ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧನದಲ್ಲಿ ಮಕಾರಸ್ವರೂಪವಾದ ಸ್ವಯಂ ಜಂಗಮವನರಿದರ್ಚಿಸಬಲ್ಲಾತನೆ ಶರಣ. ಮಮಕಾರದಲ್ಲಿ ವಕಾರಸ್ವರೂಪವಾದ ಚರಜಂಗಮವನರಿದರ್ಚಿಸಬಲ್ಲಾತನೆ ಶರಣ. ಸಂಗ್ರಹದಲ್ಲಿ ಓಂಕಾರಸ್ವರೂಪವಾದ ಪರಜಂಗಮವನರಿದರ್ಚಿಸಬಲ್ಲಾತನೆ ಶರಣ. ಈ ತ್ರಿವಿಧಜಂಗಮವನರಿದರ್ಚಿಸಬಲ್ಲಾತಂಗಲ್ಲದೆ ಶರಣಸ್ಥಲವಿಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಾತೆಯ ಆತ್ಮದಲ್ಲಿ ರೇತ ರಕ್ತವು ಕೂಡಿ ಕೆನ್ನೀರ ಮುತ್ತಿನಂತಾಯಿತ್ತಯ್ಯ. ಆ ಕೆನ್ನೀರ ಮುತ್ತು ವಿದ್ರುಮದಾಕಾರವಾಯಿತ್ತಯ್ಯ, ಆ ವಿದ್ರುಮದಾಕಾರ ಒಂದು ಹಿಡಿಯಾಯಿತ್ತಯ್ಯ. ಆ ಹಿಡಿಯಾದುದಕ್ಕೆ ಆಕಾರ ಅಂದವಾಗಿ ಓಂಕಾರ ಸ್ವರೂಪವಾಯಿತ್ತಯ್ಯ. ಆ ಓಂಕಾರಸ್ವರೂಪವಾದ ಪಿಂಡಕ್ಕೆ ನವಮಾಸ ತುಂಬಿ ತೆರಪಾದ ಬಾಗಿಲಲ್ಲಿ ಬಂದ ಆತ್ಮನ ಅಂಗವೆ ಅನುವಾಗಿ ಆಯತವಾಯಿತ್ತು. ಆ ಆಯತವಾದ ಆತ್ಮನು ತನ್ನ ಅಂಗದೊಳ ಹೊರಗೆ ನೋಡುತ್ತಿರಲು ಅಂಗವೆ ಪಾಣಿವಟ್ಟವಾಯಿತ್ತು, ಲಿಂಗವೆ ಶಿರಸ್ಸು ಆಯಿತ್ತು. ಆ ಶಿರಸ್ಸಿನೊಳಗೆ ಎರಡು ಜ್ಯೋತಿಯುಂಟು. ಆ ಎರಡು ಜ್ಯೋತಿಯ ನಡುಮಧ್ಯಸ್ಥಾನದಲ್ಲಿ ಒಂದು ಅಮೃತದ ಕಮಲವುಂಟು. ಆ ಕಮಲದೊಳಗಣ ಅಮೃತವನುಣಬಲ್ಲಡೆ ಆತನೆ ಪಿಂಡಾಂಡಜ್ಞಾನಿಯೆಂದಾತ ನಮ್ಮ ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವೆಂಬೆ.
--------------
ಬಾಚಿಕಾಯಕದ ಬಸವಣ್ಣ
-->