ಒಟ್ಟು 4 ಕಡೆಗಳಲ್ಲಿ , 4 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ವಟವೃಕ್ಷದ ಘಟದ ಮಧ್ಯದಲ್ಲಿ ಒಂದು ಮಠವಿಪ್ಪುದು.ಆ ಮಠಕ್ಕೆ ಹಿಂದೆಸೆಯಿಂದ ಬಂದು, ಮುಂದಳ ಬಾಗಿಲ ತೆಗೆದು,ವಿಚ್ಛಂದದ ಕೋಣೆಯ ಕಂಡು, ಕಿಡಿ ನಂದದೆ ದೀಪವ ಕೊಂಡು ಹೊಕ್ಕು,ನಿಜದಂಗದ ಓಗರದ ಕುಂಭವ ಕಂಡು,ಬಂಧವಿಲ್ಲದ ಓಗರವನುಂಡು, ಸದಮಲಲಿಂಗವೆ ತಾನಾದ,ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ.
ಇಷ್ಟಲಿಂಗಕ್ಕರ್ಪಿಸಿ, ಮೃಷ್ಟಾನ್ನವನುಂಡು,ಇಷ್ಟಾರ್ಥಸಿದ್ಧಿಯ ಪಡೆದೆಹೆವೆಂಬ ಮರಳುಗಳು ನೀವು ಕೇಳಿರೆ;ಪ್ರಾಣಲಿಂಗಸ್ಥಲ ನಿಮಗೆಲ್ಲಿಯದು ಪ್ರಸಾದಸ್ಥಲ ನಿಮಗೆಲ್ಲಿಯದುಓಗರವನುಂಡು ಆಗಾದೆವೆಂದಡೆ,ಮೂಗಕೊಯ್ಯದೆ ಮಾಣ್ಬನೆ ನಮ್ಮ ಕೂಡಲಸಂಗಮದೇವನು
ಬ್ರಹ್ಮನ ಬಾಯ ಓಗರವನುಂಡು,ವಿಷ್ಣುವಿನ ಕೈಯ ಸೀರೆಯ ಹೊದ್ದು,ರುದ್ರನ ಮನೆಯಲ್ಲಿ ತಿರುಗಾಡುತ್ತಿಪ್ಪ ಭದ್ರಾಂಗಿಗಳು ಕೇಳಿರೋ.ಬ್ರಹ್ಮನ ಬಾಯ ಮುಚ್ಚಿ,ವಿಷ್ಣುವಿನ ಕೈಯ ಮುರಿದು,ರುದ್ರನ ಮನೆಯ ಸುಟ್ಟು ಬುದ್ಧಿವಂತರಾಗಿ.ಬುದ್ಧಿವಂತರಾದವರ ಅರಿದವರನರಿ.ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
ಬಂದ ಲಂದಣಗಿತ್ತಿಯರೆಲ್ಲರೂ ಓಗರವನುಂಡು ಹೋದರಲ್ಲದೆ,ಮದುವಳಿಗನ ಕಂಡು ಹೋದುದಿಲ್ಲ.ನಿಬ್ಬಣ್ಣಕ್ಕೆ ಬಂದವರೆಲ್ಲರೂ ಅದ್ದಿಹೋದರು ಹೊಲೆನೀರ ಮಿಂದು.ಮದುವಣಿಗನ ಮುಂದೆ [ಒಬ್ಬು]ಳಿಕೆ[ಯಿ]ಲ್ಲ,ನಿಃಕಳಂಕ ಮಲ್ಲಿಕಾರ್ಜುನಾ.