ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಷ್ಟಲಿಂಗವ ಪೂಜಿಸಿದರಾಗಿ ನಿಷೆ* ನೆಲೆಗೊಳ್ಳದು. ಬಹುಲಿಂಗವ ಪೂಜಿಸಿ ಭ್ರಮಿತರಾದರು. ಅನ್ಯಲಿಂಗವ ಪೂಜಿಸಿ ಭಿನ್ನರಾದರು. ಸ್ಥಾವರ ಲಿಂಗವ ಪೂಜಿಸಿ ಸಾವಿಗೊಳಗಾದರು ಬಳ್ಳ ಲಿಂಗವೆಂದು ಪೂಜಿಸಿ ಏನುವನರಿಯದೆ ಹೋದರು. ಗುಹೇಶ್ವರನೆಂಬ ಲಿಂಗವ ಪೂಜಿಸಿ ನಿಮ್ಮ ಶರಣರು ಅಲ್ಲಿಗಲ್ಲದೆ ಇಲ್ಲಿಗಲ್ಲದೆ ಹೋದರು ನೋಡಾ.
--------------
ಅಲ್ಲಮಪ್ರಭುದೇವರು
ವರ್ಷಾಕಾಲದಿ ಭೂಮಿ ಬೆದೆಗೊಂಡಲ್ಲಿ ಬಿತ್ತುವರು. ಅಂಕುರಿಸಿ ಬಂದಲ್ಲಿ ಪರ್ಣವಾಗುವ ವಿಚಾರ ಮುಂದುಗೊಂಡಿಪ್ಪುದು. ಪರ್ಣಗಂಡ ಮತ್ತೆ, ಹೊಡೆ ಕುಸುಮ ದೃಷ್ಟದಾಗಿಂಗೆ ವಿಚಾರ ಮುಂದುಗೊಂಡಿಪ್ಪುದು, ಹೊಡೆಕುಸುಮಗಂಡ ಮತ್ತೆ ಮೊದಲೆಂಬ ವಿಚಾರ ಮುಂದುಗೊಂಡಿಪ್ಪುದು. ಮೊದಲಗಂಡ ಮತ್ತೆ ಏನುವನರಿಯದೆ ತಾನಾಗಿರ್ದ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮಂತೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹೊತ್ತಾರಿನ ಹೊತ್ತು ಮಲಮೂತ್ರ ವಿಸರ್ಜನಕ್ಕೆ ಹೋಯಿತ್ತು. ಮಧ್ಯಾಹ್ನದ ಹೊತ್ತು ಹಸಿವು ತೃಷೆಗೆ ಹೋಯಿತ್ತು. ಮೂರನೆಯ ಜಾವದ ಹೊತ್ತು ಹೊಟ್ಟೆತುಂಬಿದ ಬಳಿಕ, ಕಾಯದ ಕಳವಳವ ಕೈಕೊಂಬುದಯ್ಯಾ. ಇರುಳಾದ ಬಳಿಕ ನಿದ್ರೆಗೈದು, ಬೆಳಗಾಹನ್ನಬರ ಸತ್ತಂತಿಹೆನು ಹೆಣನಾಗಿ ಏನುವನರಿಯದೆ. ಅಯ್ಯಾ, ನಿಮ್ಮ ನೆನೆವವರ ಚರಣಕ್ಕೆ ಶರಣೆಂಬೆನಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
-->