ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನಾ ರಸಂಗಳಲ್ಲಿ ಅರಿದ ಕಿಸಲಯ ಒಂದರಲ್ಲಿ ನಿಂದುದಿಲ್ಲ. ಸಂದಿಲ್ಲದ ಸವಿಯನರಿವುದು. ಅದೊಂದೆ ಭೇದ ಸಂದಿತ್ತು, ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಸ್ಥಲ ಏಕೀಕರವಾಯಿತ್ತು.
--------------
ಬಿಬ್ಬಿ ಬಾಚಯ್ಯ
ಜಂಗಮವೆಂದು ಭಕ್ತನಾಶ್ರಯಕ್ಕೆ ಹೋದಲ್ಲಿ ಉಪಾಧಿಕನಂಗೀಕರಿಸಿ ಮಜ್ಜನ ಭೋಜನ ಪರಿಮಳಂಗಳಲ್ಲಿ ಕೀಳಾಗಿ ಪೂಜಿಸುವಲ್ಲಿ ಮೇಲಾದ ಪರಿಯಿನ್ನೆಂತಯ್ಯಾ? ಆತ ಮಾಡುವುದಕ್ಕೆ ಮುನ್ನವೆ ಬೇಡದಿಪ್ಪುದೆ ವಸ್ತುಗುಣ. ಆತ ಕಾಡುವುದಕ್ಕೆ ಮುನ್ನವೆ ಮಾಡುತ್ತಿಪ್ಪುದೆ ಭಕ್ತಿಗುಣ. ಉಭಯದಾರೈಕೆಯನರಿದು ಆರೈದಾಗಲೆ ಉಭಯಸ್ಥಲ ನಿರುತ. ಆ ಗುಣವಾದಲ್ಲಿ ಉಭಯ ಏಕೀಕರವಾಯಿತ್ತು. ಕಾಲಾಂತಕ ಭೀಮೇಶ್ವರಲಿಂಗವನರಿದಲ್ಲಿ.
--------------
ಡಕ್ಕೆಯ ಬೊಮ್ಮಣ್ಣ
-->