ಅಥವಾ

ಒಟ್ಟು 9 ಕಡೆಗಳಲ್ಲಿ , 1 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂಬತ್ತು ಮಂದಿರದೊಳಗೆ ತುಂಬಿಕೊಂಡಿರ್ಪ ಮಹಾಘನಲಿಂಗವ ಕಂಡೆನಯ್ಯ. ಆ ಲಿಂಗದ ಸಂಗದಿಂದ ಒಬ್ಬ ಸತಿಯಳು ನಿಂದು, ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ ಐದಂಗವ ಗರ್ಭೀಕರಿಸಿಕೊಂಡು ನಿತ್ಯನಿಜದಾರಂಭಕ್ಕೆ ಹೋಗಿ ಪರವಶವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತತ್ವಮಸಿ ವಾಕ್ಯದಿಂದತ್ತತ್ತ ಸ್ವಯಂಜ್ಯೋತಿಲಿಂಗವಿಪ್ಪುದು ನೋಡಾ. ಆ ಲಿಂಗದ ಸಂಗದಿಂದ ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ ಐದಂಗವ ಗರ್ಭೀಕರಿಸಿಕೊಂಡು ನಿತ್ಯನಿಜದಾರಂಭಕೆ ಹೋಗಿ ಪರವಶನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಐದು ಮನೆಯಲ್ಲಿ ಒಬ್ಬ ಸತಿಯಳು ನಿಂದು, ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವೆಂಬ ಐದಂಗವ ಗರ್ಭೀಕರಿಸಿಕೊಂಡು ಅತ್ತತ್ತಲೆ ಪರಕೆಪರವಾಗಿರ್ದಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆತ್ಮನೆಂಬ ಬೆಳಗಿನಿಂದತ್ತತ್ತ ನಿರಾತ್ಮನೆಂಬ ಲಿಂಗವು, ಅನಂತಕೋಟಿ ಸೋಮಸೂರ್ಯರ ಬೆಳಗನೊಳಕೊಂಡು, ಸತ್ತು ಚಿತ್ತಾನಂದ ನಿತ್ಯ ಪರಿಪೂರ್ಣವೆಂಬ ಐದಂಗವ ಗರ್ಭೀಕರಿಸಿಕೊಂಡು ಚಿದಾನಂದಸ್ವರೂಪ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಬರದ ಮನೆಯೊಳಗೆ ಗಾಂಭೀರ್ಯತ್ವದ ಅಂಗನೆಯ ಕಂಡೆನಯ್ಯ. ಆಕೆಯ ಸಂಗದಿಂದ ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ ಐದಂಗವ ಗರ್ಭೀಕರಿಸಿಕೊಂಡು ಪರವಶದಲ್ಲಿ ನಿಂದು, ಪರಕೆ ಪರವನೈದಿದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸಾವಿರ ಕಂಬದ ಮುತ್ತಿನಮಂಟಪದೊಳಗೆ ಒಬ್ಬ ಸತಿಯಳು ನಿಂದಿರುವುದ ಕಂಡೆನಯ್ಯ. ಆ ಸತಿಯಳ ಸಂಗದಿಂದ ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ ಐದಂಗವ ಗರ್ಭೀಕರಿಸಿಕೊಂಡು ನಿರಂಜನ ದೇಶಕೆ ಹೋಗಿ ನಿರಪೇಕ್ಷಲಿಂಗದಲ್ಲಿ ಕೂಡಿ ನಿಸ್ಸಂಗಿ ನಿರಾಳನಾದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಗುರುವು ಕಾಯಸುಖಿಯ ಮಾಡಿದನಯ್ಯ. ಲಿಂಗವು ಜೀವಸುಖಿಯ ಮಾಡಿದನಯ್ಯ. ಜಂಗಮವು ಪ್ರಾಣಸುಖಿಯ ಮಾಡಿದನಯ್ಯ. ಇಂತೀ ತ್ರಿವಿಧ ಭೇದವನರಿತು, ಜ್ಞಾನಶಕ್ತಿಯ ಸಂಗವ ಮಾಡಿ, ನಿತ್ಯವಾದ ಲಿಂಗದ ಗುಡಿಗೆ ಹೋಗಿ, ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವೆಂಬ ಐದಂಗವ ಗರ್ಭೀಕರಿಸಿಕೊಂಡು ನಿರಪೇಕ್ಷಲಿಂಗದಲ್ಲಿ ಕೂಡಿ ನಿಃಪ್ರಿಯವಾದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ ಐದಂಗವ ಗರ್ಭೀಕರಿಸಿಕೊಂಡು, ನಿತ್ಯವಿಡಿದು, ಪಶ್ಚಿಮಚಕ್ರದಲ್ಲಿಪ್ಪ ನಿರಂಜನಜ್ಯೋತಿಯ ಬೆಳಗನೊಳಕೊಂಡು ಸಾಜಸಮಾಧಿಯಲ್ಲಿ ನಿಂದು ನಿರಂಜನಲಿಂಗವನಾಚರಿಸುತಿಪ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪೃಥ್ವಿ-ಅಪ್ಪು-ತೇಜ-ವಾಯು-ಆಕಾಶವೆಂಬ ಐದಂಗವ ಒಂದು ಹಂಸ ನುಂಗಿ ಸುಳಿದಾಡುತಿಪ್ಪುದು ನೋಡಾ! ಆ ಹಂಸಂಗೆ ಮೂವರು ಮಕ್ಕಳು ಹುಟ್ಟಿ ಆರು ಕೇರಿಗಳಲ್ಲಿಪ್ಪರು ನೋಡಾ. ಆ ಆರು ಕೇರಿಗಳಲ್ಲಿ ಹಾರಿ ಆಡುವ ಹಾರುವಿತಿಯ ಕೊಂದು, ಏಕೋಮನೋಹರನೆಂಬ ಪೂಜಾರಿಯು ನಿಶ್ಚಿಂತ ನಿರಾಕುಳಲಿಂಗದಲ್ಲಿ ನಿಂದು ತಾನು ತಾನಾಗಿ ಪೂಜೆಗೊಂಬ ಪರಿಯೆಂತು ಹೇಳಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
-->