ಅಥವಾ

ಒಟ್ಟು 2 ಕಡೆಗಳಲ್ಲಿ , 1 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಳಿಕ್ಕೆಯುಂ, ವಾಂತವೆ ಸೂಕ್ಷ ್ಮ ರುದ್ರಸಂಜ್ಞಿತವಾದಿಕಾರದೊಳ್ಬೆರೆಯೇ ಶಿ ಯೆನಿಸಿತ್ತು. ಲಾಂತವೆ ಅನಂತಾಖ್ಯ ರುದ್ರಸಂಜ್ಞಿತವಾದಾಕಾರದೋಳ್ಕೂದೆ ವಾ ಯೆನಿಸಿತ್ತು. ಮರುದ್ವಾಚ್ಯವಾದ ಮಾಂತವೆ ಯ ಯೆನಿಸಿತ್ತೀ ಮೂರಕ್ಕಾದಿಯಾದ ನಮಃ ಎಂಬ ಹೃದಯಪಲ್ಲವಂಗೂಡಿ ಪಂಚಾಕ್ಷರಮೆನಿಸಲದು `ತಾರಾಧ್ಯೇಯಂ ಷಡಕ್ಷರಂ' ಎಂದು ನಿರ್ವಚಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇಂತು ಶಿವ ಸದಾಶಿವ ಮಹೇಶ್ವರ ನಿರೂಪಣಾನಂತರದಲ್ಲಿ ಪಂಚಶಕ್ತಿ ಮಂತ್ರಬೀಜಂಗಳಂ ಪೇಳ್ವೆನೆಂತೆನೆ ಶಕ್ತಿಸಂಜ್ಞಿತವಾದ ಸ್ ಎಂಬುದನ್ನುದ್ಧರಿಸಿ, ವಿಕೃತಿಸಂಜ್ಞಿತವಾದಾಕಾರವಂ ಪತ್ತಿಸಿ- ಯಗ್ನಿಸಂಜ್ಞಿತವಾದ ರ್ ಎಂಬುದಂ ಬೆರಸೆ ಸ್ರಾಯೆನಿಸಿತ್ತದಂ ಬಿಂದು ನಾದ ಸಂಜ್ಞಿತವಾದ ಸೊನ್ನೆಯೊಳ್ಕೂಡೆ ಸ್ರಾಂ ಯೆನಿಸಿತ್ತೀ ಶಕ್ತಿಬೀಜಂ ಸಮಸ್ತ ಶಕ್ತ್ಯಾಶ್ರಯವಾದ ಪ್ರಥಮಶಕ್ತಿಯೆಂದು ನಿರೂಪಿಸಿದೆಯಯ್ಯಾ, ಪರಶಿವಲಿಂಗಯ್ಯಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
-->