ಶುಕ್ಲಪರ್ವತದಲ್ಲಿ ಒಂದು ಮತ್ತಗಜ ಬಿಟ್ಟಾಡುತ್ತಿದೆ.
ಕಟ್ಟಿಗೆ ಸಿಕ್ಕದು, ಪ್ರತಿಗಜದೊತ್ತಿಗೆ ಬಾರದು.
ಅದು ಚಿತ್ತಜನ ಮಾತಂಗ.
ಹೇಮಕೂಟ ರಸ, ಮೊತ್ತದ ಕೋಲುಮೆ.
ಗಣಿಕೆಯರ ಏಕಾಂತದ ವಾಸ, ಚಿತ್ರಜ್ಞನ ಚಿತ್ತದ ಲೆಕ್ಕಣಿಕೆಯ ಕಡ್ಡಿ.
ಇಂತೀ ಭಿತ್ತಿಯನರಿದ ಚಿತ್ತದ ಮತ್ತಮಾತಂಗವನೊತ್ತಿ ಮುರಿ,
ಬಂಕೇಶ್ವರಲಿಂಗವನರಿವುದಕ್ಕೆ.