ಒಟ್ಟು 15 ಕಡೆಗಳಲ್ಲಿ , 1 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಮುನಿಸ ಮುನಿದಡೆ ಶ್ರೀಗಂಧದ ಮುರಡಿನ ಹಾಂಗಿರಬೇಕವ್ವಾ.ತೆಗೆದಪ್ಪಿದಡೆ ಚಂದನ ಶೀತಾಳದ ಹಾಂಗಾಗಬೇಕವ್ವಾ.ಹೋಗುವಲ್ಲಿ ಮೈಯೆಲ್ಲಾ ಕೈಯಾಗಿ ಹೆಣಗುತ್ತಿರಬೇಕವ್ವಾ.ಮಹಾಲಿಂಗ ಗಜೇಶ್ವರನ ನೆರೆವ ಭರದಿಂದನೊಂದಂಕದ ಮೇಲೆ ಬಿದ್ದ ಹಾಂಗಿರಬೇಕವ್ವಾ.
ರಿಪುಗಳ ಕಾಳಗ ಕೊಳುಗುಳದನುಭಾವಅತಿಶಯದ ಬಾಣ ತಾಗಿದುದಕೆ ಹೋಗಿ ನಿಂದ ಮುಮ್ಮರಿಯಂತೆಜಗಕ್ಕೆಲ್ಲಾ ಕನ್ನಡಿಗೆ ನೋಡಾ!ಮಹಾಲಿಂಗ ಗಜೇಶ್ವರನ ಅರಿಯನೆ ಬಲ್ಲ ಕನ್ನಡಿಗೆಮರದೊಡಕು.
ಚಂದ್ರಮನ ಕಂಡು ಮಂಡೆಯ ಬಿಟ್ಟುಏಳು ಬಂಧವ ತೋರಿ ಬೆದರಿಸಿದನವ್ವಾ.ಮಗಳ ಕುಂಕುಮ ತಿಲಕವ ಕಂಡುನಿನ್ನ ನೊಸಲಲ್ಲಿ ಎಸೆಯಬಂದ ಕಾಮ ಕೈಮರೆದನವ್ವಾ.ಸಟ್ಟುಪದಿಯ ಸಂಗ ಮಹಾಲಿಂಗ ಗಜೇಶ್ವರನಸಂಪಗೆಯ ವನಕ್ಕೆ ಬಂದು ಶರಣೆನ್ನು ಮಗಳೆ.
ಎಲೆ ಎಲೆ ತಾಯೆ ನೋಡವ್ವಾ!ಇರುಳು ತೊಳಲುವ ಜಕ್ಕವಕ್ಕಿಯಂತೆ ಹಲಬುತ್ತಿದ್ದೆ ನೋಡವ್ವಾ!ಮಾಗಿಯ ಕೋಗಿಲೆಯಂತೆ ಮೂಗಿಯಾಗಿದ್ದೆ ನೋಡವ್ವಾ!ಮಹಾಲಿಂಗ ಗಜೇಶ್ವರನಅನುಭಾವಸಂಬಂದ್ಥಿಗಳ ಬರವೆನ್ನಪ್ರಾಣದ ಬರವು ನೋಡವ್ವಾ
ದೇಶಾಖಿಯಲ್ಲದ ರಾಗ, ಉಪ್ಪಿಲ್ಲದ ಊಟಸಪ್ಪೆ ಕಾಣಿರೋ ಅಯ್ಯಾ, ಮಿಕ್ಕಿನ ರಾಗ.ಶಿವನಲ್ಲದ ದೈವಫಲವಿಲ್ಲ ಕಾಣಿರೊ ಅಯ್ಯಾ.ಮಿಕ್ಕಿನ ತುಂಬುರ ನಾರದರು ಶಿವನ ಕೇಳಿಸುವ ರಾಗ,ಮಹಾಲಿಂಗ ಗಜೇಶ್ವರನ ನಚ್ಚಿನ ರಾಗ.
