ಒಟ್ಟು 8 ಕಡೆಗಳಲ್ಲಿ , 2 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಗ್ಘವಣಿಯ ತಂದು ಮಜ್ಜನವ ಮರೆದವನ,ಪುಷ್ಪವ ತಂದು ಪೂಜೆಯ ಮರೆದವನ,ಓಗರವ ತಂದು ಅರ್ಪಿತವ ಮರೆದವನ,ಲಿಂಗವ ಕಂಡು ತನ್ನ ಮರೆದವನ,ಮಹಾಘನವ ಒಳಕೊಂಡಿತ್ತು ಗುಹೇಶ್ವರ.
ಹಿಂದಣ ಅನಂತವನೂ, ಮುಂದಣ ಅನಂತವನೂಒಂದು ದಿನ ಒಳಕೊಂಡಿತ್ತು ನೋಡಾ !ಒಂದು ದಿನವನೊಳಕೊಂಡು ಮಾತಾಡುವಮಹಂತನ ಕಂಡು ಬಲ್ಲವರಾರಯ್ಯ ?ಆದ್ಯರು ವೇದ್ಯರು ಅನಂತ ಹಿರಿಯರು,ಲಿಂಗದಂತುವನರಿಯದೆ ಅಂತೆ ಹೋದರು ಕಾಣಾ ಗುಹೇಶ್ವರಾ !
ಮುಕ್ತಿಗೆ ಮುಖವಾಗಿ ಯುಕ್ತಿಗೆ ಹೊರಗಾಗಿಅರಿವಿಂಗೆ ಅರಿವಾಗಿಪ್ಪ ಭೇದವುಎನಗೆ ಕಾಣಬಂದಿತ್ತು ನೋಡಾ.ನಿನ್ನ ಒಳಗ ಒರೆದು ನೋಡಿದಡೆ,ಒರೆದೊರೆಯಿಲ್ಲದ ಚಿನ್ನದ ಪರಿಮಳ ಎನ್ನ ಮನವನಾವರಿಸಿಪರಮಸುಖದ ಪರಿಣಾಮವನು ಒಳಕೊಂಡಿತ್ತು ನೋಡಾ.ಈ ಕುರುಹಿನ ಮೊಳೆಯಬರಿಯ ಬಯಲಲ್ಲಿ ನಿಲಿಸಿ ನೋಡಿ ಕೂಡಾ,ನಮ್ಮ ಗುಹೇಶ್ವರನ ಶರಣ ಅಜಗಣ್ಣನೊಳಗೆನೀನು ನಿರಾಳಸಂಗಿಯಾಗಿ.
ಸುಖದ ಸುಖಿಗಳ ಸಂಭಾಷಣೆಯಿಂದ, ದುಃಖ ವಿಶ್ರಾಮವಾಯಿತ್ತು.ಭಾವಕ್ಕೆ ಭಾವ ತಾರ್ಕಣೆಯಾದಲ್ಲಿ, ನೆನಹಕ್ಕೆ ವಿಶ್ರಾಮವಾಯಿತ್ತು.ಬೆಚ್ಚು ಬೆರಸಲೊಡನೆ ಮಚ್ಚು ಒಳಕೊಂಡಿತ್ತು,ಚೆನ್ನಬಂಕನಾಥನ ಮಾಹೇಶ್ವರಂಗೆ.
ಮನವ ಮರೆದು ಮಾಡಿದಡೆ ಲಿಂಗರೂಪವಾಯಿತ್ತು.ಧನವ ಮರೆದು ಮಾಡಿದಡೆ ಜಂಗಮರೂಪವಾಯಿತ್ತು.ತನುವ ಮರೆದು ಮಾಡಿದಡೆ ಪ್ರಸಾದರೂಪವಾಯಿತ್ತು.ಇಂತೀ ತ್ರಿವಿಧವನರಿದು ಮಾಡಿದಡೆ ಬಯಲು ರೂಪವಾಯಿತ್ತು.ಮನವನರಿಯನಾಗಿ, ಲಿಂಗವನರಿತ.ಧನವನರಿಯನಾಗಿ ಜಂಗಮವನರಿತ.ತನುವನರಿಯನಾಗಿ ಪ್ರಸಾದವನರಿತ_ಈ ತ್ರಿವಿಧಸುಖವ ಮರೆದನಾಗಿ ಬಯಲೆಂದರಿತ.ಮನವ ಲಿಂಗ ಒಳಕೊಂಡಿತ್ತು.ಧನವ ಜಂಗಮ ಒಳಕೊಂಡಿತ್ತು.ತನುವ ಪ್ರಸಾದ ಒಳಕೊಂಡಿತ್ತು.ಇಂತೀ ತ್ರಿವಿಧರೂಪವನು ಬಯಲು ಒಳಕೊಂಡಿತ್ತು ಗುಹೇಶ್ವರಾ.