ಒಟ್ಟು 6 ಕಡೆಗಳಲ್ಲಿ , 3 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ದೀಪವಖಿಲಲೋಕದಲ್ಲಿ ಏಕವಾಗಿಪ್ಪಳೆಏಕಯ್ಯಾ ಮರುಗುತಿಪ್ಪರು?ಅಯ್ಯಾ, ಆಕಾರವನು ನಂಬದೆಅಯ್ಯಾ, ನಿಕಾರದೊಳಗೆ ಇಹರು,ಏಕದೇವನೆಂದು ಹೊಗಳುವಶ್ರುತಿಯ ಆಯರಿದು ಜಪಿಸಿದೆಕಪಿಲಸಿದ್ಧಮಲ್ಲಿನಾಥನಾ ಅವ್ವೆ.
ಪರಿಭವಕ್ಕೆ ಬಪ್ಪ ಪರಮಾಣು ನೀನಲ್ಲ.ಕುರುಹಿಂಗೆ ಬಂದ ಸೀಮ ನೀನಲ್ಲ.ಏಕಯ್ಯ ನಿನಗೆ ಪ್ರಾಪಂಚಿಕವು?ಆನಂದಮಧ್ಯದ ಅಪರವಾಗಿ,ಅಪರಮಧ್ಯದಲಿ ಪೂರ್ವನಾಗಿಆ ಪೂರ್ವಕ್ಕೆ ಒಡೆಯ ನೀನೆಯಾಗಿಪ್ಪೆ.ಆರಯ್ಯಾ ಬಲ್ಲರು ನಿನ್ನ ಪರಿಯ?ಶರಣಸತಿ ಲಿಂಗಪತಿಯಾಗಿದ್ದವರು ಬಲ್ಲರು.ಏಕಂಗನಿಷ್ಠಾಪರರು ಅವರು ಬಲ್ಲರು.ಕಪಿಲಸಿದ್ಧ ಮಲ್ಲಿಕಾರ್ಜುನಯ್ಯಾ ಏಕಯ್ಯಾ,ಓಡಿದೆಯೆಂದು ನಂಬುಗೆಗೊಡುವಂತೆ ಕರಂಗೊಟ್ಟರು.
ಲೋಕದ ಲೋಕಿಗಳು ಏಕಯ್ಯಾ ನುಡಿವರುಲೋಕನಾಥನಿಪ್ಪ ಠಾವನರಿಯರು.ಕಲ್ಲೊಳಗೆ ಹೇಮ, ಕಾಷ*ದೊಳಗಗ್ನಿ,ತಿಲದೊಳು ತೈಲ, ಜಲದೊಳು ಮುತ್ತು,ಹಾಲೊಳು ತುಪ್ಪ, ಸ್ಥಲದೊಳಗೆ ರತ್ನವಿಪ್ಪ ಪರಿಯಲ್ಲಿನೀವಿಪ್ಪ ಭೇದವ ನರರೆತ್ತ ಬಲ್ಲರೈ,ಕಪಿಲಸಿದ್ಧಮಲ್ಲಿಕಾರ್ಜುನಾ.
ಈ ಕೈಯಲೆ ಸುಖವು, ಈ ಕೈಯಲೆ ದುಃಖವು.ಏಕಯ್ಯಾ, ನೀ ನಮ್ಮ ಬರಿದೆ ಬಳಲಿಸುವೆನಾನಾರ ಸೇರುವೆನಯ್ಯಾ ಆರೂ ಇಲ್ಲದ ದೇಸಿಗ ನಾನು,ಕೂಡಲಸಂಗಮದೇವಾ.
ದುಡ್ಡಿನ ಲಿಂಗವು ಮೋಕ್ಷವ ಕೊಡಬಲ್ಲಡೆ,ಅಡ್ಡ ಬೀಳುವುದೇಕಯ್ಯಾ ಗುರುವಿಗೆ?ಜಡ್ಡಳಿದ ಭಕ್ತಂಗೆ ಭಕ್ತಿಯ ಜಡ್ಡು ಏಕಯ್ಯಾ ಗುರುವೆ,ಮಡ್ಡು ಡಿಂಡಿಮನಾದಪ್ರಿಯ ಕಪಿಲಸಿದ್ಧಮಲ್ಲಿಕಾರ್ಜುನಾ.
ಪೃಥ್ವಿ ಜಡನೆಂದರಿದವಂಗೆ ಸ್ಥಾವರಾದಿಗಳಲ್ಲಿ ಎರಗಲೇಕಯ್ಯಾ ?ಅಪ್ಪು ಜಡನೆಂದರಿದವಂಗೆ ತೀರ್ಥಸ್ನಾನಂಗಳಲ್ಲಿ ಅತಿಶಯವೇಕಯ್ಯಾ ?ತೇಜ ಜಡನೆಂದರಿದವಂಗೆ ಹೋಮ ಸಮಾಧಿಗಳೇಕಯ್ಯಾ?ವಾಯು ಜಡನೆಂದರಿದವಂಗೆ ಧ್ಯಾನ ಮೌನಂಗಳ ಹಿಡಿಯಲೇಕಯ್ಯಾ ?ಆಕಾಶ ಜಡನೆಂದರಿದವಂಗೆ ಮಂತ್ರ(ತ್ರಾ ?)ರೂಡಿs ಏಕಯ್ಯಾ ?ಇನಿತೂ ಜಡನೆಂದರಿದವಂಗೆ ವಿಧಿ ಕಿಂಕರತೆ ಇಲ್ಲವಯ್ಯಾ ?ಗುಹೇಶ್ವರನ ನಿಜವು ಇದು ತಾನೆಂದರಿದ ಮಹಾತ್ಮಂಗೆ.