ತನ್ನ ತಾ ಬೀಳುವರ ಕಂಡು ತಳ್ಳಿ ಹಗೆಯಾಗಲೇಕೆ? ಒಡೆದುದ ಕಂಡು ಒಡಯಿರಿಯಲೇಕೆ? ಇಂತೀ ಬಿಡುಮುಡಿಯನರಿಯದೆ ಒಡೆಯರೆಂದು ಕೊಡುವರ ಕಾಲ ಪಡಿಗಕ್ಕೆ ಇವರು ಹೆಸರೊಡೆಯರಲ್ಲದೆ ಅಸಮಾಕ್ಷರಲ್ಲ. ಇಂತೀ ಗಸಣಿಗಿನ್ನೇವೆ, ಕಣ್ಣಯ್ಯಪ್ರಿಯ ಗೊಹೇಶ್ವರನ ಶರಣ ಅಲ್ಲಮಾ.
ಹೋಗುತಿದ್ದ ಎರಳೆಯನೆಚ್ಚಡೆ ಮೂರು ಕಾಲು ಹರಿದು ಒಂದರಲ್ಲಿ ಆಧರಿಸಿ ನಿಂದಿತ್ತು. ನಿಂದ ಹೆಜ್ಜೆಯ ಕೀಳಲಾರದೆ ಅಂಗ ಬಿದ್ದಿತ್ತು; ಎರಳೆ ಅಳಿಯಿತ್ತು. ಗೊಹೇಶ್ವರನ ಶರಣ ಅಲ್ಲಮನಲ್ಲಿ ಬೇಂಟೆಯ ಹಪ್ಪು ಕೆಟ್ಟಿತ್ತು.