ಅಥವಾ

ಒಟ್ಟು 3 ಕಡೆಗಳಲ್ಲಿ , 1 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಡಗನೇರಿದವರ ಮುಂದೆ ಕಳುಹಿ ಮರಳಿ ಹೋದೆಹೆನೆಂದರೆ ಹಡಗುಂಟೆ? ಮಚ್ಚಿದಲ್ಲಿ ಮಹೋತ್ಸವವನೆಯ್ದು ಮನವೆ ಬಳಿಕ ಅರಸಿದರುಂಟೆ? ಅಯ್ಯನ ಸಂಗ ಅನಾದಿ ಸಂಸಿದ್ಧ ಯೋಗಮೂರ್ತಿ ಗುರು ಸಿಕ್ಕಿದಲ್ಲಿ ಕೂಡು ಮನವೆ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ವೇದ ನಾಲ್ಕರ ಮೇಲೆ ಆದ ಪಂಚಮವಾಕ್ಯ ಆದ ಷಷ*ಮ ಬ್ರಹ್ಮವನು ಜಪಿಸುವ ಆಮೋದವನು ಮೀರಿ ಹೋಯಿತೈ ಕೈವಲ್ಯದಾದಿಪದ ತಾನೆ ನಿತ್ಯ. ನಿತ್ಯ ಅನಾದಿ ಸಂಸಿದ್ಧ ಯೋಗಮೂರ್ತಿ ಗುರುಸ್ವಾಮಿ ಮೂದೇವರಿಗೆ ದೀಕ್ಷೆಮಾಡಲೆಂದು, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಘಾತವಪ್ಪ ಸರಧಿ ಪ್ರೇತವಪ್ಪ ಅಡವಿ ಪಾತಕ ಭವಕೆ ಬಹ ಕೂಪದೊಳಗೆ ನೂಕಿದರೆ ಬೀಳೆ, ನಿನ್ನಾಧಾರವುಂಟು. ಅನಾಸಂಸಿದ್ಧ ಯೋಗಮೂರ್ತಿ ನಿನ್ನ ಒಡನಾಡಿ ನಾ ನಿನ್ನ ಠಕ್ಕನರಿಯೆನೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
-->