ಅಥವಾ

ಒಟ್ಟು 4 ಕಡೆಗಳಲ್ಲಿ , 1 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿರಕ್ತನಾದಡೆ ಮನೆಯ ಹೊಂದಿ ಎಲ್ಲರಲ್ಲಿರಬೇಕು. ವಿರಕ್ತನಾದಡೆ ಊರನಾಶ್ರಯಿಸಿ ಮನೆ, ಮನೆ ಬ್ಥಿಕ್ಷವ ಬೇಡಬೇಕು. ವಿರಕ್ತನಾದಡೆ ಅರಣ್ಯ ಪರ್ವತ ಕಮಳಸರೋವರ ನದಿಗಳಲ್ಲಿರಬೇಕು. ವಿರಕ್ತನಾದಡೆ ದೇಶಬಿಟ್ಟು ಪರದೇಶಕ್ಕೆ ಹೋಗಬೇಕು. ವಿರಕ್ತನಾದಡೆ ಮಂಡೆಬೋಳಾಗಿ ನೀರ ಬೂದಿಯ ಧರಿಸಿ ಅಂಗದ ಮೇಲೆ ಲಿಂಗವಕಟ್ಟಿ ತಿರುಗಬೇಕು. ಇಂತೀ ಭೇದವ ತಿಳಿಯಬಲ್ಲರೆ ವಿರಕ್ತನೆಂಬೆ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ವಿರಕ್ತನಾದೆನೆಂಬರು, ವಿರಕ್ತನ ಬಗೆಯ ಪೇಳ್ವೆ. ವಿರಕ್ತನಾದಡೆ ಮನೆಯ ಹೊಂದಿ ಎಲ್ಲರಲ್ಲಿ ಇರಲಾಗದು. ವಿರಕ್ತನಾದಡೆ ಊರನಾಶ್ರಯಿಸಿ ಮನೆಮನೆಯ ತಿರುಗಿ ಬ್ಥಿಕ್ಷವ ಬೇಡಲಾಗದು. ವಿರಕ್ತನಾದಡೆ ದೇಶ ಬಿಟ್ಟು ಪರದೇಶಕ್ಕೆ ಹೋಗಲಾಗದು. ವಿರಕ್ತನಾದಡೆ ಅರಣ್ಯಪರ್ವತದಲ್ಲಿರಲಾಗದು. ವಿರಕ್ತನಾದಡೆ ಮೇರುಪರ್ವತದ ಕಮಲಸರೋವರದಲ್ಲಿರಲಾಗದು. ವಿರಕ್ತನಾದಡೆ ಊರೂರು ತಿರುಗಲಾಗದು. ಪುಣ್ಯದೇಶಕ್ಕೆ ಹೋಗಲಾಗದು. ಇಂತಿಲ್ಲದಿರಬಲ್ಲರೆ ವಿರಕ್ತನೆಂಬೆನಯ್ಯ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹರಕರವಿಯ ಹುರಿಯಿಲ್ಲದ ದಾರದಲ್ಲಿ ಹೊಲಿದು, ಹೊಲಿದ ಕೂಲಿಯ ಕೊಡುವರು. ಊರನಾಶ್ರಯಿಸಿ ಅರಣ್ಯದಲ್ಲಿ ಚರಿಸುವರು. ಹರಕರವಿಯ ಹೊಲಿಯದೆ ಹುರಿಗೂಡಿದ ದಾರವ ಬಿಚ್ಚದೆ ಹರಿಯದೆ ಹೊಸ ಅರಿವೆಯ ಹೊಲಿದು, ಹೊಲಿದ ಕೂಲಿಯ ಕೊಳ್ಳದವರು ಊರನಾಶ್ರಯಿಸಿ ಅರಣ್ಯದಲ್ಲಿ ಚರಿಸದೆ ಬಯಲುಭೂಮಿಯಲ್ಲಿ ಚರಿಸಿ ಆರಿಗೂ ಸಿಕ್ಕದೆ ಇರ್ಪರು ನೋಡೆಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->