ಮತ್ತಮಾ ಪರಮೇಶ್ವರ ನಿರ್ಮಿತಮಾದ ಜಗತ್ತಿನಲ್ಲಿ ಚರಮಶರೀರಿ ಎನಿಸಿಕೊಂಡು
ಸಮಸ್ತ ಶೈವರೊಳತಿ ವಿಶಿಷ್ಟನಾಗಿ, ಇತರ ಶೈವರಂತೆ
ಕ್ರಿಯಾಬಹುಲದಿಂದಲ್ಪಫಲಮಂ ಪಡೆಯದೆ ಅಲ್ಪಕ್ರಿಯೆಯಿಂದನಂತಫಲಮಂ
ಪಡೆವಾತನಾಗಿ, ಶಿವದೀಕ್ಷೆಯಿಂ ಮೇಲೆ ಸ್ನಾನ ಭೋಜನ ನಿದ್ರೆ ಜಾಗರಣ ಮಲಮೂತ್ರ
ವಿಸರ್ಜನಾದಿ ಕಾಲಂಗಳಲ್ಲಿ ಅಶುಚಿಭಾವನೆದೋರದೆ ಸದಾ ಲಿಂಗಾಂಗಸಂಬಂದ್ಥಿಯಾಗಿ,
ಲಿಂಗಭೋಗೋಪಭೋಗಿಯಾಗಿ, ತನ್ನಿಷ್ಟಲಿಂಗ ದಲ್ಲಿ ಆವಾಹನ ವಿಸರ್ಜನಾದಿ
ಕ್ರಿಯೆಗಳಂ ಮಾಡದಾತನಾಗಿ, ತ್ರಿಕಾಲ ಲಿಂಗಾ ರ್ಚನಾಶಕ್ತನಾಗಿ, ಲಿಂಗಲೋಪವ್ರತ
ಲೋಪಂಗಳಲ್ಲಿ ಪ್ರಾಣತ್ಯಾಗವಲ್ಲದೆ ಬೇರೊಂದು ಪ್ರಾಯಶ್ಚಿತ್ತವಿಲ್ಲದಾತನಾಗಿ,
ಗುರುನಿಂದೆ ಶಿವನಿಂದೆ ಜಂಗಮ ನಿಂದೆ ಪ್ರಸಾದಪಾದೋದಕ ಭಸ್ಮಧಾರಣನಿಂದೆ
ಶಿವಾಗಮ ಶಿವಕ್ಷೇತ್ರ ಶಿವಾ ಚಾರನಿಂದೆಗಳಂ ಸೈರಿಸದಾತನಾಗಿ, ವಿಷ್ಣುವಾದಿ
ದೇವತೆಗಳಂ ಲೆಕ್ಕಿಸದಾತನಾಗಿ, ಬಾಹ್ಯದಲ್ಲಿ ಶಿವಲಿಂಗ ಲಾಂಛನವಿಲ್ಲದ
ಭವಿಗಳೊಡನೆ ಏಕಾಸನ ಶಯನ ಯಾನ ಸಂಪರ್ಕ
ಸಹಭೋಜನಾಗಳಿಲ್ಲದಾತನಾಗಿ, ಅನೃತ ಅಸ್ಥಿರವಾಕ್ಯ ವಂಚನೆ ಪಙÂ್ತಭೇದ ಉದಾಸೀನ
ನಿರ್ದಯೆಯೆಂಬ ಅರಂತರಂಗ ಭವಿಗಳಿಲ್ಲದಾತನಾಗಿ, ಶಿವಮಾಹೇಶ್ವರಂ
ಕಾಣುತಲೇಳೂದು, ಇದಿರಾಗಿ ನಡೆವುದು, ಅವರ್ಗೂಡಿ ತಿರುಗೂದು,
ಪ್ರಿಯವಚನಮಂ ನುಡಿವುದು, ಗದ್ದುಗೆಯ ನಿಕ್ಕೂದು, ಅನ್ನ ಪಾನಂಗಳಂ
ಸಮರ್ಪಿಸೂದೆಂಬ ಮುಕ್ತಿಸೋಪಾನಕ್ರಮ ಸಪ್ತ ಕ್ರಮಯುಕ್ತವಾಗಿ ಪ್ಪಾತನೆ
ವೀರಶೈವನಯ್ಯಾ ಶಾಂತವೀರೇಶ್ವರಾ.