ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಗೋಣಿಯ ಮೂಲೆಯ ಹೊಲಿದು, ನೀರ ಭಂಡವ ತುಂಬಿದರಯ್ಯಾ, ಊರೊಳಗೈವರು ಕಳ್ಳರು ಸಾರಲೀಯರು, ಧರ್ಮವಿಲ್ಲಯ್ಯಾ. ಊರ[ಸೂರೆ]ಗೊಳ್ಳದ ಮುನ್ನ ಕೂಡಿಕೊಳ್ಳಿ ಕೂಡಲಸಂಗಮದೇವನ.
--------------
ಬಸವಣ್ಣ
ಊರೊಳಗೈವರು ಮಕ್ಕಳು. ಹಲಬರು ಆಡಹೋಗಿ ಅಡವಿಯ ಹೊಕ್ಕರಲ್ಲಯ್ಯಾ. ನೋಡಹೋದವರು ಕಣ್ಣುಗೆಟ್ಟು ಕಾಡ ಕೂಡಿದರಲ್ಲಯ್ಯಾ. ಸೌರಾಷ್ಟ್ರ ಸೋಮೇಶ್ವರನ ನಿಜವನರಿಯದೆ ವ್ಯರ್ಥರಾದರಲ್ಲಯ್ಯಾ.
--------------
ಆದಯ್ಯ
-->