ಅಥವಾ

ಒಟ್ಟು 2 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂತಪ್ಪ ದೇಹವ ತಾಳಿ ತನ್ನ ಮಲಮೂತ್ರದಲ್ಲಿ ತಾನೇ ಹೊರಳ್ಯಾಡಿ ಬಾಲತ್ವ ತೀರಿ ಯೌವ್ವನವಯಸ್ಸು ಒದಗಲು, ಕನ್ಯಕುಮಾರಿ ಹೆಣ್ಣಿನ ಕೆಂಪನ್ನ ಚರ್ಮವ ಕಂಡು ಉಳುವಿನ ಕುದುರೆಯಂದದಿ ಊರ ಮಾರಿಯ ಕೋಣನಂದದಿ ಮದವೇರಿದ ಆನೆಯಂದದಿ ಇಂದ್ರಿಯವೆಂಬ ಮದ ತಲೆಗೇರಿ ಮನಬಂದತ್ತ ತಿರಿತಿರಿಗಿ, ಯೌವ್ವನವಯಸ್ಸು ತೀರಿದಮೇಲೆ ಮುಪ್ಪಿನವಯಸ್ಸು ಒದಗಿ ಕಣ್ಣು ಒಳನಟ್ಟು ಗಲ್ಲ ಒಳಸೇರಿ ನಿರಿಗೆಗಟ್ಟಿ ಬೆನ್ನುಬಾಗಿ, ಮಣಕಾಲು ಗೂಡುಗಟ್ಟಿ. ಕೂದಲು ಬಿಳಿದಾಗಿ, ಕೋಲುಪಿಡಿದು ಕೆಮ್ಮುತ್ತ ಕೆಕ್ಕರಿಸುತ್ತ ಮಣಕಾಲಮೇಲೆ ಕೈಯನ್ನೂರಿ ಏಳುವಾಗ ಶಿವನ ನೆನೆದರೆ, ಶಿವನ ನೆನಹು ನೆಲೆಗೊಳ್ಳದು, ಶಿವನು ಮೆಚ್ಚನು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->