ಪೃಥ್ವಿಯೊಳಗಣ ಬಾಲಿಂಗೆ
ಇಪ್ಪತ್ತೈದು ಯುವತೇರು ವಿಶ್ವಾಸವಂ ಮಾಡುತಿಪ್ಪರು ನೋಡಾ !
ಅವರಿಂಗೆ ಹತ್ತೆಂಟು ಮುಖದೋರಿ
ಈ ಜಗವನೆಲ್ಲಾ ಏಡಿಸ್ಯಾಡುತಿರ್ಪರು ನೋಡಾ !
ಆದಿಯಲ್ಲಿ ಒಬ್ಬ ದೇವ ಬಂದು, ಹತ್ತೆಂಟು ಮುಖವ ಕೊಯ್ಯಲು,
ಇಪ್ಪತ್ತೈದು ಯುವತೇರು ಬಿಟ್ಟು ಹೋದರು ನೋಡಾ !
ಆ ಪೃಥ್ವಿಯೊಳಗಣ ಬಾಲೆಯ ಹಿಡಿದು
ಪೃಥ್ವಿಂಗೆ ವರಿಸಿ ಭೂಮಂಡಲದೇವನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.