ಒಟ್ಟು 3 ಕಡೆಗಳಲ್ಲಿ , 1 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಹಡಗನೇರಿದವರ ಮುಂದೆ ಕಳುಹಿಮರಳಿ ಹೋದೆಹೆನೆಂದರೆ ಹಡಗುಂಟೆ?ಮಚ್ಚಿದಲ್ಲಿ ಮಹೋತ್ಸವವನೆಯ್ದು ಮನವೆಬಳಿಕ ಅರಸಿದರುಂಟೆ?ಅಯ್ಯನ ಸಂಗ ಅನಾದಿ ಸಂಸಿದ್ಧ ಯೋಗಮೂರ್ತಿಗುರು ಸಿಕ್ಕಿದಲ್ಲಿ ಕೂಡು ಮನವೆ,ಕಪಿಲಸಿದ್ಧಮಲ್ಲಿಕಾರ್ಜುನಾ.
ವೇದ ನಾಲ್ಕರ ಮೇಲೆ ಆದ ಪಂಚಮವಾಕ್ಯಆದ ಷಷ*ಮ ಬ್ರಹ್ಮವನು ಜಪಿಸುವಆಮೋದವನು ಮೀರಿ ಹೋಯಿತೈ ಕೈವಲ್ಯದಾದಿಪದ ತಾನೆ ನಿತ್ಯ.ನಿತ್ಯ ಅನಾದಿ ಸಂಸಿದ್ಧ ಯೋಗಮೂರ್ತಿ ಗುರುಸ್ವಾಮಿಮೂದೇವರಿಗೆ ದೀಕ್ಷೆಮಾಡಲೆಂದು,ಕಪಿಲಸಿದ್ಧಮಲ್ಲಿಕಾರ್ಜುನಾ.
ಘಾತವಪ್ಪ ಸರಧಿ ಪ್ರೇತವಪ್ಪ ಅಡವಿಪಾತಕ ಭವಕೆ ಬಹ ಕೂಪದೊಳಗೆನೂಕಿದರೆ ಬೀಳೆ, ನಿನ್ನಾಧಾರವುಂಟು.ಅನಾಸಂಸಿದ್ಧ ಯೋಗಮೂರ್ತಿನಿನ್ನ ಒಡನಾಡಿ ನಾ ನಿನ್ನ ಠಕ್ಕನರಿಯೆನೆಕಪಿಲಸಿದ್ಧಮಲ್ಲಿಕಾರ್ಜುನ.