ಒಟ್ಟು 4 ಕಡೆಗಳಲ್ಲಿ , 4 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಲಿಂಗ ಹೊರತೆಯಾಗಿ, ವಿಭೂತಿ ರುದ್ರಾಕ್ಷಿಯ ಕೊಟ್ಟು,ಗುರುವಾಗಬಹುದೆ ಅಯ್ಯಾ?ಬೀಜವಿಲ್ಲದೆ ಅಂಕುರವಾಗಬಲ್ಲುದೆ?ಗಂಡನಿಲ್ಲದ ಮುಂಡೆಗೆ ಗರ್ಭನಿಂದಡೆ ಅವಳಾರಿಗೆ ಯೋಗ್ಯ?ಉಭಯವು ಕೇಡಾಯಿತ್ತು.ಇದನರಿತು ಮಾಡಿ, ಸದಾಶಿವಮೂರ್ತಿಲಿಂಗವನರಿವುದಕ್ಕೆ.
ಒಬ್ಬರುತ್ತಮರೆಂಬರು.ಒಬ್ಬರು ಕನಿಷ್ಠರೆಂಬರು.ಒಬ್ಬರು ಅಧಮರೆಂಬರು.ಒಬ್ಬರು ಕಷ್ಟನಿಷ್ಠೂರಿಯೆಂಬರು.ಅಂದರದಕೇನು ಯೋಗ್ಯ?ವಿನಯಕಂಪಿತ ಪರಮಾರ್ಥಕ್ಕೂ ಲೌಕಿಕಕ್ಕೂ ವಿರುದ್ಭ ಕಾಣಾಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರಶಿವಸಾಕ್ಷಿಯಾಗಿ.
ಸದ್ಭಕ್ತಿಯಿಲ್ಲದ ವಿಶ್ವಾಸಹೀನನು ವಾಚಾರಚನೆಗಳಿಂದಮಾತಿನ ಮಾಲೆಯ ಎಷ್ಟು ನುಡಿದಡೇನು ?ಹೆಂಡದಂತೆ, ಮೃತ ಘಟದಂತೆ, ಶಿಥಿಲ ಫಳದಂತೆಅದಾರಿಗೆ ಯೋಗ್ಯ?ಸಂಗನಬಸವಣ್ಣ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವುಅವರಲ್ಲಿ ನಿಲ್ಲನಾಗಿ.
ಸ್ವಾದವಿಲ್ಲದ ಹಣ್ಣು, ಸೌರಭವಿಲ್ಲದ ಕುಸುಮ,ಸಾರವಿಲ್ಲದ ದ್ರವ್ಯ, ಅದಾರಿಗೆ ಯೋಗ್ಯ?ಅರಿವಿಲ್ಲದವನ ಇಷ್ಟದ ಬರಿಯ ಡಂಬಕದ ಪೂಜೆಅಡಿಯಿಡಲಿಲ್ಲ, ಏಣಾಂಕಧರ ಸೋಮೇಶ್ವರಲಿಂಗಕ್ಕೆ.