ಪದುಮ ಪಜ್ಜಳ ವರ್ಣ ನೈದಿಲೆಯಾಗಿರ್ದಳವ್ವೆತುಂಬಿ ಮುತ್ತನುಗುಳದಂತೆ;ಕಂಗಳು ಕಂಕಣವಾಗಿ ಚಂದ್ರಬಿಂಬವಾಗಹದಂತೆಅವಗವಿಸಿಕೊಂಡಿರ್ದ ಬಂಗಾರಕ್ಕೆರಗಿದ ರತ್ನದಂತೆಆನೊಂದೆ ಗ್ರಾಹಯಾಗಿರ್ದೆನವ್ವಾಅಖಂಡಿತನಾಗಿ ಮಹಾಲಿಂಗ ಗಜೇಶ್ವರನ ಅನುಭಾವಕ್ಕೆಸುಖಿಯಾಗಿ.
ಇರುಳಿನ ಜಕ್ಕವಕ್ಕಿಯಂತೆ ಅಗಲಿ ಹಲುಬುತಿರೆಇರುಳಿನ ತಾವರೆಯಂತೆ ಮುಖ ಬಾಡಿ,ಇರುಳಿನ ನೆಯ್ದಿಲಂತೆ ಕಣ್ಣಮುಚ್ಚದೆ,ಇರುಳಿನ ಸಮುದ್ರದಂತೆ ಘನವಾಗಿ,ಸಲೆ ಉಮ್ಮಳಿಸಿ ಸಂಜೆವರಿದುಮಹಾಲಿಂಗ ಗಜೇಶ್ವರನ ಬರವಿಂಗೆ ಬೆಳಗಾಯಿತು.
ಆತನ ಬೆರಸಿದ ಕೂಟವನೇನೆಂದು ಹೇಳುವೆನವ್ವಾ,ಹೇಳಲೂಬಾರದು, ಕೇಳಲೂಬಾರದು;ಏನ ಹೇಳುವೆನವ್ವಾ, ಶಿಖಿ ಕರ್ಪೂರ ಬೆರಸಿದಂತೆ.ಮಹಾಲಿಂಗ ಗಜೇಶ್ವರನ ಕೂಡಿದ ಕೂಟವಹೇಳಲು ಬಾರದವ್ವಾ.
ಮೂಗಿನ ಕಪ್ಪು ಪ್ರಣತೆಯ ಕತ್ತಲೆ ಜ್ಯೋತಿಯೆಂಬರು.ವಿವರಣೆ ಹೋಗದೆಂತೂ ರಸದ ರುದ್ರಾಕ್ಷಿ ಸ್ಫಟಿಕದ ಧಾರಂಬೊ.ಮಾಣಿಕ್ಯ ಸ್ವಯಂಜ್ಯೋತಿ ಜ್ಞಾನದ ಪ್ರಭೆ.ಮಹಾಲಿಂಗ ಗಜೇಶ್ವರನ ನೆನೆವ ಮನವು ಕಮಳ ತಳವೆಳಕು ಭೋ.
ಕಾಮಗಂಜಿ ಚಂದ್ರನ ಮರೆಹೊಗಲು ರಾಹು ಕಂಡಂತಾದಳವ್ವೆ.ಹಾವೆಂದರಿಯದೆ ನೇವಳವೆಂದರಿಯದೆಕ್ಷಣ ನಾಗಭೂಷಣೆಯಾಗಿರ್ದಳವ್ವೆಮಹಾಲಿಂಗ ಗಜೇಶ್ವರನ ನೆರೆವ ಭರದಿಂದಕಳಕ್ಕೆ ಬಂದ ಮೃಗದಂತಿದ್ದಳವ್ವೆ.
