ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಹಾ ಆಶ್ಚರಿಯವೆಂಬುದಕ್ಕೆ ಮುನ್ನವೆ, ಹೋ ಹೋ ಹೋಯಿತ್ತೆಂಬುದಕ್ಕೆ ಮುನ್ನವೆ, ನಿಜವಸ್ತುವಿನ ಠಾವನರಿದು ವ್ಯವಧಾನದಿಂದ ಸಾವಧಾನ ಸಂಬಂಧಿ ತಾನೆ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಸರ್ಪನಲ್ಲಿ ವಿಷ ಇದ್ದಿತ್ತೆಂದಡೆ, ಸರ್ವಾಂಗದಲ್ಲಿ ವಿಷ ತಪ್ಪದಿಪ್ಪುದೆ, ವಿಷವಿಪ್ಪಠಾವು ಒಂದಲ್ಲದೆ ? ಪೃಥ್ವಿಯಲ್ಲಿ ನಿಕ್ಷೇಪವಿದ್ದಿತ್ತೆಂದಡೆ, ಅಲ್ಲಲ್ಲಿ ಎಲ್ಲಾ ಠಾವಿನಲ್ಲಿ ಅಡಗಿಪ್ಪುದೆ ? ಸಮಯಕುಲದಲ್ಲಿ ವಸ್ತು ಪರಿಪೂರ್ಣವೆಂದಡೆ, ದರ್ಶನಪಾಷಂಡಿಗಳಲ್ಲಿ ವಸ್ತುಪರಿಪೂರ್ಣನಾಗಿಪ್ಪನೆ ? ಇಪ್ಪ ಸತ್ಯಸನ್ಮುಕ್ತರಲ್ಲಿಯಲ್ಲದೆ, ಪರಮವಿರಕ್ತನಲ್ಲಿಯಲ್ಲದೆ. ನೆಲದಲ್ಲಿದ್ದ ನಿಧಾನವನರಿದು ಅಗಿವುದು, ವಿಷವಿದ್ದ ಬಾಯ ಮುಚ್ಚಿಹಿಡಿವುದು, ನೆರೆ ವಸ್ತುವಿದದ್ದ ಠಾವನರಿದು ಪೂಜಿಸುವುದು. ಇಂತೀ ಬಯಕೆಗೆ, ಬಯಕೆ ಸಮೂಹಕ್ಕೆ ತ್ರಿವಿಧಮಲ. ಖ್ಯಾತಿಲಾಭಕ್ಕೆ ಭೂತಹಿತ. ಅರಿವುಳ್ಳವರಲ್ಲಿ ಎರವಿಲ್ಲದ ಕೂಟ. ಇಂತಿವು ಜಗದಲ್ಲಿ ಅರಿದು ಮಾಡುವನ ಪರಿತೋಷ ಗಾರುಡೇಶ್ವರಲಿಂಗದಲ್ಲಿ ಎರಡಳಿದವನ ಕೂಟ.
--------------
ಉಪ್ಪರಗುಡಿಯ ಸೋಮಿದೇವಯ್ಯ
-->