ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ, ನೆಲಜಲಾಗ್ನಿ ಮರುತಾಕಾಶವಿಲ್ಲದ ಪಂಚವಣ್ಣಿಗೆಯ ಗರ್ದುಗೆಯ ಹಾಸಿ, ಪಶ್ಚಿಮದತ್ತ ಸ್ವಾಚ್ಛಾಲಯದ ಸ್ವಯಾನಂದ ಮೂರುತಿಯ ಎನ್ನರುವಿನಮುಖದಿಂದೆ ಕರೆತಂದು ಮೂರ್ತಿಗೊಳಿಸಿ, ಸತ್ಯೋದಕದಿಂದೆ ಪಾದಾಭೀಷೇಕವ ಮಾಡಿ ತ್ರಿಪುಟಿಯ ದಹಿಸಿ ಭಸಿತವ ಧರಿಸಿ, ಹೃದಯಕಮಲವನೆತ್ತಿ ಧರಿಸಿ, ಶ್ರದ್ಧೆಧೂಪವರ್ಪಿಸಿ, ಸೋಹಂ ಎಂಬ ಚಾಮರ ಢಾಳಿಸಿ, ಸುಜ್ಞಾನಜ್ಯೋತಿಯ ಬೆಳಗನೆತ್ತಿ ಜಯ ಜಯ ಮಂಗಳವೆಂದು ಅರ್ಚಿಸುವೆನಯ್ಯಾ ಅನುದಿನ ಗುರುನಿರಂಜನ ಚನ್ನಬಸವಲಿಂಗದಲ್ಲಿ ಎನ್ನ ಪ್ರಾಣಲಿಂಗಕ್ಕೆ.
--------------
ದೇಶಿಕೇಂದ್ರ ಸಂಗನಬಸವಯ್ಯ
-->