ಅಥವಾ

ಒಟ್ಟು 4 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೊಳೆದು ಕಂಡೆಹೆನೆಂದಡೆ ಅಂಗದವನಲ್ಲ. ಪೂಜಿಸಿ ಕಂಡೆಹೆನೆಂದಡೆ ಮಂಡೆಯವನಲ್ಲ. ಊಡಿಸಿ ಕಂಡೆಹೆನೆಂದಡೆ ಬಾಯವನಲ್ಲ. ಅವರು ಮೂವರು ನೆರಿಕೆಯೊಳಗಿರ್ದಡೆ, ಆ ನೆರಿಕೆಯ ಹೊರಗಿರ್ದು ಬರುಕಾಯನಾದೆಯಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇಂದು ಭಾನುವನೊಂದುಗೂಡಿಸಿ, ಬಿಂದು ನಾದವನೊಂದುಮಾಡಿ, ಅವರಲ್ಲಿ ತಂದಿರಿಸಿದ ಜೀವ ಪ್ರಾಣಂಗಳನು. ಅವರೊಳಗೆ ಕರಣೇಂದ್ರಿಯಗಳ ಹುರಿಗೊಳಿಸಿ, ನಾಡಿ ಚಕ್ರಂಗಳಿಂದ ಜಂತ್ರವ ಹೂಡಿ ನಿಲಿಸಿ, ತಾಯಿ ಉಂಡ ಅನ್ನರಸವ ನಾಭಿಸೂತ್ರದಲ್ಲಿ ಶಿಶುವಿಗೆ ಊಡಿಸಿ, ಜೀವಿಸಿದ ಶಿಶುವ ಯೋನಿಮುಖದಿಂ ಹೊರವಡಿಸಿ, ತಾಯಿಯ ಸ್ತನದಲ್ಲಿ ಅಮೃತವ ತುಂಬಿ ಊಡಿಸಿ, ಸಲಹುವ ದೇವನ ಮರೆವ ಜೀವರಿಗೆ ಇನ್ನಾವಗತಿಯೂ ಇಲ್ಲಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಭಕ್ತಿಯ ಭಾವನಿಷೆ* ನಿಬ್ಬೆರಸಲಾಗಿ ಶಿವನ ತನ್ನ ವಶವ ಮಾಡಿತ್ತು ಭಕ್ತಿ. ಶಿವನ ನಡೆಸಿತ್ತು ಭಕ್ತಿ. ನುಡಿಸಿತ್ತು ಭಕ್ತಿ. ಶಿವನನುಣಿಸಿ ಊಡಿಸಿ ತೊಡಿಸಿತ್ತು ಭಕ್ತಿ. ಶಿವನ ಹಾಡಿಸಿ, ಕುಣಿದಾಡಿಸಿತ್ತು ಭಕ್ತಿ. ಇಂತಲ್ಲದೆ ವಿರಕ್ತಿಯಿಲ್ಲ. ಜ್ಞಾನವಿಲ್ಲ. ಇದು ಕಾರಣ, ಭಕ್ತಿಯೇ ಮುಕ್ತಿಯ ಜನನಿ, ತಾನೆ ಬೇರಿಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಜವನೆಯ್ದುವಡೆ, ಭಕ್ತಿಯಿಂದಲ್ಲದಾಗದು.
--------------
ಸ್ವತಂತ್ರ ಸಿದ್ಧಲಿಂಗ
-->