ಅಥವಾ

ಒಟ್ಟು 5 ಕಡೆಗಳಲ್ಲಿ , 4 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವರಿಗೆಂದು ಬಂದ ದ್ರವ್ಯ ಮತ್ತೆ ಸಂದೇಹವಾಯಿತ್ತೆಂದು ಹಾಕೆಂದಾಗವೆ ಘನಲಿಂಗಕ್ಕೆ ದೂರ. ಬೇಹುದಕ್ಕೆ ಮೊದಲೆ ಸಂದೇಹವನಳಿದು ತರಬೇಕಲ್ಲದೆ ಉಂಡು ಊಟವ ಹಳಿಯಲುಂಟೆ ! ತಂದುಕೊಟ್ಟು ಕುಲವನರಸಲುಂಟೆ ! ಇಂತಿವರು ತಮ್ಮಂಗ ವ್ರತವನರಿಯದೆ ಇದಿರ ವ್ರತದಂಗ ತಪ್ಪಿತೆಂದು ಕೊಂಡಾಡುವರ ಕಂಡು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರು ಕಂಡಹರೆಂದು ಅಂಜುತ್ತಿದ್ದನು.
--------------
ಅಕ್ಕಮ್ಮ
ನಲ್ಲನ ಕೂಡಿದ ಸುಖವೆಲ್ಲವ ಮೆಲ್ಲನೆ ಉಸುರುವೆ ಕೇಳಿರವ್ವಾ. ಏಳು ನೆಲೆಯ ಮಣಿಮಾಡದ ಮಾಣಿಕ್ಯಮಂಟಪದುಪ್ಪರಿಗೆಯ ಮೇಲೆ ಚಪ್ಪರ ಮಂಚವ ಹಾಸಿ, ಒಪ್ಪುವ ಊಟವ ನೀಡಿ, ಕರ್ಪೂರವೀಳ್ಯವ ಕೊಟ್ಟು, ಲಜ್ಜೆಗೆಟ್ಟು ನಾಚಿಕೆಯ ತೊರೆದು, ತನು ಜಜ್ಜರಿತವಾಗಿ, ತೆಕ್ಕೆ ಚುಂಬನಾದಿಗಳಿಂದ ಅಮರ್ದಪ್ಪಿ ಅಸ್ಥಿಗಳು ನುಗ್ಗುನುರಿಯಾಗಿ ಮನದ ಪರಿಣಾಮ ಹೊರಹೊಮ್ಮಿ ಪರಮಾನಂದ ಮಹಾಪರಿಣಾಮದ ಸುಗ್ಗಿಯೊಳಗೆ ಪರವಶಗೊಂಡಿರ್ದೆನು ಅಖಂಡೇಶ್ವರನೆಂಬ ನಲ್ಲನ ಕೂಡಿ.
--------------
ಷಣ್ಮುಖಸ್ವಾಮಿ
ಹಸಿದು ತಾರಕೆ ಊಟವ ಕೇಳಹೋದಡೆ ಕೂಟವೆದ್ದು ಬಡಿದರು. ಸಾಕಾರ ಮೊದಲು ಧಾತುಗೆಟ್ಟೆಯಲ್ಲಾ. ಪರಶಿವ ಆತ್ಮನಾಗಿ ಇದೇತಕ್ಕೆ ಬಂದೆ ತನುವಿನಾಶೆಗಾಗಿ. ಇದರಾಶೆಯ ಹೊಗದಿರು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು.
--------------
ಘಟ್ಟಿವಾಳಯ್ಯ
ಭೂಮಿಯ ನೆಳಲಲ್ಲಿ ಉಂಬುತ ತಾಯ ಬೆಳಗಿನಲ್ಲಿರ್ದು ಮೂರು ಬಣ್ಣದ ಗಿರಿಯನೇರಿ, ಮೂರೈದು ಗತಿಯಿಂದೆ ಉರಿಯಮಂದಿರದೊಳಗಿರ್ಪ ಬಯಲಶೃಂಗಾರವ ಕಾಣಬಹುದೆ? ಭೂಮಿಯ ನೆಳಲ ಸುಟ್ಟು, ಊಟವ ಮೀರಿ, ತಾಯ ಕೊಂದು, ಬೆಳಗನುರುಹಿ, ಗಿರಿಯಬಣ್ಣವ ಕಳೆದು, ಮೇಲಕ್ಕೆ ನೋಡಿ ನಿಂದಲ್ಲಿ ಬಿಳಿಯ ಕುರುಹ ಕಂಡುಕೊಂಡು ಮೂರೈದು ಗತಿಯನರಿದು, ಎರಡು ಕಾಣದೆ ನಡೆದು ನಿಂದಲ್ಲಿ ಉರಿಯಮಂದಿರದೊಳಗಿರ್ಪ ಬಯಲಶೃಂಗಾರವ ಕಾಣಬಹುದು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸರದ ಸಾರದ ನಿಸ್ಸಾರಾಯವ ನಿರುತವಲ್ಲೆಂದು ಅರಿತು ಅರಿಯರು ಹಿರಿಯರೆನಿಸಿಕೊಂಬ ನರತರುಗಳು ಇವರೆತ್ತ ಬಲ್ಲರು? ಹಸಿವಿಲ್ಲದೆ ಮುನ್ನಲುಂಡ ಊಟವ ನಸೆಯಿಲ್ಲದೆ ಆಪ್ಯಾಯನವರಿಯರು. ಹುಸಿಯಲಿ ನುಸುಳುವರಿಗೆ ತನ್ನ ವಶಕೆ ತರಲಿನ್ನಿಲ್ಲವಿನ್ನೆಂತೊ? ಭರಿತವೆಂಬರು ಭಾವಕ್ಕಿಂಬಿಲ್ಲ, ಮರೆಯಲ್ಲಿ ಕುಲವ್ಯಸನ ಭ್ರಮೆಯವರರಿವಿನಲ್ಲಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಎಂಬರು.
--------------
ಘಟ್ಟಿವಾಳಯ್ಯ
-->