ಆಸನ ಬಂಧವ ಮಾಡಿ,
ನಾಸಿಕಾಗ್ರದಲ್ಲಿ ದೃಷ್ಟಿಯನಿರಿಸಿ
ಸೂಸಲೀಯದೆ ಮನವ, ಬೀಸರ ಹೋಗದೆ ಪವನ[ನ]
ಓಸರಿಸಲೀಯದೆ ಬಿಂದುವ, ಊಧ್ರ್ವಕ್ಕೆತ್ತಿ
ಇಂತೀ ತ್ರಿವಿಧವನೊಂದೇ ಠಾವಿನಲ್ಲಿ ಬಲಿದು ನಿಲಿಸಿ
ಸಾಸಿರದಳಕಮಲದ ನಾದಾತ್ಮಲಿಂಗದಲ್ಲಿ ಮನ ಲೀಯವಾದಡೆ
ಅದೇ ಪರಮ ರಾಜಯೋಗವಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಜವನೈದುವಡೆ.