ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಾದಿಪರಶಿವನಿಂದ ಸಾಕಾರಲೀಲೆಯ ಧರಿಸಿ, ಮರ್ತ್ಯಕ್ಕವತರಿಸಿ, ಶ್ರೀಗುರುಲಿಂಗಜಂಗಮದಿಂದ ವೇಧಾ-ಮಂತ್ರ-ಕ್ರಿಯಾದೀಕ್ಷೆಯ ಪಡೆದು, ಲಿಂಗಾಂಗಸಮರಸಾನಂದವನರಿದು, ತನ್ನ ಸ್ವಸ್ವರೂಪು ನಿಲುಕಡೆಯ ತಿಳಿದು, ಸತ್ಯ-ಸದಾಚಾರ-ಸನ್ಮಾರ್ಗದ ಗೊತ್ತನರಿದು, ಪಂಚಸೂತಕಪಾತಕ, ಅರುವೈರಿ, ಅಷ್ಟಮದಂಗಳಡಿಮೆಟ್ಟಿ, ಆಚರಿಸುವ ಭಕ್ತಗಣಂಗಳು ಇಂತಿಷ್ಟು ಸತ್ತುಚಿತ್ತಾನಂದನಿತ್ಯಪರಿಪೂರ್ಣ ಅವಿರಳಾನಂದ ನಿಜಾಚರಣೆಯನರಿಯದ ಗುರುವಾಗಲಿ, ಲಿಂಗವಾಗಲಿ, ಜಂಗಮವಾಗಲಿ, ಶರಣನಾಗಲಿ, ಭಕ್ತನಾಗಲಿ, ಪ್ರಸಾದಿಯಾಗಲಿ, ಅವರಿಂದ ಪಾದೋದಕಪ್ರಸಾದವ ಕೊಂಡರೆ ಯಮದಂಡಣೆಗೊಳಗು ನೋಡಾ, ಅಂತ್ಯದಲ್ಲಿ ಠೌರವ, ಎಂದಾತನಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
-->