ವಂದಿಸಿದಲ್ಲಿ ಶತಕೋಟಿ ಯೋಜನವಾಯಿತ್ತು.
ಪೂಜಿಸಿದಲ್ಲಿ ದ್ವಿಶತಕೋಟಿ ಯೋಜನವಾಯಿತ್ತು.
ಪಣೆಮುಟ್ಟಿವಂದಿಸಿದಲ್ಲಿ ತ್ರಿಶತಕೋಟಿ ಯೋಜನವಾಯಿತ್ತು.
ಸೇವಿಸಿದಲ್ಲಿ ನಾಲ್ಕುಕೋಟಿ ಯೋಜನವಾಯಿತ್ತು.
ಕೊಂಡಲ್ಲಿ ಪಂಚಶತಕೋಟಿ ಯೋಜನವಾಯಿತ್ತು.
ಇಂತೀ ಐವರಲ್ಲಿದ್ದವರಿಗೆ ಪಂಚವರ್ಣದ ಕಲ್ಲು
ಷಡ್ವಿಧಶತಕೋಟಿ ಯೋಜನವಾಯಿತ್ತು.
ಇದ ಕಂಡು ನಾ ಬೆರಗಾಗಿ ಮರೆಯಾದೆನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.