ಎಲಾ, ಓದಿದವರಿಗೆ ಮೋಕ್ಷವಿಲ್ಲಾ!
ಅದು ಎಂತೆಂದಡೆ,
ಒಂದು ಶಾಸ್ತ್ರವನೋದಿ ಮನಸು ನಿಲುಕಡೆಯಿಲ್ಲದೆ
ಮತ್ತೊಂದು ನೋಡುವೆ.
ಮತ್ತೊಂದು ಮತ್ತೊಂದು [ಎಂದು] ನೋಡುವರೆ
ದಿವಸ ಸಮೀಪಿಸಿತ್ತು.
ಸಮೀಪಿಸಿದ ಬಳಿಕ ಯಮದೂತರು ಬಂದು
ವಿಪ್ಲವ[ವ] ಮಾಡುವರು.
ಏನು ಕಾರಣವೆಂದಡೆ, ಓದಿದವರಿಗೆ ಮೋಕ್ಷವಿಲ್ಲಾ !
ಅದು ಎಂತೆಂದಡೆ,
ಬಿಳಿಯ ವಸ್ತ್ರವ ಹೊದ್ದುಕೊಂಡ ತಿರುಕಗೆ
ಎಲ್ಲರ ಮನ್ನಣೆಯುಂಟು.
ಮಾಸಿದರೆ ಅದಕೆ ಶುದ್ಧ ಮಾಡುವನು ರಜಕ.
ಇದರಂತೆ, ಓದಿನ 1[ಮರ್ಮವು]1 ತಿಳಿಯಲಿಲ್ಲ.
ಇದಂ ಬಿಟ್ಟು, ಬಿಳಿಯ ವಸ್ತ್ರವು
ಹೊಡೆಸಿಕೊಂಡು ಹೊಡೆಸಿಕೊಂಡು ಮುಪ್ಪಾದ ಬಳಿಕ
ಕೂಸುಗಳ ಗುದಕ್ಕೆ ಒರಸಿ ಬಿಸುಡುವರಲ್ಲದೆ,
ಅದಕ್ಕೆ ಅಧಿಕವುಂಟೇ ?
ಇದರಂತೆ ಓದಿನ 1[ಮರ್ಮವು]1 ತಿಳಿಯಲಿಲ್ಲ.
ಇದಂ ಬಿಟ್ಟು, ಮೂಢಭಾವದಿಂದ ಶಿವಲಿಂಗವ ಪೂಜಿಸಿದವರು
ಮೋಕ್ಷಕರಲ್ಲದೆ ಮಿಕ್ಕವರಿಗುಂಟೇನಲ್ಲ.
ಅದೇನು ಕಾರಣವೆಂದಡೆ,
ಮೂಢ ಭಕ್ತನೇ ಕಂಬಳಿಯೆಂದು ತಿಳಿಯೆಲಾ !
ಕಂಬಳಿಗೆ ಮನ್ನಣೆಯುಂಟೆ ?
ಹಾಸಿದರೆ ಮಾಸುವುದೆ ?
ಹೊದ್ದರೆ ಚಳಿಯ ತೋರುವುದೆ ?
ರಜಕನ ಮನೆಯ ಕಂಡುಬಲ್ಲುದೆ ?
ಮುಪ್ಪಾದ ಕಾಲಕ್ಕೆ ಕೃಮಿಶಳೆಗಶ್ವರ (?) ದೇವರಿಗೆ ಜೇಷ್ಮು(?)
ಎಲ್ಲಾ ಬರವಾಗಿ
ಭಕ್ತ ಪೋಷಿಸುವದಲ್ಲದೆ ಕೊರತೆಯುಂಟೆ ?
ಇದರಂತೆ ಮೂಢಭಕ್ತಂಗೆ ಮೋಕ್ಷವೆಂದು ತಿಳಿ.
ಇದಂ ಬಿಟ್ಟು, ಮಾತು ಕಲಿತ ಭೂತಗಳಂತೆ,
ಬರಿದೆ ಶಾಸ್ತ್ರವನೋದಿ,
ಕಂಡಕಂಡವರಲ್ಲಿ ಬಗುಳಿ,
ಕಾಲಕ್ಷೇಪವ ಕಳೆವ
ಮೂಳ ಹೊಲೆಯರ ಮುಖವ ನೋಡಲಾಗದು ಕಾಣಾ
ಕೂಡಲಾದಿ ಚನ್ನಸಂಗಮದೇವಾ.