ಗುರುವು ಕಾಯಸುಖಿಯ ಮಾಡಿದನಯ್ಯ.
ಲಿಂಗವು ಜೀವಸುಖಿಯ ಮಾಡಿದನಯ್ಯ.
ಜಂಗಮವು ಪ್ರಾಣಸುಖಿಯ ಮಾಡಿದನಯ್ಯ.
ಇಂತೀ ತ್ರಿವಿಧ ಭೇದವನರಿತು, ಜ್ಞಾನಶಕ್ತಿಯ ಸಂಗವ ಮಾಡಿ,
ನಿತ್ಯವಾದ ಲಿಂಗದ ಗುಡಿಗೆ ಹೋಗಿ,
ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವೆಂಬ ಐದಂಗವ ಗರ್ಭೀಕರಿಸಿಕೊಂಡು
ನಿರಪೇಕ್ಷಲಿಂಗದಲ್ಲಿ ಕೂಡಿ
ನಿಃಪ್ರಿಯವಾದನಯ್ಯ ನಿಮ್ಮ ಶರಣನು
ಝೇಂಕಾರ ನಿಜಲಿಂಗಪ್ರಭುವೆ.