ಅಥವಾ

ಒಟ್ಟು 3 ಕಡೆಗಳಲ್ಲಿ , 1 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾತ್ಮ ಅಧ್ಯಾತ್ಮವೆಂಬಿರಿ ಅಧ್ಯಾತ್ಮವೆಂಬುದದು ಏನು ಹೇಳಾ? ವಾಯುಪ್ರಾಣಿಯ ಕೊಂದು, ಅಕ್ಷರವೈದರ ಎತ್ತಿ ತೋರಿದನು ಶ್ರೀಗುರುರಾಯನು. ಬಹಳ ಲಿಂಗವ ತಂದು ಸೂಕ್ಷ್ಮವ ಮಾಡೀಗ ಕೊಟ್ಟು ಬಳಿಕ ಯೋಗವುಂಟೆ? ಅಟ್ಟುದನು ಮರಳಡುವ ಮಿಟ್ಟೆಯ ಭಂಡರ, ಏನೆಂಬೆನೈ ಗುರುವಾಜ್ಞೆ ಜಡರ. ಆನಂದರೂಪ ಕಪಿಲಸಿದ್ಧಮಲ್ಲಿಕಾರ್ಜುನನ ಯೋಗವಾದಲ್ಲಿ ಯೋಗವುಂಟೆ?
--------------
ಸಿದ್ಧರಾಮೇಶ್ವರ
ದೃಷ್ಟವಪ್ಪ ಗುರುಕರುಣದಲ್ಲಿ ಇಷ್ಟಂಗವ ಸಂಬಂಧಿಸಿಕೊಟ್ಟ ಬಳಿಕ ಮರಳಿ ಯೋಗವುಂಟೆ? ಸರ್ವಯೋಗಕ್ಕೆ ಶಿವಯೋಗ ಮಹಾಯೋಗವೆಂದರಿದ ಬಳಿಕ, ಮತ್ತೆ ಕಿರಿದು ಯೋಗವೆಂದು ಪಾದೋದಕ ಪ್ರಸಾದಕ್ಕೆ ಹೊರಗಾಗಿ ಗುರುವಾಜ್ಞೆಯ ಮೀರಿದ ಗುರುದ್ರೋಹಿಗಳ ಎನ್ನತ್ತ ತೋರದಿರಯ್ಯ, ನಿಮ್ಮ ಧರ್ಮ. ದೀಕ್ಷಾತ್ರಯದಲ್ಲಿ ಸಂಪನ್ನರಾಗಿ, ಪ್ರಸಾದದ್ಲ ಲೋಲುಪ್ತರಾಗಿ, ಜಂಗಮವೆ ಂಗವೆಂಬವರ ಎನಗೊಮ್ಮೆ ತೋರಯ್ಯ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ನಿಮ್ಮ ಧರ್ಮ.
--------------
ಸಿದ್ಧರಾಮೇಶ್ವರ
-->