ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಸುರಿನ ಪರಿಮಳವಿರಲು ಕುಸುಮದ ಹಂಗೇಕಯ್ಯಾ? ಕ್ಷಮೆ ದಮೆ ಶಾಂತಿ ಸೈರಣೆಯಿರಲು ಸಮಾಧಿಯ ಹಂಗೇಕಯ್ಯಾ? ಲೋಕವೆ ತಾನಾದ ಬಳಿಕ ಏಕಾಂತದ ಹಂಗೇಕಯ್ಯಾ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಶುಕ್ಲಪರ್ವತದಲ್ಲಿ ಒಂದು ಮತ್ತಗಜ ಬಿಟ್ಟಾಡುತ್ತಿದೆ. ಕಟ್ಟಿಗೆ ಸಿಕ್ಕದು, ಪ್ರತಿಗಜದೊತ್ತಿಗೆ ಬಾರದು. ಅದು ಚಿತ್ತಜನ ಮಾತಂಗ. ಹೇಮಕೂಟ ರಸ, ಮೊತ್ತದ ಕೋಲುಮೆ. ಗಣಿಕೆಯರ ಏಕಾಂತದ ವಾಸ, ಚಿತ್ರಜ್ಞನ ಚಿತ್ತದ ಲೆಕ್ಕಣಿಕೆಯ ಕಡ್ಡಿ. ಇಂತೀ ಭಿತ್ತಿಯನರಿದ ಚಿತ್ತದ ಮತ್ತಮಾತಂಗವನೊತ್ತಿ ಮುರಿ, ಬಂಕೇಶ್ವರಲಿಂಗವನರಿವುದಕ್ಕೆ.
--------------
ಸುಂಕದ ಬಂಕಣ್ಣ
-->