ಅಥವಾ

ಒಟ್ಟು 66 ಕಡೆಗಳಲ್ಲಿ , 1 ವಚನಕಾರರು , 66 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಧನಕ್ಕೆ ಇಚ್ಫೈಸುವನ್ನಕ್ಕರ, ಪರಸ್ತ್ರೀಗೆ ಮೋಹಿಸುವನ್ನಕ್ಕರ, ಪರದೈವವ ಭಜಿಸುವನ್ನಕ್ಕರ, ಪರಪಾಕವ ಕೊಂಬನ್ನಕ್ಕರ, ಪರಹಿಂಸೆಗೆಡದನ್ನಕ್ಕರ ಮಹೇಶ್ವರನೆನಲಾಗದು. ಹುಸಿ ನಾಶವಾಗದನ್ನಕ್ಕರ, ಕಳವು ಕುಚೇಷ್ಟೆಯ ನೀಗದನ್ನಕ್ಕರ, ಉಪಾಧಿಯನುಸರಣೆಯ ದಾಟದನ್ನಕ್ಕರ ಮಹೇಶ್ವರನೆನಲಾಗದು. ಭವಿಯಸಂಪರ್ಕ ಬಿಚ್ಚದನ್ನಕ್ಕರ, ವೇಷಗಳ್ಳರ ಜರಿದು ನೂಕದನ್ನಕ್ಕರ, ಲೋಕಲೌಕಿಕಚರಿಯ ಹರಿಯದನ್ನಕ್ಕರ, ಸ್ವತಂತ್ರತ್ವಾನುಭಾವಿಯಾಗದನ್ನಕ್ಕರ ಮಹೇಶ್ವರನೆನಲಾಗದು. ಗುರುನಿರಂಜನ ಚನ್ನಬಸವಲಿಂಗಕ್ಕೆ ಅಂಗವೆಂದು ನಷ್ಟಬದ್ಧರಿಗೆರಗುವ ಭ್ರಷ್ಟಭವಿಗಳಿಗೊಮ್ಮೆ ಮಹೇಶ್ವರನೆಂದರೆ ಅಘೋರನರಕ ತಪ್ಪದು.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಲವನರ್ಪಿಸಿ ಕಾಲದೊಳಗಿರ್ದೆ ಕರ್ತುಗಳವಸರಕ್ಕೆ ಭೃತ್ಯನಾಗಿ. ಕರ್ಮವನರ್ಪಿಸಿ ಕರ್ಮದೊಳಗಿರ್ದೆ ಕಾರಣಕ್ಕೆ ಕಾರ್ಯನಾಗಿ. ಸ್ವಯವನರ್ಪಿಸಿ ಪರವೆಂದೆನಿಸಿರ್ದೆ ಸ್ಥಲವಿರ್ದುದಾಗಿ. ಗುರುನಿರಂಜನ ಚನ್ನಬಸವಲಿಂಗಕ್ಕೆ ಅರ್ಪಿಸುತಿರ್ದೆ ಅನ್ಯವನರಿಯದೆ ಆಯತವಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪ್ರಸಾದವ ಪಡೆದವರೆಂದು ಅಗಲತುಂಬ ಒಟ್ಟಿಸಿಕೊಂಡು ಮಿಗೆ ಸೂಸಿ ಜಿಹ್ವೆಲಂಪಟವಿಷಯದೊಳ್ಮುಳುಗಿ, ನೆಗೆನೆಗೆದು ಕೊಂಬ ಭಗಜನಿತ ಬಟ್ಟೆಹರಕರಿಗೆ ಅಪ್ರತಿಮಪ್ರಸಾದ ಸಾಧ್ಯವಹುದೆ ಅನಿಮಿಷಪ್ರಕಾಶ ಆನಂದಮಯಪ್ರಸಾದಿಗಲ್ಲದೆ? ಅನಿಷ್ಟಬದ್ಧರಂತಿರಲಿ; ಗುರುನಿರಂಜನ ಚನ್ನಬಸವಲಿಂಗಕ್ಕೆ ಸಾವಧಾನಭಾವಿಯೇ ಪ್ರಸಾದಿ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗಂಬ್ಥೀರ ಗುರುವೆನ್ನ ಸಂಗಸಮರಸವ ಮಾಡಿ, ಅಂಗದೊಳಡಗಿರ್ದ ಕಂಗಳ ಬೆಳಗ ಕರುಣದಿಂದೆತ್ತಿ ಪಣೆಗಿಡಲು, ಗಣಿತಲಿಖಿತವು ಕಾಣದೋಡಿದವು, ಕಳೆ ಬಿಂದು ನಾದ ಸಂಭ್ರಮೆಯಗೊಂಡು, ನಿರಂಜನ ಚನ್ನಬಸವಲಿಂಗಕ್ಕೆ ತಲೆಯಿಡಲಮ್ಮದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗಜಂಗಮ ಸಂಗಸನ್ನಿಹಿತನಾದ ಶರಣಂಗೆ ಭಾವವಿಲ್ಲದ ಕಾಯ, ಕಲ್ಪನೆಯಿಲ್ಲದ ಮನ, ಗುಣಶೂನ್ಯ ಪ್ರಾಣ, ಭ್ರಾಂತಿವಿರಹಿತ ಭಾವ, ಧರ್ಮವಿಲ್ಲದ ಇಂದ್ರಿಯ, ಇಂತು ಸಕಲ ವಿಷಯ ಹೊಂದಿ ಶರಣೆಂದು ನೈಷ್ಠೆವೆರೆದು ನಲಿಯುತಿರ್ದವು ಗುರುನಿರಂಜನ ಚನ್ನಬಸವಲಿಂಗಕ್ಕೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮೊದಲೆನ್ನ ಕೈವಶವಾಗಿರ್ದ ಪುರುಷನ ಕಣ್ಣಸನ್ನೆಯಲ್ಲಿರಿಸಿಕೊಂಡಳೆಮ್ಮಕ್ಕ ; ಇದು ನೀತಿಯೇ ? ಕಾಮಿಸಿ ಕಲ್ಪಿಸಿ ಒಲಿಸಿಕೊಂಡವಳಕ್ಕ ; ಇದು ನೀತಿಯೇ ? ಒಳಗೊಳಗೆ ಮಾತನಾಡಿ ಮೋಹಿಸಿಕೊಂಡವಳಕ್ಕ ; ಇದು ನೀತಿಯೇ ? ಇದನರಿದು ಮುನಿಸನುಳಿಸಿ ಹಿರಿಯಕ್ಕನೊಲುಮೆಯೊಳು ಪರಸ್ತ್ರೀಯಾಗಿ ಪರಿಪರಿಯಿಂದೆ ಅವರ ಮೇಲೆ ನೆರೆದರೆ ಮರುಳುಗೊಂಡೆನ್ನೊಳಗಾದರು, ಗುರುನಿರಂಜನ ಚನ್ನಬಸವಲಿಂಗಕ್ಕೆ ಪರಿಣಾಮವಾಯಿತ್ತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಪತಿಯ ಮೋಹದ ಮತಿವಂತೆ ಬಾಲೆಯರು ನೀವು ತಲೆಯಲ್ಲಿ ಕೊಡನೀರ ಹೊರಬೇಡಿ. ಮುಂದೆ ಅಹಿತ ಕಾಣಿರೆ, ಕೊಡ ನೀರದೆಡೆಯಾಟದಲ್ಲಿ ಕಾಲ ಸರ್ಪಳಿಗೆ ಕಡುನಾಚಿಕೆ, ಕೈಬಳೆ ಕಾಂತಿಯಡಗುವುದು. ಕಟ್ಟಾಣಿಯೆಳೆಗಳೊಪ್ಪುಗೆಡುವುವು ಕಾಣಿರೆ, ಮೂಗುತಿ ತಾಳಿಗೆ ಮೋಸ ಕಾಣಿರೆ. ಮತ್ತೆಂತೆಂದೊಡೆ, ಆ ಕೊಡನೊಡದು ನೀರ ಹೊರಿಸಿ ತಲೆಯಲ್ಲಿ ತಂದು ಗುರುನಿರಂಜನ ಚನ್ನಬಸವಲಿಂಗಕ್ಕೆ ಅಭಿಷೇಕವದರೊಳು ಮಿಂದರೆ ಸಕಲಾಭರಣ ಸ್ವಯವಾದವು ಮೂಗುತಿ ತಾಳಿಯೊಳು ನೋಡಿರೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಯಲಿಂದ ಬಂದ ತಳ್ಳೆಕಾರಂಗೆ ಉಳ್ಳುದೆಲ್ಲವನಿತ್ತು ಒಳ್ಳೆಯವನಾಗಿ ಕಾಲವಿಡಿದು ಕಾಳಬೆಳಗಿಲ್ಲದ ಬಿಸಿಲು ಬೆಳದಿಂಗಳದಲ್ಲಿ ಸನ್ನಿಹಿತ ಬರುವವರಾರು ನೋಡಾ! ಹೊರಗುಳ್ಳವರಿಗೆ ಹೊರಗಾದ ಒಳಗುಳ್ಳವರಿಗೊಳಗಾದ ಅರಿದು ಬನ್ನಿ ಗುರುನಿರಂಜನ ಚನ್ನಬಸವಲಿಂಗಕ್ಕೆ ರೂಪಿಲ್ಲದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ತಾಯಿ ಮಗಳ ಸಂಗವ ಮಾಡಿ ತಂದೆಗೆ ಹುಟ್ಟಿದ ಮಗನ ಕೈಯೊಳೆತ್ತಿ ಊರಬಿಟ್ಟು ಕಡೆಗೆ ಬರುವಲ್ಲಿ, ಕಾಡಬಂದವರಾರು ಕೂಡಬಂದರು ನೋಡಾ. ಕೆಡಿಸಬಂದವರಾರು ನುಡಿಸಬಂದರು ಕಾಣಾ. ಸುಖಿಸಬಂದವರಾರು ಸುಳಿದುನಿಂದರು ಕೇಳಾ. ಗೋಮಕ್ಕಳೆಲ್ಲರು ಗುಲಾಮರಾದಲ್ಲಿ ಗಸಣಿಯಡಗಿತ್ತು. ಗುರುನಿರಂಜನ ಚನ್ನಬಸವಲಿಂಗಕ್ಕೆ ಶರಗ ಹಾಸಿದರೆ ಮರಳಿ ಹೇಳದ ಸುಖವೆನಗೆ ಸ್ವಯವಾಯಿತ್ತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಆರಾರು ಸಕಲಸನ್ನಿಹಿತರರಿತಕ್ಕಗೋಚರ ಪರಶಿವಲಿಂಗವನು, ಆರೈದು ಅಂಗಪ್ರಾಣಾತ್ಮ ಸಂಗಸಮರಸಾನಂದ ಶರಣಂಗೆ ಒಂದೂ ಆಶ್ಚರ್ಯ ತೋರದು, ಅದೇನು ಕಾರಣವೆಂದೊಡೆ, ತಾನೆ ಹರಿ ವಿದ್ಥಿ ಸುರಾದಿ ಮನುಮುನಿ ಸಕಲಕ್ಕೂ ಆಶ್ಚರ್ಯವಾದ ಕಾರಣ. ಅಂತಪ್ಪ ಶರಣನೇ ಶಿವನಲ್ಲದೆ ಬೇರಿಲ್ಲ ಕಾಣಾ. ಅದಲ್ಲದೆ ಮತ್ತೆ ಗಿರಿಗೋಪುರ ಗಂವರ ಶರದ್ಥಿತಾಣ ಸ್ಥಾವರಕ್ಷೇತ್ರ ನರಕುಶಲ ಕುಟಿಲ ಭೂತಾದಿ ಕಿಂಚಿತಕ್ಕಾಶ್ಚರ್ಯವೆಂಬ ಬಾಲಮರುಳ ಅಜ್ಞಾನಿಗಳಿಗೆ ಲಿಂಗಶರಣರೆಂಬ ನಾಮ ಬಹು ಭಾರ ಕಾಣಾ ಗುರುನಿರಂಜನ ಚನ್ನಬಸವಲಿಂಗಕ್ಕೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗಭವಿಯೊಡನೆ ಕ್ರಿಯೆಗೂಡಿ ನಡೆಯಲಾಗದು. ಮನಭವಿಯೊಡನೆ ಮಾತನಾಡಿ ಸುಖಿಸಿಕೊಳ್ಳಲಾಗದು. ಪ್ರಾಣಭವಿಯೊಡನೆ ಮಹಾನುಭಾವಪ್ರಸಾದ ಸಮರಸ ಮಾಡಲಾಗದು. ಅದೇನು ಕಾರಣವೆಂದಡೆ. ಅವರು ತ್ರಿವಿಧ ದ್ರೋಹಿಯಾದಕಾರಣ. ಗುರುಮಾರ್ಗಶೂನ್ಯರು ಗುರುನಿರಂಜನ ಚನ್ನಬಸವಲಿಂಗಕ್ಕೆ ದೂರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅರ್ಪಿತಾಂಗದ ಮೇಲಿಪ್ಪ ಅಖಂಡಲಿಂಗಕ್ಕೆ ಅರ್ಪಿತವನರ್ಪಿಸಿ ಆನಂದಿಸಿಕೊಂಬುವನಯ್ಯ ತನ್ನ ವಿನೋದಕ್ಕೆ. ಅರ್ಪಿತ ಪ್ರಾಣದಮೇಲಿಪ್ಪ ಅವಿರಳಲಿಂಗಕ್ಕೆ ಅರ್ಪಿತವನರ್ಪಿಸಿ ಆನಂದಿಸಿಕೊಂಬುವನಯ್ಯ ತನ್ನ ವಿನೋದಕ್ಕೆ, ಅರ್ಪಿತ ಭಾವದಮೇಲಿಪ್ಪ ಅಬ್ಥಿನ್ನ ಲಿಂಗಕ್ಕೆ ಅರ್ಪಿತವನರ್ಪಿಸಿ [ಆನಂದಿಸಿ] ಕೊಂಬುವನಯ್ಯ ತನ್ನ ವಿನೋದಕ್ಕೆ. ಅರ್ಪಿಸಿಕೊಂಡಿಪ್ಪ ಗುರುನಿರಂಜನ ಚನ್ನಬಸವಲಿಂಗಕ್ಕೆ ಅರ್ಪಿತವನರ್ಪಿತವಾಗಿರ್ಪನಯ್ಯ ತನ್ನ ವಿನೋದಕ್ಕೆ ನಿಮ್ಮ ಪ್ರಸಾದಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ದೇಶದೇಶವ ತಿರುಗುವರು ಧನಿಕರ ಧರ್ಮದಿಂದೆ. ದೇಶವ ತಿರುಗುವರು ಒಡಲ ಪೋಷಿಸುವುದರಿಂದ. ದೇಶವ ತಿರುಗುವರು ಮಲಮೂರರ ಆಸೆ, ವೇಶ್ಯೆಯ ಮಚ್ಚು ತಲೆಗೇರಿ, ಗುರುಸೇವೆ ಮುಂದುಗೊಂಡು ದೇಶಾಂತರವ ಮಾಡಲಿಲ್ಲ. ಲಿಂಗಪೂಜೆ ಮುಂದುಗೊಂಡು ದೇಶವ ತಿರುಗಲಿಲ್ಲ. ಜಂಗಮದಾಸೋಹ ಮುಂದುಗೊಂಡು ದೇಶವ ತಿರುಗಲಿಲ್ಲ. ಇಂತು ಅಪ್ರಯೋಜನ ಪ್ರಾಣಿಗಳ ಶಿವಯೋಗಿಗಳೆಂದು ನಿರ್ಮಲ ಗಮನಮತಿಮಹಿಮರು ನುಡಿದುಕೊಳ್ಳಲಾಗದು ಗುರುನಿರಂಜನ ಚನ್ನಬಸವಲಿಂಗಕ್ಕೆ ದೂರವಾದ ದುರ್ಜನರನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಇರುಳಿನಿಂದೆದ್ದು ಬಂದು ಸತ್ತು, ಹುಟ್ಟಿ, ತಾಯಿ ಭಾವನ ಮಗನ ಹಡೆದಾಳು ನೋಡ ! ಹಡೆದ ಮಗನ ಕೈಯಲ್ಲಿ ಹಿಡಿದು ಬೀದಿ ಬಾಜಾರ ಕೇರಿ ಕೇರಿಯಲ್ಲಿ ಮುದ್ದಾಡಲು, ಮಾತೆಯ ತರ್ಕೈಸಿ ಒಳಗೊಯ್ದು ನೆರೆದು ಹೆರೆಹಿಂಗದೆ ಮಾವ ಮುತ್ತೆಯರಿಗೊಂದಾಗಿ ಮಾಡಿ ಶರಣೆಂದರೆ ನಿರಂಜನ ಚನ್ನಬಸವಲಿಂಗಕ್ಕೆ ಪರಿಣಾಮವಾಯಿತ್ತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಗಂಡನಿಂದ ಗಳಿಸಿದರ್ಥವನು ಹಗಲಿರುಳಗೂಡಿ, ಮಂಡಲದೊಳಗುಳ್ಳ ಮಿಂಡರ ನೋಡಿ ನೋಡಿಯಿತ್ತಡೆ ಗಂಡನೈಶ್ವರ್ಯದ ಬೆಳಗು ಘನವಾಯಿತ್ತು ಮೂರು ಲೋಕದೊಳಗೆ ; ವಿನಯವಾಯಿತ್ತು ಸಕಲಸನ್ನಿಹಿತರಿಗೆ ; ಸನುಮತವಾಯಿತ್ತು ಗುರುನಿರಂಜನ ಚನ್ನಬಸವಲಿಂಗಕ್ಕೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->