ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಜ್ಞಾನಿಯ ಸಂಗ ನೇಕೆಯ ಶಿಶುವಿನಂತಿರಬೇಕು.ಜ್ಞಾನಿಯ ಸಂಗ ಭಾನುವಿನ ಉದಯದಂತಿರಬೇಕು.ಜ್ಞಾನಿಯ ಸಂಗ ಸೌಖ್ಯದ ಆಲಯದ ಠಾವಿನಂತಿರಬೇಕು.ಹೀಂಗಲ್ಲದೆ ಮಾತಿಂಗೆ ಮಾತ ಕಾಳ್ಗೆಡವವರನೇನೆಂಬೆ,ನಿಃಕಳಂಕ ಮಲ್ಲಿಕಾರ್ಜುನಾ ?