ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಸ್ಥೂಲದೇಹ ತೊಳೆದಡೇನು, ಸೂಕ್ಕ್ಷ್ಮದೇಹ ಶುದ್ಧವಾದಡೇನು.ಕಾರಣಾತೀತನಾಗದನ್ನಕ್ಕ?ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ, ನಾ ಯೋಗಿಯಾದಡೇನುಮನವೊಲಿದು ಚೆನ್ನಬಸವಣ್ಣ ಲಿಂಗವ ಕೊಡದನ್ನಕ್ಕ ?
ಕಾಮವ ಸುಟ್ಟು ಹೋಮವನುರುಹಿ, ತ್ರಿಪುರಸಂಹಾರದ ಕೀಲ ಬಲ್ಲಡೆ,ಯೋಗಿಯಾದಡೇನು ? ಭೋಗಿಯಾದಡೇನು ?ಶೈವನಾದಡೇನು ? ಸನ್ಯಾಸಿಯಾದಡೇನು ?ಅಶನವ ತೊರೆದಾತ ವ್ಯಸನವ ಮರೆದಾತ_ಗುಹೇಶ್ವರಲಿಂಗದಲ್ಲಿ ಅವರ ಹಿರಿಯರೆಂಬೆನು.