ಓಣಿಯೊಳಗೆ ಒಬ್ಬ ವಾಣಿಗಿತ್ತಿ ಕುಳಿತು ಕಾಣದೆ ಮೂರು ಲೋಕಂಗಳಲ್ಲಿ ನಡೆದಾಡುತಿಪ್ಪಳು ನೋಡಾ. ಆ ವಾಣಿಗಿತ್ತಿಯ ಕೊಂದು, ಮೂರು ಲೋಕವ ನುಂಗಿದಲ್ಲದೆ ಪ್ರಾಣಲಿಂಗಸಂಬಂಧವು ಕಾಣಿಸದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
ಓಣಿಯೊಳಗೆ ಒಬ್ಬ ಬಾಣತಿ ಕುಳಿತು ಏಳೆಂಟನೆಣಿಸುತಿರ್ಪಳು ನೋಡಾ! ಆದಿಯಲ್ಲಿ ಒಬ್ಬ ಮೂರ್ತಿ ಬಂದು, ಏಳೆಂಟು ಕೆಡಿಸಿ ಆ ಬಾಣತಿಯ ಒಡಲ ಸೀಳಿ, ಶಿಶುವ ತಕ್ಕೊಂಡು ಸಾಸಿರಕಂಬದ ಮನೆಯೊಳಗಿಟ್ಟು ತಾನುತಾನಾದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.