ಅಥವಾ

ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಣ್ಣ ತುಳಿದು ಮಡಿಕೆಯ ಮಾಡಿ ಆವಿಗೆಯನೊಟ್ಟಿ ಸುಡುವಲ್ಲಿ, ಅಗ್ನಿ ಸುಟ್ಟು ಮಡಿಕೆ ಉಳಿಯಿತ್ತು, ಹರವಿಯ ಉಪಚಾರುಳ್ಳವಂಗೆಕೊಟ್ಟು. ಉಪಚಾರಿಲ್ಲದವನ ಕೊಂದು, ಗುಡುಮಿಯ ಉಪಚಾರ ಇಲ್ಲದವಂಗೆ ಕೊಟ್ಟು ಉಪಚಾರುಳ್ಳವನ ಕೊಂದು, ಕಿಡಿಕಿಯ ಕುಲಗೇಡಿಗೆ ಕೊಟ್ಟು, ಭವಗೇಡಿಯ ಕೊಂದು, ಮೂರೆರಡು ಮಡಕಿಯ ಆರೂರವರಿಗೆ ಕೊಟ್ಟು ಈರಾರು ಈರೆಂಟು ಕೊಂದು, ಉಳಿದ ಮಡಕಿಯ ಊರೆಲ್ಲ ಮಾರಲು, ಊರು ಸುಟ್ಟು ಜನರೆಲ್ಲ ಸತ್ತು, ಸತ್ತವರ ಹೊತ್ತು ಸತ್ತು ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮೂರಾರು ಕಂಡಿಕಿ ದಂಡಿಗಿಗೆ ಮೂರಾರು ಬಟ್ಟಗಾಯ ಕಟ್ಟಿ, ಈರೆಂಟು ಮೆಟ್ಟಿ, ಆರೊಂದು ತಂತಿಯ ಹೂಡಿ, ಕರವ ಕಟ್ಟಿ, ಬಿರಡಿಯ ತಿರುಹಿ, ಮೂರು ಬೆರಳಿನಲ್ಲಿ ಕಿನ್ನರಿಯ ಹೊಡೆದು ಬೀದಿಬಾಜಾರದಲ್ಲಿ ತಿರುಗುತ್ತಿರುವಲ್ಲಿ, ತಿರುಗುವದ ಜೋಗಿ ಕಂಡು ಕಕ್ಕನ ಕಿನ್ನರಿಯಕಾಯನೊಡೆದು ದಂಡಗಿಯ ಮುರಿದುಹಾಕಿತ್ತು. ತಂತಿಯ ಹರಿದು, ಬಿರಡಿಯನುಚ್ಚಿ, ಕುದುರಿಯ ಸುಟ್ಟು, ಬೆರಳ ಮುರಿದು ಡೋಹಾರನ ಕೊಂದು, ಡೋಹಾರ ಕಕ್ಕಯ್ಯನ ಮನೆಯಲ್ಲಿ ಜೋಗಿ ಅಡಗಲು, ಅಡಗಿದ ಜೋಗಿಯು ಸತ್ತು, ಡೋಹಾರ ಕಂಡು ಎದ್ದು ಕಾಯಕವ ಮಾಡುತಿರ್ದರಯ್ಯ ನಿಮ್ಮ ಶರಣರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಜಂಬೂದ್ವೀಪ ಕಡವರ ದ್ವೀಪ, ಮಧ್ಯಗಿರಿ, ಪಾತಾಳಕ್ಕೆ ಬೇರುವರಿದು ಈರೆಂಟು ಲಕ್ಷಯೋಜನ ಪರಿಪ್ರಮಾಣ, ಮೇಲೇಳಿಗೆಯಲ್ಲಿ ಎಂಬತ್ತುನಾಲ್ಕು ಲಕ್ಷ ಯೋಜನ ಪರಿಪ್ರಮಾಣ, ನಾಚಯ್ಯಪ್ರಿಯ ಚೆನ್ನರಾಮನಾಥನ ಗಣಂಗಳ ಒಡ್ಡೋಲಗ ಮೂವತ್ತಾರುಲಕ್ಷ ಯೋಜನ ವಿಸ್ತೀರ್ಣ.
--------------
ಅನಾಮಿಕ ನಾಚಯ್ಯ
-->