ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಬ್ರಹ್ಮ ಅವ್ವೆಯ ಗಂಡನಾದ.ವಿಷ್ಣು ಅಕ್ಕನ ಗಂಡನಾದ.ರುದ್ರ ಕಿರುತಂಗಿಯ ಗಂಡನಾದ.ಈ ಮೂವರ ಹೋಬಳಿ ಇದೇನು ಚೋದ್ಯ!ಇಂತಿವು ಮಾಯಾಮಲಯೋನಿ ಸಂಬಂಧ.ಏಕಗುಣ ಭಾವ, ತರುಕೊಂಬು ಫಲದಂತೆ.ಸಾಕು ಸಂಸರ್ಗ, ಆತುರವೈರಿ ಮಾರೇಶ್ವರಾ.
ಬೀಜದಲ್ಲಿ ಅಂಕುರವಿದ್ದಂತೆ ಏಕಡಗಿದೆ ?ಮತ್ತೆ ಮೊಳೆದೋರಿ ಹಲವು ರೂಪಿಗೆ ಕಡೆಯಾದೆ.ಇರಿಸಿದಲ್ಲಿ ಏಕಗುಣ, ಬಿತ್ತಿದಲ್ಲಿ ಹಲವುಗುಣದಂತಾದೆ.ಉಭಯದ ಹೊಲಬ ತಿಳಿದು,ಪೂರ್ವ ಉತ್ತರವೆಂಬ ಉಭಯದ ಗೊತ್ತ ಮುಟ್ಟದೆ,ನಿಶ್ಚಯವಾಗಬೇಕು, ನಿಃಕಳಂಕ ಮಲ್ಲಿಕಾರ್ಜುನಾ.