ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಕೇಶವನಲ್ಲದೆ ಅತಃಪರದೈವವಿಲ್ಲೆಂದುವೇದವ್ಯಾಸಮುನಿ ಭಂಗಬಟ್ಟುದನರಿಯಿರೆ !`ಅಹಂ ಸರ್ವಜಗತ್ಕರ್ತಾ ಮಮ ಕರ್ತಾ ಮಹೇಶ್ವರಃಎಂದು ವಿಷ್ಣು ಹೇಳಿದ ವಚನವ ಮರೆದಿರಲ್ಲಾ !ಕೂಡಲಸಂಗಮದೇವನುದಕ್ಷನ ಯಜ್ಞವ ಕೆಡಿಸಿದುದ ಮರೆದಿರಲ್ಲಾ !
ಕಾಮದಹನವ ಮಾಡಿದನು,ದಕ್ಷನ ಯಜ್ಞವ ಕೆಡಿಸಿದನು,ಒಳ್ಳೆಯ ತ್ರಿಪುರವನುರುಹಿದನು,ಹಾಳಾಹಳವನೊಮ್ಮೆ ಧರಿಸಿದನು,ನಮ್ಮ ಕೂಡಲಸಂಗಮದೇವನು.
ಪಂಚಾಕ್ಷರಮಂತ್ರದಿಂದಅಜಗಣ್ಣ ತಂದೆಗಳಿಗೆ ಆರೂಢಪದವಾಯಿತು.ಪಂಚಾಕ್ಷರಮಂತ್ರದಿಂದ ಶಿವಜಾತಯ್ಯನ ಶಿಷ್ಯಮಂತ್ರಜಾತಯ್ಯ ಮಂತ್ರದಲ್ಲಿ ಬಯಲಾದನು.ಪಂಚಾಕ್ಷರಮಂತ್ರದಿಂದ ಸಾನಂದಮುನಿಗಣೇಶ್ವರನುಯಮಪುರವ ಹಾಳುಮಾಡಿದ.ಪಂಚಾಕ್ಷರಮಂತ್ರದಿಂದ ವೀರಭದ್ರನುದಕ್ಷಬ್ರಹ್ಮನ ತಲೆಹೊಡೆದು ಯಜ್ಞವ ಕೆಡಿಸಿದ.ಇಂತಪ್ಪ ಶ್ರುತಿಪ್ರಮಾಣ ವಾಕ್ಯಗಳಿಂದಪಂಚಾಕ್ಷರ ಮಹತ್ವವ ಕೇಳಿಜೀವಾತ್ಮರು ನೆನೆನೆನೆದು ಭವಕ್ಕೆ ಹೇಳಿದರು.ನಾನು ಪಂಚಾಕ್ಷರವ ನೆನೆನೆದುಭವಮಾಲೆಯ ಹರಿದು ಮಂತ್ರದಲ್ಲಿ ಲಯವಾದೆನಯ್ಯಾ,ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗನಿರ್ಮಾಯಪ್ರಭುವೆ.