ಹರಕರವಿಯ ಹುರಿಯಿಲ್ಲದ ದಾರದಲ್ಲಿ ಹೊಲಿದು,
ಹೊಲಿದ ಕೂಲಿಯ ಕೊಡುವರು.
ಊರನಾಶ್ರಯಿಸಿ ಅರಣ್ಯದಲ್ಲಿ ಚರಿಸುವರು.
ಹರಕರವಿಯ ಹೊಲಿಯದೆ ಹುರಿಗೂಡಿದ ದಾರವ ಬಿಚ್ಚದೆ
ಹರಿಯದೆ ಹೊಸ ಅರಿವೆಯ ಹೊಲಿದು,
ಹೊಲಿದ ಕೂಲಿಯ ಕೊಳ್ಳದವರು
ಊರನಾಶ್ರಯಿಸಿ ಅರಣ್ಯದಲ್ಲಿ ಚರಿಸದೆ
ಬಯಲುಭೂಮಿಯಲ್ಲಿ ಚರಿಸಿ ಆರಿಗೂ ಸಿಕ್ಕದೆ
ಇರ್ಪರು ನೋಡೆಂದನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.