ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇರು ಮೊದಲಾಗಿ ಚರಿಸುವ ವೃಕ್ಷದೊಳಗೆ hತ್ತು ಶಾಖೆಯಲ್ಲಿ ನಾಲ್ಕು ಹಣ್ಣಹುದ ಕಂಡೆ. ಒಂದು ಹಣ್ಣ ಸವಿದಾತ ಯೋಗಿಯಾದ, ಒಂದು ಹಣ್ಣ ಸವಿದಾತ ಭೋಗಿಯಾದ, ಒಂದು ಹಣ್ಣ ಸವಿದಾತ ಧರ್ಮಿಯಾದ, ಮತ್ತೊಂದು ಹಣ್ಣ ಸವಿದಾತ ಧರ್ಮಿಯಾದ, ಮತ್ತೊಂದು ಹಣ್ಣ ಸವಿದಾತನ ಕುರಹ ಕಂಡು ಹೇಳಿರೆ. ಈ ನಾಲ್ಕು ಹಣ್ಣ ಮೆದ್ದವರ ಕೊರಳಲ್ಲಿ ಬಿತ್ತು ಗಂಟಲು ಸಿಕ್ಕಿ ಕಾನನದಲ್ಲಿ ತಿರುಗುತಿದ್ದರಯ್ಯಾ. ಈ ಫಲವ ದಾಂಟಿದವರು ಸೌರಾಷ್ಟ್ರ ಸೋಮೇಶ್ವರ ಹುಟ್ಟುಗೆಟ್ಟರು.
--------------
ಆದಯ್ಯ
ಆದಿಯನರಿದ ಮತ್ತೆ ಅನಾದಿಯಲ್ಲಿ ನಡೆವ ಪ್ರಪಂಚೇಕೆ? ಅನಾಗತವನರಿದ ಮತ್ತೆ ಅನ್ಯಾಯದಲ್ಲಿ ನಡೆವ ಗನ್ನವೇಕೆ? ಇಹಪರವೆಂಬುಭಯವನರಿದ ಮತ್ತೆ ಪರರ ಬೋಧಿಸಿ ಹಿರಿಯನಾದೆಹೆನೆಂಬ ಹೊರೆಯೇತಕ್ಕೆ? ಯೋಗಿಯಾದ ಮತ್ತೆ ರೋಗದಲ್ಲಿ ನೋಯಲೇತಕ್ಕೆ? ಆದಿಮಧ್ಯಾಂತರವನರಿದ ಮತ್ತೆ ಸಾಯಸವೇಕೆ ಕರ್ಮದಲ್ಲಿ? ಇಂತೀ ಭೇದಕರಿಗೆ ಅಭೇದ್ಯ, ಅಪ್ರಮಾಣ ಅಭಿನ್ನವಾದ ಶರಣಂಗೆ ನಮೋ ನಮೋ ಎಂದು ಬದುಕಿದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
-->