ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಳ್ಳ ಮೇರೆದಪ್ಪಿದರೆ ಇಳಿವುದು, ಹೊಳೆ ಮೇರೆದಪ್ಪಿದರೆ ಇಳಿವುದು, ಸಮುದ್ರ ಮೇರೆದಪ್ಪಿದರೆ ಇಳಿವುದು. ಮನ ಮೇರೆದಪ್ಪಿದರೆ ಏರಿ ಇಳಿದು ಕಾಡುತ್ತಿದೆ. ಅದು ಎಂತೆಂದರೆ : ಹಳ್ಳ ಮೇರೆದಪ್ಪಿದರೆ ಸಂಗಡ ಕಾಯಿಯಿಂದ ನಡೆವುದು. ಹೊಳೆ ಮೇರೆದಪ್ಪಿದರೆ ಹರುಗೋಲು ನಡೆವುದು. ಸಮುದ್ರ ಮೇರೆದಪ್ಪಿದರೆ ಭೈತ್ರ ನಡೆವುದು. ಮನ ಮೇರೆದಪ್ಪಿದರೆ ಎನ್ನ ಕೊಂಡು ಮುಳುಗಿತ್ತು. ಈ ಮನ ವೇದ ಶಾಸ್ತ್ರ ಆಗಮದ ಕಟ್ಟಳೆಗೆ ನಿಲ್ಲುವುದೆ ? ನಿಲ್ಲದು. ಓದುವುದು ಮನ, ಹೇಳುವುದು ಮನ, ಕೇಳುವುದು ಮನ, ಕೇಳಿ ನರಕಕ್ಕಿಳಿವುದು ಕೆಡುವುದು ಮನ. ಈ ಮನದಂದುಗದ ದಾಳಿಯಲ್ಲಿ ನೊಂದು ಬೆಂದೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಎಲ್ಲರೂ ಓದುವುದು ವಚನಂಗಳು; ಎಲ್ಲರೂ ನುಡಿವರು ಬೊಮ್ಮವ. ಎಲ್ಲರೂ ಕೇಳುವುದು ವಚನಂಗಳು ; ಹೇಳುವಾತ ಗುರುವಲ್ಲ, ಕೇಳುವಾತ ಶಿಷ್ಯನಲ್ಲ. ಹೇಳಿಹೆ ಕೇಳಿಹೆನೆಂಬನ್ನಕ್ಕರ ವಿರಕ್ತಿಸ್ಥಲಕ್ಕೆ ಭಂಗನೋಡಾ, ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
-->