ವೇಳೆಯನರಿದು ಧ್ವನಿದೋರುವ ತಾಮ್ರಚೂಡಂಗೆ ಅದಾವ ಜ್ಞಾನ ?
ಮಧುರರಸಂಗಳಿದ ಠಾವನರಿದೆಯಿದುವ ಪಿಪೀಲಿಕಂಗೆ ಅದಾವ ಜ್ಞಾನ ?
ತಾನುಂಡು ನೆನದಡೆ ಶಿಶು ತೃಪ್ತಿಯಹ ಕೂರ್ಮಂಗೆ ಅದಾವ ಜ್ಞಾನ ?
ಅರಿದು ನಡೆದಡೆ ವೇದವೇದ್ಯನು, ಅರಿದು ನಡೆದಡೆ ಶಾಸ್ತ್ರಸಂಬಂಧಿ,
ಅರಿದು ನಡೆದಡೆ ಪುರಾಣಪುಣ್ಯವಂತನು,
ಅರಿದು ನಡೆದಡೆ ಸಕಲಾಗಮಭರಿತನು.
ಇಂತೀ ಪಂಚಾಕ್ಷರಿಯ ಮೂಲಷಡಕ್ಷರಿಯ ಭೇದ.
ಜಗಕ್ಕಾಧಾರವಾರೆಂಬುದ ಏಕಮೇವನದ್ವಿತೀಯನೆಂಬುದ ತಿಳಿದು,
ಸೋಹಂ ಕೋಹಂ ಎಂಬುದ ತಿಳಿದು,
ಆ ನಿಜವೆ ವಸ್ತುವಿಗೊಡಲೆಂಬುದ ಪ್ರಮಾಣಿಸಿ,
ನುಡಿದು ನಡೆಯಬಲ್ಲವನೆ ವೇದವೇದ್ಯನು ಕಾಣಾ,
ಲಲಾಮಭೀಮಸಂಗಮೇಶ್ವರಲಿಂಗವು ತಾನಾದ ಶರಣ.