ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ನಾರಗೋಣಿಯ ಮೂಲೆಯ ಹೊಲಿದು,ನೀರ ಭಂಡವ ತುಂಬಿದರಯ್ಯಾ,ಊರೊಳಗೈವರು ಕಳ್ಳರು ಸಾರಲೀಯರು, ಧರ್ಮವಿಲ್ಲಯ್ಯಾ.ಊರ[ಸೂರೆ]ಗೊಳ್ಳದ ಮುನ್ನಕೂಡಿಕೊಳ್ಳಿ ಕೂಡಲಸಂಗಮದೇವನ.
ಊರೊಳಗೈವರು ಮಕ್ಕಳು.ಹಲಬರು ಆಡಹೋಗಿ ಅಡವಿಯ ಹೊಕ್ಕರಲ್ಲಯ್ಯಾ.ನೋಡಹೋದವರು ಕಣ್ಣುಗೆಟ್ಟು ಕಾಡ ಕೂಡಿದರಲ್ಲಯ್ಯಾ.ಸೌರಾಷ್ಟ್ರ ಸೋಮೇಶ್ವರನ ನಿಜವನರಿಯದೆ ವ್ಯರ್ಥರಾದರಲ್ಲಯ್ಯಾ.