ಅಥವಾ

ಒಟ್ಟು 5 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಗಳು ರುದ್ರಾಕ್ಷಿಯ ಕೊಟ್ಟ್ಲಲ್ಲಿ ಫಲವಲ್ಲದೆ, ಸುಮ್ಮನೆ ಧರಿಸಿದಲ್ಲಿ ಫಲವಿಲ್ಲ ನೋಡಾ, ಭಕ್ತನು ಪದಾರ್ಥ ನೀಡಿದಲ್ಲಿ ಫಲವಲ್ಲದೆ, ಬೇಡಿ ರುಚಿಸಿದಲ್ಲಿ ಫಲವಿಲ್ಲ ನೋಡಾ. ನಿನ್ನರಿವ ನಾನರಿತಲ್ಲಿ ಫಲವಲ್ಲದೆ, ಅರುಹಿಸಿದಲ್ಲಿ ಫಲವಿಲ್ಲ. ಅಹುದೆಂಬುದು ನ್ಕೀ, ಬಲ್ಲೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಕಾಯ ತೊಟ್ಟಿನಲ್ಲಿ ನೀರ ಬಿಟ್ಟಡೆ ಕಾಯಿ ನಿಂದುದುಂಟೆ ಬೇರೊಣಗಿದ ಮತ್ತೆ ? ಇಂತೀ ಮೂಲಭೇದದಿಂದ ಶಾಖೆ ಪರ್ಣ ಫಲವಲ್ಲದೆ ಮೊದಲಿಗೆ ನಷ್ಟಲಾಭಕ್ಕೆ ದಿನವುಂಟೆ ? ಜ್ಞಾನಹೀನನು ಆವ ಸ್ಥಲವ ನೆಮ್ಮಿ ಮಾತನಾಡಿದಡೂ ಷಡುಸ್ಥಲದಲ್ಲಿ ಭಾವಶುದ್ಭವಾಗಿಪ್ಪನೆ ? ಇದು ಕಾರಣದಲ್ಲಿ ಗುರುವಾಜ್ಞೆಯ ಮೀರದೆ ಶಿವಲಿಂಗಪೂಜೆಯ ಮರೆಯದೆ ಜಂಗಮಸೇವೆಯಲ್ಲಿ ಸನ್ನದ್ಧನಾಗಿ ಆವುದಾನೊಂದು ವ್ರತವೆಂದು ಹಿಡಿದು ಅದ್ವೈತವನರಿದೆನೆಂದು ಬಿಡದೆ ನಿಂದನಿಂದ ಸ್ಥಲಕ್ಕೆ ನಿಬದ್ಧಿಯಾಗಿ ನಿಂದಲ್ಲಿಯೆ ಲಿಂಗಸಂಗ ಸಂಗನಬಸವಣ್ಣನ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವನರಿದುದು.
--------------
ಬಾಹೂರ ಬೊಮ್ಮಣ್ಣ
ಆಕಾರವಿಲ್ಲದ ನಿರಾಕಾರ ಲಿಂಗವ ಕೈಯಲ್ಲಿ ಹಿಡಿದು ಕಟ್ಟಿದೆವೆಂಬರು ಅಜ್ಞಾನಿ ಜೀವಿಗಳು. ಹರಿಬ್ರಹ್ಮರು ವೇದ ಪುರಾಣ ಆಗಮಂಗಳು ಅರಸಿ ಕಾಣದ ಲಿಂಗ. ಭಕ್ತಿಗೆ ಫಲವಲ್ಲದೆ ಲಿಂಗವಿಲ್ಲ. ಕರ್ಮಕ್ಕೆ ನರಕವಲ್ಲದೆ ಲಿಂಗವಿಲ್ಲ. ಜ್ಞಾನಕ್ಕೆ ಪರಿಭ್ರಮಣವಲ್ಲದೆ ಲಿಂಗವಿಲ್ಲ. ವೈರಾಗ್ಯಕ್ಕೆ ಮುಕ್ತಿಯಲ್ಲದೆ ಲಿಂಗವಿಲ್ಲ. ಇದು ಕಾರಣ ತನ್ನ ತಾನರಿದು ತಾನಾದಡೆ ಚೆನ್ನಮಲ್ಲಿಕಾರ್ಜುನ ತಾನೆ ಬೇರಿಲ್ಲ.
--------------
ಅಕ್ಕಮಹಾದೇವಿ
-->