತಕನಾಗಿ, ಸಕಲಭೋಗಂಗಳಲ್ಲಿದ್ದು ಭೋಗವಿರಾಗನಾಗಿ, ಬಂಕೇಶ್ವರಲಿಂಗವ ನೋಡುತ್ತಿದ್ದು ನೋಡದಂತಿರು, ಮನ ಘನದಲ್ಲಿ ನಿಂದು.
--------------
ಸುಂಕದ ಬಂಕಣ್ಣ
ಒಂದು ಉಪ್ಪರಿಗೆಯ ಮಂದಿರದಲ್ಲಿ, ಉಭಯದ ಮಧ್ಯದ ಬಾಗಿಲಲ್ಲಿ, ಕಟ್ಟಿದ್ದಿತ್ತೊಂದು ಬಲುಗೋಡಗಕ್ಕೆ ಬಾಯ ಅಣಲಿನ ಸಂಚದ ಕೂಳು. ಉಡಿಯೊಳಗಣ ಬೆಂಬೆಯ ಹಂಬು, ಹಂಬಿನೊಳಗಣ ಬಹುಧಾನ್ಯದ ತೆನೆ, ನೆಟ್ಟ ಗಳೆ ಮೂರು, ತಿಪ್ಪಣದ ಮಣೆ ಒಂದು, ಮಣೆಯಲ್ಲಿ ಕುಳಿತು ಅಣಲ ಸಂಚವ ತಿಂದಿತ್ತು. ಒಂದು ಮಣೆಯಲ್ಲಿ ಕುಳಿತು ಉಡಿಯ ತೆನೆಯ ತಿಂದಿತ್ತು. ಮತ್ತೊಂದು ಮಣೆಗೆ ಹೋಗಿ, ಕುಳಿತು ಹಾರೈಸಿ ದೆಸೆಯ ಕಾಣದೆ ನೆಗೆಯಲಾಗಿ, ಗಣೆ ದಸಿ ತಾಗಿ, ಕೋಡಗನ ಅಸು ಹೋಯಿತ್ತು, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವನರಿದೆ.
--------------
ಮನುಮುನಿ ಗುಮ್ಮಟದೇವ
ಪಶು ವಾಹನವ ಕಟ್ಟುವುದಕ್ಕೆ ನೆಟ್ಟಗೊತ್ತಿಲಿಲ್ಲದೆ ಕಟ್ಟಲಿಲ್ಲ. ಅಸು ಆತ್ಮನ ಕಟ್ಟುವ ಗೊತ್ತು, ಇಷ್ಟದ ನಿಷೆ*ಯಿಂದ ಸ್ಥಾಣು ಕಟ್ಟುವಡೆಯಬೇಕು. ಇದು ನಿಶ್ಚಯವೆಂದರಿ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ
--------------
ಮೆರೆಮಿಂಡಯ್ಯ
ಹಲವು ಧಾನ್ಯವನುಂಡವರ ಸಲಗೆಡದಿದೆ ಅಸು. ಫಲ ರಸಸಾಳಿ ಸುಭಿಕ್ಷವ ಕೊಂಡು ಅಸು ಗೆಲದಿದೆ. ಇಂತೀ ಒಲವರವೇಕೆ ನಿನಗೆ, ಕೆಲವರ ಅಳಿಸಿ, ಕೆಲವರ ನಗಿಸಿ ? ಬಲವಂತತನವೆ ನಿನಗಿದು ? ಬಲುಹೇಕೆ ಭಕ್ತರೊಳು, ನಿನ್ನಯ ನೆರೆ ನಂಬುವ ಶರಣರೊಳು ? ಬಿಡು, ಕಲ್ಲಿನೊಳಗಣ ಮರೆಯ, ತೆರೆಯ ತೆಗೆ. ಅಲೇಖನಾದ ಶೂನ್ಯ, ಸಮಗಂಡಿರು ಎಲ್ಲರುವ.
--------------
ವಚನಭಂಡಾರಿ ಶಾಂತರಸ
ಉಡುವಿನ ನಾಲಗೆ ಮದಾಳಿಯ ಕಾಲು ಮಾರನ ಕಣ್ಣು ಮನ್ಮಥನ ಬಾಣ ಸಾರಥಿಯ ರೂಪು ಸಕಲರ ಸಂಗದಲ್ಲಿ ವಿಕಳತೆಗೊಂಬ ಪಶುಗಳಿಗುಂಟೆ? ರಸಾಳದ ಅಸು ನಾರಾಯಣಪ್ರಿಯ ರಾಮನಾಥನಲ್ಲಿ ಅರಿದು ಮರೆದೊರಗಿದವಂಗಲ್ಲದೆ.
--------------
ಗುಪ್ತ ಮಂಚಣ್ಣ
ಕಂಗಳ ಮಧ್ಯದ ಮಲೆಯಲ್ಲಿ, ಒಂದು ನಿಸ್ಸಂಗಶೃಂಗಿ ಮೇವುತ್ತದೆ. ಅಂಬೊಂದು, ಹಿಳುಕು ಮೂರು, ಅಲಗಾರು, ಮೊನೆ ಅಯಿದು ಕೂಡಿದಲ್ಲಿ, ಧನು ನಾಲ್ಕು ಹಿಡಿದು, ನಾರಿಯೆಂಟ ಕೂಡಿ, ಶರಸಂಧಾನದಲೆಸೆಯೆ, ಶೃಂಗಿ ಬಿದ್ದಿತ್ತು, ಅಸು ಬದುಕಿತ್ತು, ಅರ್ಕೇಶ್ವರಲಿಂಗವನರಿದ ಕಾರಣ.
--------------
ಮಧುವಯ್ಯ
ಇನ್ನಷ್ಟು ... -->