ಅಥವಾ

ಒಟ್ಟು 5 ಕಡೆಗಳಲ್ಲಿ , 2 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭೃತ್ಯನಾದಲ್ಲಿ ಕರ್ತೃವಿನ ಕೈಯ ಊಳಿಗವ ಕೊಂಬ ಭಕ್ತರ ಕಂಡು ನಾಚಿತ್ತೆನ್ನ ಮನ. ಆಳುವ ಅರಸಿನ ಕೈಯಲ್ಲಿ ಊಳಿಗವ ಕೊಂಬಂತೆ, ತೊತ್ತು ಒಡತಿಯ ಕೈಯಲ್ಲಿ ಭೃತ್ಯತ್ವವ ಮಾಡಿಸಿಕೊಂಬಂತೆ, ಮೊದಲಿಗೆ ಮೋಸ ಲಾಭವನರಸಲುಂಟೆ ? ಅರ್ತಿಗಾರರೆಲ್ಲಕ್ಕೆ ನಿಶ್ಚಯದ ಭಕ್ತಿಯುಂಟೆ ? ಹೊತ್ತುಹೋಕರ ಭಕ್ತರೆಂದಡೆ, ಒಪ್ಪುವರೆ ನಿಚ್ಚಟಶರಣರು ? ಅಚ್ಚು ಮುರಿದ ಹಾರಕ್ಕೆ ಎತ್ತಿನ ಹಂಗೇಕೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುರುವಿದ್ದಂತೆ ಪರರಿಗೆ ನೀಡಬಹುದೆ ? ಮನೆಯ ಆಕಳು ಉಪವಾಸ ಇರಲಾಗಿ ಪರ್ವತಕ್ಕೆ ಸೊಪ್ಪೆಯ ಹೊರಬಹುದೆ ? ಎಂಬ ಪರವಾದಿ ನೀಕೇಳು. ಗುರುವು ಶಿಷ್ಯಂಗೆ ಲಿಂಗವಕೊಟ್ಟು ತಾನು ವ್ರತಗೇಡಿಯಾಗಿ ಹೋಗುವಲ್ಲಿ ಪರರ ಪಾದೋದಕ ಪ್ರಸಾದದಿಂದ ಪವಿತ್ರನಾದಕಾರಣ, ್'ಪರರ ಕಂಡರೆ ತನ್ನಂತೆ ಕಾಣು' ಎಂದು ಗುರುವು ಹೇಳಿದ ವಾಕ್ಯವ ಮರೆದಿರಲ್ಲ ! ಅಳಿಯ ಒಡೆಯರು, ಮಗಳು ಮುತ್ತೈದೆ, ಮನೆದೇವರಿಗೆ ಶರಣೆಂದರೆ ಸಾಲದೆ ? ಎಂಬ ಅನಾಚಾರಿಗಳ ಮಾತು ಅದಂತಿರಲಿ. ಜಂಗಮದೇವರ ಪ್ರಾಣವೆಂಬ ಭಕ್ತರು ಲಿಂಗಜಂಗಮದ ಕೈಯ ಹೂವು, ಹಣ್ಣು, ಕಾಯಿ, ಪತ್ರೆ, ಹೋಗುವ ಬರುವ ಊಳಿಗವ ಕೊಂಬಾತ ಭಕ್ತನಲ್ಲ. ಅಲ್ಲಿ ಪೂಜೆಗೊಂಬಾತ ಜಂಗಮವಲ್ಲ ಇವರು ನಾಯಕ ನರಕಕ್ಕೆ ಯೋಗ್ಯರಯ್ಯಾ. ಇವರಿಬ್ಬರ ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ.
--------------
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಭಕ್ತರೆಂಬವರೆಲ್ಲರೂ ಲೆಕ್ಕಕ್ಕೆ ಹಾಯ್ದು, ದೃಷ್ಟವಪ್ಪ ಜಂಗಮದ ಕೈಯಲೂ ಕಷ್ಟತನವಹ ಊಳಿಗವ ಕೊಂಡು, ಮತ್ತೆ ಜಂಗಮವೆಂದು ಪ್ರಸಾದವನಿಕ್ಕಿಸಿಕೊಂಡುಂಬ ಸಿಕ್ಕಿಸುಗಾರರ ನೋಡಾ. ಇಂತೀ ಹೊಟ್ಟೆಯ ಹೊರೆವ ಜಂಗಮಕ್ಕೆಯೂ ಠಕ್ಕಿಂದ ಮಾಡುವ ಭಕ್ತಂಗೆಯೂ ಹುಚ್ಚುಗೊಂಡ ನಾಯಿ ಒಡೆಯನ ತಿಂದು, ಅದರಲ್ಲಿ ಮಿಕ್ಕುದ ನರಿ ತಿಂದಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಹಾಭಕ್ತರು ಮಾಡುವ ಅಭ್ಯಾಸ, ಕ್ರೀ ಲೇಸಿನ ಭಕ್ತಿಯ ಕೇಳಿರಣ್ಣಾ. ಜಂಗಮದ ಕೈಯಲ್ಲಿ ಅಸಿ ಕೃಷಿ ವಾಣಿಜ್ಯ ಮುಂತಾದ ಊಳಿಗವ ಮಾಡಿಸಿಕೊಂಡು, ಪ್ರಸಾದವ ಕೊಂಬ ಪಂಚಮಹಾಪಾತಕರ ಅಂಗಳವ ಮೆಟ್ಟಿದಡೆ, ಸಂಗದಲ್ಲಿ ನುಡಿದಡೆ ಕುಂಭೀಪಾತಕ. ಅವರ ಹಿಂಗದಿರ್ದಡೆ ಲಿಂಗವಿಲ್ಲ, ಜಂಗಮವಿಲ್ಲ, ಪಂಚಾಚಾರ ಶುದ್ಧಕ್ಕೆ ದೂರ. ಇದು ಕಾರಣ, ಮಾಟಕೂಟದವರೆಲ್ಲಾ ಜಗದಾಟದ ಡೊಂಬರೆಂದೆ. ಈಶನಾಣೆ ತಪ್ಪದು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
-->