ಒಟ್ಟು 2 ಕಡೆಗಳಲ್ಲಿ , 1 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ದ್ರವ್ಯಶೀಲ ಧನಶೀಲ ತನುಶೀಲ ಆತ್ಮಶೀಲಇಂತಿವರೊಳಗಾದ ನಾನಾ ಶೀಲಂಗಳೆಲ್ಲವೂಓಸರಿಸಿದಲ್ಲಿ ಭಾಷೆ ಹೋಯಿತ್ತು.ಕಳ್ಳನ ತಾಯ ಕಣಿಯ ಕೇಳ ಹೋದಂತೆ.ಅಲ್ಲಿಗಲ್ಲಿಗೆ ಹೋಗದೆ, ಎಲ್ಲರ ಕೂಡಿಎನಗೊಂದರಲ್ಲಿ ಇರೆಂದು ಕೇಳುವ ಆತ್ಮಗಳ್ಳನ ಶೀಲಮನಕ್ಕೆ ಮನೋಹರ ಶಂಕೇಶ್ವರ ಲಿಂಗವಮುಟ್ಟದೆ ಹೋಯಿುತ್ತು.
ಈ ವ್ರತ ತಪ್ಪಿತ್ತೆಂದು ಘಟವ ಬಿಟ್ಟಲ್ಲಿಮೆಚ್ಚುವ ದೈವ ಬೇಡ.ಇಂತೀ ಕ್ರೀ ಓಸರಿಸಿದಲ್ಲಿ ಬಟ್ಟಡೆ ಪ್ರಾಣವಮೆಚ್ಚಿ ಕೈಲಾಸಕ್ಕೆ ಕರೆವ ದೈವವುಂಟೆ?ಇಂತೀ ಉಭಯ ಭ್ರಷ್ಟವಾದಲ್ಲಿ ಸಿಕ್ಕಿತ್ತು ವ್ರತ.ಮನಕ್ಕೆ ಮನೋಹರ ಶಂಕೇಶ್ವರ ಲಿಂಗ ತಪ್ಪಿದಡೂಹೊರಗೆಂಬೆನು.