ನೀರನೆರೆಯದೆ ಒಂದು ಮರನಾಯಿತ್ತು ನೋಡವ್ವಾ;
ಆ ಮರಕ್ಕೆ ಊಧ್ರ್ವಶಾಖೆ ಅಧಃಶಾಖೆ ಟೊಂಗೆಗಳಾದವು
ನೋಡವ್ವಾ;
ಮತ್ತನಂತ ಪರ್ಣಂಗಳಾದವು.
ಊಧ್ರ್ವಶಾಖೆಯ ನೋಡಹೋದಡೆ, ಅಧಃಶಾಖೆ ಕಾಣಬಾರದು;
ಅಧಃಶಾಖೆಯ ನೋಡಹೋದಡೆ, ಊಧ್ರ್ವಶಾಖೆ ಕಾಣಬಾರದು.
ಅದು ವಿಚಾರಿಸಿ ನೋಡಿದಡೆ ಒಂದೆಯಾಗಿಹುದು.
ಇದರ ಕುರುಹ ನೋಡಿ ನಿಬ್ಬೆರಗಾದೆ ನೋಡವ್ವಾ,
ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ.