ಅಥವಾ

ಒಟ್ಟು 61 ಕಡೆಗಳಲ್ಲಿ , 1 ವಚನಕಾರರು , 61 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

`ಜ್ಞಾನಗಮ್ಯಂ ಸರಹಸ್ಯಂ ಚ ಕೈವಲ್ಯ ಫಲಕಾರಣಂ | ವೀರಶೈವಮಿತಿ ಜ್ಞೇಯ ಮೇತಲ್ಲಕ್ಷಣಮುಚ್ಯತೇ|| ಇಂತೆಂದುದಾಗಿ ಜ್ಞಾನದಿಂದೆಯಲ್ತಕ್ಕಂಥ ಗೋಪ್ಯ ವಾದಂಥ ಮುಕ್ತಿ ಪದಕ್ಕೆ ಕಾರಣವಾದಂಥ ಆವುದಾನೊಂದು ಶೈವವುಂಟು, ಅದು ವೀರಶೈವವೆಂದು ಹೇಳಲ್ಪಟ್ಟಿತ್ತಯ್ಯಾ, ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
`ಹಸ್ತಮಸ್ತಕಸಂಯೋಗಾದ್ಭೂತಿಪಟ್ಟಸ್ಯ ಧಾರಣಾತ್ | ಶಿವದೇವೇತಿ ವಿಜ್ಞೇಯಃ ಸರ್ವಪಾಪೈಃ ಪ್ರಮುಚ್ಯತೇ || ಎಂದು ವೀರಶೈವಾಚಾರ್ಯನ ಹಸ್ತದ ವೀರಮಾಹೇಶ್ವರನಪ್ಪ ಶಿಷ್ಯನ ಮಸ್ತಕದ ಸಂಯೋಗದ ದೆಸೆಯಿಂದಲೂ ವಿಭೂತಿಯ ಪಟ್ಟವ ಧರಿಸೂದರ ದೆಸೆಯಿಂದಲೂ ಆ ಶಿಷ್ಯನು....ದೇಹಿ ಎಂದರಿಯಲ್ತಕ್ಕಾತನು. ಅಂತಪ್ಪ ವೀರಮಾಹೇಶ್ವರನು ಎಲ್ಲಾ ಪಾಪಂಗಳಿಂ ದಲೂ ಬಿಡಲ್ಪಡುತ್ತಿಹನಯ್ಯಾ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಮತ್ತಮಾ ಪರಮೇಶ್ವರ ನಿರ್ಮಿತಮಾದ ಜಗತ್ತಿನಲ್ಲಿ ಚರಮಶರೀರಿ ಎನಿಸಿಕೊಂಡು ಸಮಸ್ತ ಶೈವರೊಳತಿ ವಿಶಿಷ್ಟನಾಗಿ, ಇತರ ಶೈವರಂತೆ ಕ್ರಿಯಾಬಹುಲದಿಂದಲ್ಪಫಲಮಂ ಪಡೆಯದೆ ಅಲ್ಪಕ್ರಿಯೆಯಿಂದನಂತಫಲಮಂ ಪಡೆವಾತನಾಗಿ, ಶಿವದೀಕ್ಷೆಯಿಂ ಮೇಲೆ ಸ್ನಾನ ಭೋಜನ ನಿದ್ರೆ ಜಾಗರಣ ಮಲಮೂತ್ರ ವಿಸರ್ಜನಾದಿ ಕಾಲಂಗಳಲ್ಲಿ ಅಶುಚಿಭಾವನೆದೋರದೆ ಸದಾ ಲಿಂಗಾಂಗಸಂಬಂದ್ಥಿಯಾಗಿ, ಲಿಂಗಭೋಗೋಪಭೋಗಿಯಾಗಿ, ತನ್ನಿಷ್ಟಲಿಂಗ ದಲ್ಲಿ ಆವಾಹನ ವಿಸರ್ಜನಾದಿ ಕ್ರಿಯೆಗಳಂ ಮಾಡದಾತನಾಗಿ, ತ್ರಿಕಾಲ ಲಿಂಗಾ ರ್ಚನಾಶಕ್ತನಾಗಿ, ಲಿಂಗಲೋಪವ್ರತ ಲೋಪಂಗಳಲ್ಲಿ ಪ್ರಾಣತ್ಯಾಗವಲ್ಲದೆ ಬೇರೊಂದು ಪ್ರಾಯಶ್ಚಿತ್ತವಿಲ್ಲದಾತನಾಗಿ, ಗುರುನಿಂದೆ ಶಿವನಿಂದೆ ಜಂಗಮ ನಿಂದೆ ಪ್ರಸಾದಪಾದೋದಕ ಭಸ್ಮಧಾರಣನಿಂದೆ ಶಿವಾಗಮ ಶಿವಕ್ಷೇತ್ರ ಶಿವಾ ಚಾರನಿಂದೆಗಳಂ ಸೈರಿಸದಾತನಾಗಿ, ವಿಷ್ಣುವಾದಿ ದೇವತೆಗಳಂ ಲೆಕ್ಕಿಸದಾತನಾಗಿ, ಬಾಹ್ಯದಲ್ಲಿ ಶಿವಲಿಂಗ ಲಾಂಛನವಿಲ್ಲದ ಭವಿಗಳೊಡನೆ ಏಕಾಸನ ಶಯನ ಯಾನ ಸಂಪರ್ಕ ಸಹಭೋಜನಾಗಳಿಲ್ಲದಾತನಾಗಿ, ಅನೃತ ಅಸ್ಥಿರವಾಕ್ಯ ವಂಚನೆ ಪಙÂ್ತಭೇದ ಉದಾಸೀನ ನಿರ್ದಯೆಯೆಂಬ ಅರಂತರಂಗ ಭವಿಗಳಿಲ್ಲದಾತನಾಗಿ, ಶಿವಮಾಹೇಶ್ವರಂ ಕಾಣುತಲೇಳೂದು, ಇದಿರಾಗಿ ನಡೆವುದು, ಅವರ್ಗೂಡಿ ತಿರುಗೂದು, ಪ್ರಿಯವಚನಮಂ ನುಡಿವುದು, ಗದ್ದುಗೆಯ ನಿಕ್ಕೂದು, ಅನ್ನ ಪಾನಂಗಳಂ ಸಮರ್ಪಿಸೂದೆಂಬ ಮುಕ್ತಿಸೋಪಾನಕ್ರಮ ಸಪ್ತ ಕ್ರಮಯುಕ್ತವಾಗಿ ಪ್ಪಾತನೆ ವೀರಶೈವನಯ್ಯಾ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಬಳಿಕಾ ಧ್ಯಾನಕ್ರಮದಲ್ಲಿ ಮಂತ್ರಾದ್ಥಿದೇವತೆಗೆ ಅಘೋರಾದಿ ಘೋರ ಮೂರ್ತಿ ಎಂದು, ಸದಾಶಿವಾದಿ ಮಿಶ್ರಮೂರ್ತಿ ಎಂದು, ಸಾಂಬಶಿವಾದಿ ಶಾಂತ ಮೂರ್ತಿ ಎಂದು ತ್ರಿವಿಧಮೂರ್ತಿಗಳುಂಟವರಲ್ಲಿ ಘೋರಮೂರ್ತಿಧ್ಯಾನದಿಂ ಚಿರಕಾಲಕ್ಕೆ ಸಕಲ ಸಿದ್ಧ್ಯಾದಿಗಳಹವು. ಶಾಂತಮೂರ್ತಿ ಧಾನ್ಯನದಿಂದ ಶೀಘ್ರ ಚಿರಕಾವವಲ್ಲದೆ ಪ್ರಚಾದಿಗಳ ಹವೆಂದರಿದು ಧ್ಯಾನಿಸೂದಾ ಧ್ಯಾನರಹಿತವಾಗಿ ಮಾಳ್ಪುದೆ ಅಗರ್ಭಜಪವಾ ಧ್ಯಾನ ಯುಕ್ತಮಾಗಿ ಮಾಳ್ಪುದೆ ಸಗರ್ಭಜಪವವ ರೊಳಗೆ ಅಗರ್ಭಕ್ಕೆ ಸಗರ್ಭವೆ ಕೋಟಿ ಮಡಿ ಮಿಗಿಲೆಂದು ಸಂಧ್ಯಾನಿಸೂದಯ್ಯ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಕಾಪಾಲಿಕವೆ ನರಕಪಾಲ ಬ್ಥಿಕ್ಷಾಟನಾದಿಗಳಂ ವಿವರಿಸೂದು. ಮಹಾವ್ರತವೆ ಅಸ್ಥಿಧಾರಣಾದಿಗಳಂ ವಿವರಿಸುತ್ತಿರ್ಕುಂ. ಬಳಿಕ ಪರಶಿವಪ್ರಣೀತಮಾದ ಶಾಸ್ತ್ರ ಮಂತ್ರವೆ ಮೋಕ್ಷಾಂಗಮಾದ ಕ್ರಿಯೆ ಚರ್ಯೆ ಯೋಗ ಜ್ಞಾನಾದಿಗಳಂ ಪ್ರಮಾಣಿಸುತ್ತಿರ್ಕುಂ, ಮತ್ತಮಾ ಸಮಸ್ತಮತಾಂತರಂಗಳಲ್ಲಿ ಪೇಳುವಾತ್ಮಸ್ವರೂಪವೆಂತೆನೆ:ದೇಹವೆ ಆತ್ಮನೆಂಬರು ಚಾರ್ವಾಕರು, ಇಂದ್ರಿಯಂಗಳೆ ಆತ್ಮನೆಂಬರು ಚಾರ್ವಾಕೈಕ ದೇಶಿಗಳು, ಪ್ರಾಣವೆ ಆತ್ಮನೆಂಬರು ಹಿರಣ್ಯಗರ್ಭರೆಂಬ ಚಾರ್ವಾಕೈಕ ದೇಶಿಗಳು. ಬಳಿಕ ದೇಹಾದಿ ವಿಲಕ್ಷಣನಾದೊರ್ವಾತ್ಮನು ದೇಹಪರಿಮಿತವಾಗಿ ಮಧ್ಯಪರಿಮಾಣತ್ವದಿಂ ಸಂಕೋಚ ವಿಕಾಸ ಧರ್ಮಯುಕ್ತನೆಂಬರು ಜೈನರು, ಬುದ್ಧಿಯೆ ಆತ್ಮನೆಂಬರು ಬೌದ್ಧರು, ಆನಂದವೆ ಆತ್ಮನೆಂಬರು ಕೋಳಯಾಮಳ ಶಾಕ್ತೇಯರುಗಳು, ಆತ್ಮನು ನಾಡಿಮಧ್ಯಗತನಾಗಿ ಅಣುಪರಿಮಾಣನೆಂಬರು ಪಾಂಚರಾತ್ರರು, ಆತ್ಮನು ದೇಹ ಪುತ್ರಾದಿ ರೂಪನೆಂಬರು ಲೌಕಿಕರು, ಆತ್ಮನು ಸ್ವತಃ ಪ್ರಮಾಣಜ್ಞಾನ ಸಮೇತನೆಂಬರು ವಿೂಮಾಂಸಕ ಭೇದಮಾದ ಭಾಟ್ಟ ಪ್ರಭಾಕರರುಗಳು, ಆತ್ಮನು ಗಗನದಂತೆ ಮಹತ್ವರಿಮಾಣನಾಗಿ ಪಾಷಾಣದಂತೆ ಜಡಸ್ವರೂಪನಾದೊಡಂ ಮನಃಸಂಯೋಗದಿಂ ಚಿದ್ಧರ್ಮಯುಕ್ತನೆಂಬರು ನೈಯಾಯಿಕ ವೈಶೇಷಿಕರುಗಳು, ಆತ್ಮನು ಅಸಚ್ಚಿನ್ಮಾತ್ರನೆಂಬರು ಸಾಂಖ್ಯ ಪಾತಂಜಲರುಗಳು, ಆತ್ಮನು ಜ್ಞಾಪ್ತಿಮಾತ್ರನೆಂಬರು ವೇದಾಂತಿಗಳು, ಆತ್ಮನು ನಿತ್ಯವ್ಯಾಪಕನೆಂಬರು ಪಾಶುಪತ ಕಾಪಾಲಿಕ ಮಹಾವ್ರತರುಗಳು, ಆತ್ಮನು ನಿತ್ಯವಾಪಕ ಜ್ಞಾನಕ್ರಿಯಾರೂಪನೆಂಬರು ಮಾಂತ್ರ ಸಂಜ್ಞಿತ ಸಿದ್ಧಾಂತಿಗಳೆಂದು ಪೃಥಕ್ಕರಿಸಲ್ವೇಳ್ಕುಂ ಶಾಂತವೀರೇಶ್ವರಾ. ಇಂತೀ ಮತಾಂತರಂಗಳ ಬ್ಥಿನ್ನಾಚರಣೆವಿಡಿವನಲ್ಲಯ್ಯ ಶರಣ ಶಿವಾದ್ವೈ [ತಿ] ಯಾಗಿ, ಮಹಾಗುರುಶಾಂತ ವೀರಪ್ರಭುವೆ.
--------------
ಶಾಂತವೀರೇಶ್ವರ
ಮತ್ತಮಾ ಮಂತ್ರಂಗಳಿಂ ಕರನ್ಯಾಸ ದೇಹನ್ಯಾಸ ಅಂಗನ್ಯಾಸಮೆಂಬ ನ್ಯಾಸತ್ರಯಂಗಳ ಉತ್ರತ್ತಿ ಸ್ಥಿತಿ ಸಂಹಾರ ಭೇದಂಗಂಳಂ ಪೂರ್ವೋಕ್ತ ಕ್ರಮ ದಿಂದರಿದು ವಿಸ್ತರಿಸುವದರಲ್ಲಿ ಗೃಹಸ್ಥಂಗೆ ಮುತ್ತೈದೆ ವಿಧವೆಯರಿಗೆ ಸ್ಥಿತಿನ್ಯಾಸ ವಹುದು, ಬ್ರಹ್ಮಚಾರಿಗೆ ಉತ್ಪನ್ಯಾಸವಹುದು, ವಾನಪ್ರಸ್ಥ ಯತಿಗಳಿಗೆ ಸಂಹಾರ ನ್ಯಾಸ ವಹದೆಂದನುವದಿಸಿ, ಬಳಿಕ ಅಗುಷ್ಠದಿಂ ಮೋಕ್ಷ, ತರ್ಜನಿಯಿಂ ಶತ್ರು ಹಾನಿ, ಮಧ್ಯಾಂಗುಲಿಯಿಂದರ್ಥಸಿದ್ಥಿ, ಅನಾಮಿಕೆಯಿಂ ಶಾಂತಿ, ಕನಿಷ್ಠದಿಂ ರಕ್ಷಣೆಗಳಪ್ಪವಲ್ಲಿ, ಮಧ್ಯಾಂಗುಷ್ಠ ಯೋಗದಿಂ ಮಾಲಿಕೆಯಂ ಪಿಡಿದು ಜಪಂಗೆಯ್ವುದೆ ಕನಿಷ್ಠ ವೆನಿಸೂದು. ತರ್ಜನ್ಯಂಗುಷ್ಠ ಯೋಗದಿಂ ಜಪಿಸೂದೆ ಮಧ್ಯಮವೆನಿಸೂದು. ಅನಾಮ್ಯಂಗುಷ್ಠ ಯೋಗದಿಂ ಜಪಂಗೆಯ್ವುದೆ ಉತ್ತಮ ವೆನಿಸೂದು. ಬಳಿಕಲ್ಲಿ ಮಧ್ಯಾಂಗುಷ್ಠಂಗಳಿಂ ಭಾಷ್ಯಜಪಂಗೆಯು, ತರ್ಜನ್ಯಂ ಗುಷ್ಠಂಗಳಿಂದುಪಾಂಶು ಜಪಂಗೆಯ್ವುದು, ಅನಾಮಿಕೆ ಮಧ್ಯಾಂಗುಷ್ಠಂಗಳಿಂ ಮಾನಸೆಜಪಂಗೆಯ್ವುದವರ ಅಲ್ಲಿ ಪರಶ್ರುತಿ ಗೋಚರವಪ್ಪುದೆ ಉಚ್ಚರಿಪುದೆ ವಾಚಕವಹುದು, ಸ್ವಶ್ರುತಿಸಾರವಾಗಿ ಓಷ್ಟ ಸ್ಪಂದನಮಾಗುಚ್ಚರಿಪುದೆ ಉಪಾಂಶುವಹುದು, ಮಂತ್ರವಾಕ್ಯಾರ್ಥಚಿಂತನಂಗೆಯ್ವುದೆ ಮಾನಸವಹುದು. ಅವರೊಳಗೆ ವಾಚಕಜಪವೆ ಕ್ಷುದ್ರಕಾರ್ಯಂಗಳಿಗೆ, ಉಪಾಂಶುಜಪವೆ ಸಕಲಸಿದ್ಧಿ ಗಳಿಗೆ, ಮಾನಸಜಪವೆ ಮುಕ್ತಿಗಹುದೆಂದು ನಿಯಾಮಿಸಿ ಜಪಂಗೆಯ್ವುದಯ್ಯ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
`ನಿರಾಭಾರೀತಿ ವಿಜ್ಞೇಯಃ ಸ ಏವ ಪರಮಶ್ಶಿವಃ | ವೀರಶೈವಕ್ರಮಃ ಪ್ರೋಕ್ತಃ ಪ್ರಾಯಶ್ಚಿತ್ತವಿವರ್ಜಿತಃ || ಎಂದು, ಇವು ಮೊದಲಾದ ಜಂಗಮಸ್ಥಲ ಪ್ರವರ್ತನೆ ಯುಳ್ಳಾತನು ನಿರಾಭಾರಿ ವೀರಶೈವನೆಂದರಿಯಲ್ತಕ್ಕತನು, ಆ ನಿರಾಭಾರಿ ವೀರಶೈವನೆ ಉತ್ಕøಷ್ಟವಾದ ಶಿವನು ತಾನೆ. ಈ ಪ್ರಕಾರದಿಂದ ನಿರೂಪಿಸಲ್ಪಟ್ಟ ವೀರಶೈವ ಕ್ರಮವು ಪ್ರಾಯಶ್ಚಿತ್ತವಿಲ್ಲದೆ ಇದಂಥದು ಎಂದು ಅರಿಯಲ್ತಕ್ಕುದಯ್ಯ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
`ಕಾಮಿಕಾದಿಷು ತಂತ್ರೇಷು ಚಾಷ್ಟವಿಂಶತಿಷು ಕ್ರಮಾತ್ | ವೇದಶಾಸ್ತ್ರಾದಿ ಸರ್ವೇಷು ಕೃತಾಭ್ಯಾಸ ಃ ಶಿವವ್ರತಿ ಃ || ಎಂದು ಕಾಮಿಕ ಮೊದಲಾದ ಇಪ್ಪತ್ತೆಂಟಾಗಮಂಗಳಲ್ಲಿಯುಂ ವೇದಶಾಸ್ತ್ರ ಮೊದಲಾದ ಸಮಸ್ತದರಲ್ಲಿಯೂ ಕ್ರಮದಿಂ ಮಾಡಲ್ಪಟ್ಟ ಅಭ್ಯಾಸವುಳ್ಳವನಾಗಿ ಶಿವವ್ರತಂಗಳುಳ್ಳಾತನಹನು ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ನಿವಾರಕ ಕರ್ಮದೋಪಾದಿಯಲ್ಲಿ ಸೂಕ್ಷ್ಮವಾಗಿ ಶೀತವರ್ಣವಾಗಿ ಪ್ರಕಾಶಿಸುತ್ತಿರ್ದು ಅಣುವಿನನೋಪಾದಿಯ ಶಿಖಿಯುಂಟು. ಅಂಥಾ ಶಿಖಿಯ ಮಧ್ಯದಲ್ಲಿ ಪರಮಾತ್ಮಲಿಂಗವು ವಿಶೇಷ ವಾಗಿರುತ್ತಿದ್ರ್ದಿತು. ಧಾಣವೇ ಬಿಲ್ಲು, ಮನಸ್ಸೇ ಬಾಣವು. ಪರಬ್ರಹ್ಮವೇ ಆ ಬಾಣಕ್ಕೆ ಗುರಿಯೆಂದು ಹೇಳಲ್ಪಡು ತ್ತಿದ್ದಿತು. ಮರೆವೆಯಿಲ್ಲದುದರಿಂದ ಭೇದಿಸಲ್ತಕ್ಕುದು ಆ ಬಾಣದೋಪಾದಿಯಲ್ಲಿ ಪರಬ್ರಹ್ಮಸ್ವರೂಪವಾದವನೇ ಶಿವಯೋಗೀಶ್ವರನಯ್ಯ, ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
`ಮುಂಡೀ ವಾ ಶಿವಚಿಹ್ನಾನಿ ಧಾರಯೇ ಜಿನಾದಿಕಂ | ಬ್ಥಿಕ್ಷಾಸಿ ನಿಯತಾ ಹಾರೋ | ಸುಖಸಂಸಾರ ವರ್ಜಿತಃ' || ಎಂದುದಾಗಿ, ಬೋಳುಮಂಡೆಯುಳ್ಳವ ನಾದರೆ ಆಗಲಿಯೂ ವ್ಯಾಘ್ರಾಜಿನ ಕೃಷ್ಣಾಜಿನ ಮೊದಲಾದ ಶಿವಲೀಲಾ ಕಥನಂ ಗಳಂ ಸೂಚಿಸುವ ಚಿಹ್ನಂಗಳಂ ಧರಿಸುವುದು, ಬ್ಥಿಕ್ಷಾನ್ನಭೋಜಿಯಾಗಿಯೂ ನಿಯತಮಪ್ಪಾಹಾರವ ನುಳ್ಳಾತನಾಗಿ ಅಲ್ಪ ಸುಖವಹ ಸಂಸಾರದಿಂದ ಬಿಡಲ್ಪಟ್ಟಾತನಹುದಯ್ಯಾ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ವೈಶೇಷಿಕವೇ ದ್ರವ್ಯ ಗುಣ, ಕರ್ಮ ಸಾಮಾನ್ಯ ವಿಶೇಷ ಸಮವಾಯವೆಂಬ ಷಟ್ಪದಾರ್ಥ ಪ್ರತಿಪಾದಕತ್ವದಿಂ, ಪ್ರಪಂಚ ಸ್ವರೂಪಮಂ ವಿಭಾಗಿಸುತ್ತಿರ್ಕುಂ, ಬಳಿಕ ಕಪಿಲ ಪತಂಜಲಿ ವ್ಯಾಸರೆಂಬ ಮುನಿಗಳಿಂ ಕ್ರಮದಿಂ ನಿರೂಪಿತಂಗಳಾದ ಸಾಂಖ್ಯ ಪಾತಂಜಲ ವೇದಾಂತಗಳೆಂಬ ಆತ್ಮಜ್ಞಾನಫಲವಾಗುಳ್ಳವೆ ಆದ್ಯಾತ್ಮಿಕ ಶಾಸ್ತ್ರ ತ್ರಯಂಗಳವರಲ್ಲಿ ಸಾಂಖ್ಯವೆ ನಿತ್ಯನಿರ್ಮಲರಾದಾತ್ಮರ ಸನ್ನಿಧಾನದಿಂ ಗುಣ ತ್ರಯಾತ್ಮಿಕ ಪ್ರಕೃತಿಯೆ ಪಂಚವಿಂಶತಿತತ್ವಾತ್ಮಕ ಸನ್ನಿಧಾನದಿಂ ಗುಣ ತ್ರಯಾತ್ಮಿಕ ಪ್ರಕೃತಿಯೆ ಪಂಚವಿಂಶತಿತತ್ವಾತ್ಮಕ ಜಗವಾಗಿ ವ್ಯವಹರಿಸೂದೆ ಸಂಸಾರ ಬಂಧವೆಂಬುದಂ ಸತ್ವಾದಿ ಗುಣತ್ರಯಾನುಕ್ರಮದಿಂ ಶ್ಲೇಷ್ಮಪ್ರಕೃತಿ ಪಿತ್ತಪ್ರಕೃತಿ ವಾತಪ್ರಕೃತಿ[ಗಳುಳ್ಳ] ಶಾಂತಿಕ್ರೋಧಮೂಢತ್ವಾದಿ ಗುಣಾದಿಗಳಾದ ಉತ್ತಮ ಮಧ್ಯಮ ಅಧಮ....ತ್ರಯದ....ಮೊದಲಾದವಂ ವಿಭಾಗಿಸೂ ದಯ್ಯಾ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಪ್ರಮಾಣ ಪ್ರಮೇಯ ಸಂಶಯ ಪ್ರಯೋಜನ ದೃಷ್ಟಾಂತ ಸಿದ್ಧಾಂತ ಅವಯವ ಕರ್ತ ನಿರ್ಣಯ ವಾದ ಜಲ್ಪ ವಿತಂಡ ಹೇತ್ವಾಭಾಸ ತ [ಛಲ] ಜಾತಿ ನಿಗ್ರಹಸ್ಥಾನಂಗಳೆಂಬ ಷೋಡಶಪದಾರ್ಥಮಂಪೇಳುತ್ತವೆ. ಪ್ರಪಂಚಕ್ಕೀಶ್ವರ ಕರ್ತೃತ್ವಮಂ ನಿಶ್ಚೈಸೂದಯ್ಯಾ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
`ಏಕ ಏವಾಯಮೇತಸ್ಮಿನ್ ಸರ್ವಸ್ಮಿನ್ ಜಗತೀಶಯಃ | ವಿಶಿಷ್ಟ ಈರ್ಯತೇ ಯಸ್ಮಾದ್ವೀರ ಇತ್ಯಬ್ಥಿದ್ಥೀಯತೇ || ಎಂದು ಆವುದಾನೊಂದು ಕಾರಣದಿಂದ ಆವ ನಾನೊಬ್ಬನು ಈ ಎಲ್ಲಾ ಜಗತ್ತಿನಲ್ಲಿಯು ವಿಶೇಷಿಸಲ್ಪಟ್ಟವನೆಂದು ಹೇಳಲ್ಪಡು ತ್ತಿಹನು. ಈ ವಿಶೇಷಿಸಲ್ಪಟ್ಟವನೆಂದು ಹೇಳಲ್ಪಡುತ್ತಿಹನು. ಈ ವಿಶೇಷಗುಣ ವಂತನಪ್ಪ ಆತ ವೀರಶೈವವನೆಂದು ಹೇಳಲ್ಪಡುತ್ತಿಹನಯ್ಯಾ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಬಳಿಕಾ ಮಂತ್ರಗಳ ವಾಚ್ಯ ವಾಚಕ ಸಂಬಂಧವರಿದು, ಮೇಲೆ ಪಂಚಬ್ರಹ್ಮ ಷಡಂಗಂಗಳೆ ಪ್ರಥಮಾವರಣ, ಅನಂತಾದ್ಯಷ್ಟ ವಿದ್ಯೇಶ್ವರರೆರಡನೆ ಯಾವರಣ, ಉಮೆ ಚಂಡೀಶ್ವರ ನಂದಿಕೇಶ್ವರ ಮಹಾಕಾಳ ಭೃಂಗಿರಿಟಿ ಗಣಪತಿ ವೃಷಭ ಷಣ್ಮುಖರೆಂಬ ಅಷ್ಟಗಎೀಶ್ವರರೆ ಮೂರನೆಯಾವರಣ, ಇಂದ್ರಾದಿ ಲೋಕಪಾಲಾಷ್ಟಕರು ಬ್ರಹ್ಮವಿಷ್ಣುಗಳು ನಾಲ್ಕನೆಯಾವರಣ, ವಜ್ರಾದಿ ದ್ಪಚಕ್ರಂಗಳೆಂಬ ದಶಾಯುಧಂಗಳೈನೆಯಾವರಣ, ಬ್ರಾಹ್ಮಾದಿ ಸಪ್ತಮಾಕೃಕೆಯ ರಾರನೆಯಾವರಣ, ಅಷ್ಟವಸುಗಳೇಳನೆಯಾವರಣ, ಏಕಾ ದಶರುದ್ರರೆಂಟನೆ ಯಾವರಣ, ಆದಿತ್ಯಾದಿ ನವಗ್ರಹಂಗಳೊಂಬತ್ತನೆ ಯಾವರಣವಹುದಾಗಿ, ಪಂಚಾಕ್ಷರಾದಿ ಮಂತ್ರಾದ್ಥಿದೇವತೆಯನಾವರಣ ಸಹಿತಮಾಗಾದರೂ, ನಿರಾ ವರಣಮಾಗಾದರೂ ಧ್ಯಾನಿಸುತ್ತೆ ಜಪಿಸೂದಾ ಧಾನ್ಯದಲ್ಲಿ ಅಬ್ಥಿಚಾರ ಗ್ರಹೋ ಚ್ಚಾಟನಾದಿಗಳಿಗೆ ಕೃಷ್ಣವರ್ಣರೂಪದಿಂ, ಮುಕ್ತ್ಯಾದಿಗಳಿಗೆ ಶುಕ್ರವರ್ಣ ರೂಪದಿಂ ಧ್ಯಾನಿಸೂದಯ್ಯ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
`ಶೈವೈರ್ಮಾಹೇಶ್ವರೈಶ್ಚ ೈವ ಕಾರ್ಯಮಂತರ್ಬಹಿಃ ಕ್ರಮಾತ್ | ಶೈವೋ ಮಾಹೇಶ್ವರಶ್ಚೇತಿ ನಾತ್ಯಂತಮಿಹ ವಿದ್ಯತೇ || ಇಂತೆಂದು ಶೈವರಿಂದವು ಮಾಹೇಶ್ವರರಿಂದವು ಅಂತರಂಗ ಬಹಿರಂಗದಲ್ಲಿ ಪರಿವಿಡಿಯ ದೆಸೆಯಿಂದ ಕ್ರಿಯೆಯೆು ಶೈವವೆಂದು ಮಾಹೇಶ್ವರವೆಂದು, ಇಲ್ಲಿ ಅಧಿಕವಾಗಿ ಏರ್ಪಡಿಸಲ್ಪಡು ವುದಿಲ್ಲವಯ್ಯಾ, ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಇನ್ನಷ್ಟು ... -->