ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಮ್ಮನ ಹತ್ತಿಯಕಾಳ ಸುರಿದು ಪಶು ಮೇವುತ್ತಿರಲಾಗಿ ಓಮ್ಮನವ ಮೇದು ಇಮ್ಮನ ಉಳಿಯಿತು. ಅದ ಸುಮ್ಮಾನದಲ್ಲಿ ಕರೆಯ ಹೋಗಲಿಕೆ ಅಂಡೆಯಲ್ಲಿ ಐಗುಳವ ಕರೆದು ಕಂದಲಲ್ಲಿ ಸುರಿಯಲಾಗಿ ಮೂಗುಳವಾಯಿತ್ತು. ಆ ಮೂಗುಳವ ಒಲೆಯ ದೆಸೆಯಲ್ಲಿರಿಸಲಿಕೆ ಕಾಸೂದಕ್ಕೆ ಮುನ್ನವೆ ನಾಶವಾಯಿತ್ತು. ಇಂತೀ ಈಶ್ವರ ವಿಶ್ವಾಸದಲ್ಲಿ ಆತ್ಮ ನಿಶ್ಚಯಿಸಲಾಗಿ ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗದೊಳಗಾದವನ ಇರವು.
--------------
ಶಂಕರದಾಸಿಮಯ್ಯ
-->