ಅಥವಾ

ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನೊಂದೂರಿಗೆ ಹಾದಿಯ ಕೇಳಿಕೊಂಡು ಹೋಗುತ್ತಿರಲಾಗಿ, ಮುಂದೆ ಅರಣ್ಯದೊಳಗೆ ಮೂರುಬಟ್ಟೆಯಾಯಿತ್ತು. ಎರಡು ಪಥವ ಬಿಟ್ಟು, ಒಂದು ಪಥವ ಹಿಡಿದು ಬರಲಾಗಿ, ಮುಂದೆ ಮೂರು ಬಟ್ಟೆಯೂ ಒಂದಾದವು. ಆ ಮೂರು ಬಟ್ಟೆ ಕೂಡಿದ ಬಳಿಯಲೊಂದು ಬೆಟ್ಟ ಹುಟ್ಟಿತ್ತು. ಆ ಬೆಟ್ಟವ ಏರಬಾರದು, ಇಳಿಯಬಾರದು. ಆ ಬೆಟ್ಟವ ಬಿಟ್ಟು ಹೋದಡೆ ಎನಗೆ ಪಥವಿಲ್ಲಾಯೆಂದು ಸುತ್ತಿಸುತ್ತಿ ನೋಡುತ್ತಿರಲಾಗಿ, ಆರು ಮೆಟ್ಟಿನದೊಂದು ಏಣಿ ಹಾಕಿರುವುದ ಕಂಡೆ. ಆ ಏಣಿಯ ಮೆಟ್ಟಿ ಮೆಟ್ಟಿ, ಆ ಬೆಟ್ಟದ ತುಟ್ಟತುದಿಯನೇರಿ ನೋಡಲಾಗಿ, ಬಟ್ಟಬಯಲಾಗಿದ್ದಿತು. ಆ ಬಟ್ಟಬಯಲೊಳಗೆ ಹತ್ತಿ ಹೋಗುತ್ತಿರಲಾಗಿ, ನಾನೆತ್ತ ಹೋದೆನೆಂದರಿಯೆನಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಭಾನುವಿನ ಅಂಗಮಧ್ಯದಲ್ಲಿ ಒಂದು ಏಣಿ. ಏಣಿಗೆ ಮೂರು ಕಾವು, ಮೆಟ್ಟಿ ಹತ್ತುವುದಕ್ಕೆ ಮೆಟ್ಟು ಎಂಬತ್ತುನಾಲ್ಕುಲಕ್ಷ. ಅದ ತಾಳಲಾರದೆ ಏಣಿ ಜಾರಿತ್ತು, ಕಾವು ಮುರಿಯಿತ್ತು. ಹಲ್ಲು ಎಲ್ಲಿಗೆ ಹೋದವೆಂದು ಕಾಣಬಾರದು, ಸಗರದ ಬೊಮ್ಮನೊಡೆಯ ತನುಮನ ಸಂಗವಾಗಿ ಕುರುಹಡಗಿದ ಕಾರಣ.
--------------
ಸಗರದ ಬೊಮ್ಮಣ್ಣ
-->