ಉದರವ ತಾಗಿದ ಮಾತು ಅಧರದಲ್ಲಿ ಬೀಸರವೋದೀತೆಂದುಅಧರವ ಮುಚ್ಚಿಕೊಂಡಿರ್ದಳವ್ವೆ.ಕಂಗಳ ಮುಚ್ಚಿಕೊಂಡಿರ್ದಳವ್ವೆ.ಪರಿಮಳ ಬೀಸರವೋದೀತೆಂದುಆಳಿಗೆ ಬುದ್ಧಿಯ ಹೇಳಿದಳವ್ವೆ.ಮನ ಬೀಸರವೋದೀತೆಂದುದಿನಕರನ ಕಾವಲಕೊಟ್ಟಳವ್ವೆ,ಇಂದು ನಮ್ಮ ಮಹಾಲಿಂಗ ಗಜೇಶ್ವರನ ನೆರೆವಭರದಿಂದ.
ಹೊನ್ನು ಕೊಡನ ಹೊಮ್ಮಿನ ಹಮ್ಮಿನ ಕಳಯ ಪುಳಕದಲ್ಲಿತಾರಕಿ ತಾರಕಿ ತಳಿತಂತೆ ಅಂಗಸಂಗದಲ್ಲಿದ್ದಳವ್ವೆ.ಬಂದ ಭರವಿನ ನಿಂದ ಚಂದದ ಹೊಸಹೂವ ಮುಡಿದಳವ್ವೆ.ಅಡವಿಯಲಾದ ಮರನಡಿಯಲಿದ್ದ ಬಿಸಿಲ ಬಯಸಿದಳವ್ವೆ.ಇಂದು ಮಹಾಲಿಂಗ ಗಜೇಶ್ವರನ ನೆರೆವ ಭರದಲ್ಲಿ,ಕಳಕೆ ಬಂದ ಮೃಗದಂತೆ ತನ್ನ ತಾ ಮರೆದಿರ್ದಳವ್ವೆ.
ಒಳಗೆ ಶೋಧಿಸಿ, ಹೊರಗ ಧವಳಿಸಿಭಾವದಿಂದ ಗುಡಿತೋರಣವ ಕಟ್ಟಿದೆನಯ್ಯಾ.ಲಿಂಗ ಬಾರಯ್ಯಾ, ಎನ್ನ ದೇವಾ ಬಾರಯ್ಯಾ.ಅಂತರಂಗದ ಪರಂಜ್ಯೋತಿಯನಿದಿರುಗೊಂಬೆನೆನ್ನಮಹಾಲಿಂಗ ಗಜೇಶ್ವರನ
ಋತುಕಾಲ ತಪ್ಪಿದ ಕೋಗಿಲೆಯಂತೆನುಡಿಯದಂತಿರ್ದಳಲ್ಲಾ!ಪರಿಮಳ ತಪ್ಪಿದ ಭ್ರಮರನಂತೆಸುಳಿಸುಳಿಗೊಳುತಿರ್ದಳಲ್ಲಾ!ಫಲವು ತಪ್ಪಿದ ಬಂಜೆ ಬನದೊಳಗಣ ಅರಗಿಳಿಯಂತಿರ್ದಳಲ್ಲಾ!ಧುರಭಾರದ ಜವ್ವನದಲ್ಲಿ ತೋರಣದೆಲೆಯಂತೆಮಹಾಲಿಂಗ ಗಜೇಶ್ವರನ ನೆರೆವ ಭರದಿಂದಅಳಿಕಾವೃದ್ಧೆಯಾಗಿರ್ದಳಲ್ಲಾ!
ಒಲಿದವರ ಕೊಲುವಡೆ ಮಸೆದ ಕೂರಲಗೇಕೆ?ಅವರನೊಲ್ಲೆನೆಂದಡೆ ಸಾಲದೆ?ಮಹಾಲಿಂಗ ಗಜೇಶ್ವರನ ಶರಣರನಗಲಿದಡೆತುಪ್ಪದಲ್ಲಿ ಕಿಚ್ಚ ನಂದಿಸಿದಂತಾದೆನವ್ವಾ!