ಲಿಂಗಕ್ಕೊಂದು, ತನಗೊಂದೆಂಬಾಗ ಆ ಅಂಗ, ಲಿಂಗವಿರೋಧಿಯೆ ?
ಆ ಅಂಗ, ಇಷ್ಟಲಿಂಗವ ಆತ್ಮನ ನೆಲೆಯಲ್ಲಿ, ಅರಿದೆಹೆನೆಂಬುದು ನಿರ್ಮಾಲ್ಯವೆ?
ಇವು ಕುಲಛಲ ವಾಗ್ವಾದದ ಮಾತಲ್ಲದೆ, ಬಲಿಕೆವಂತರ ನೀತಿಯಲ್ಲ.
ಕೊಂಬಲ್ಲಿ ಕೊಡುವಲ್ಲಿ, ಉಂಬಲ್ಲಿ ಉಡುವಲ್ಲಿ, ಓಡುವಲ್ಲಿ,
ಲಿಂಗವನೊಡಗೂಡಿರ್ಪುದು, ಕ್ರಿಯಾಶುದ್ಧಾತ್ಮನ ಇರವು.
ಹೀಂಗಲ್ಲದೆ ಪತ್ರಚಿತ್ರದಲ್ಲಿ ಎತ್ತಿ ನೋಡಿದಡೆ,
ಸೂರ್ಯ ತತ್ತುಗೊತ್ತಾಗಿರ್ಪುದು, ನಿಃಕಳಂಕ ಮಲ್ಲಿಕಾರ್ಜುನಾ.