ಭಕ್ತ ಮಾಹೇಶ್ವರ ಪ್ರಸಾದಿ
ಈ ತ್ರಿವಿಧವು ಒಂದೇ ಕೋಡಿನಲ್ಲಿ ಅಡಗಿತ್ತು.
ಪ್ರಾಣಲಿಂಗ ಶರಣ ಐಕ್ಯ
ಈ ತ್ರಿವಿಧವು ಒಂದೇ ಕೋಡಿನಲ್ಲಿ ಅಡಗಿತ್ತು.
ಇಂತೀ ಉಭಯದ ಕೋಡ ಹಿಡಿದು
ಪಶ್ಚಿಮ ದ್ವಾರವ ಮುಚ್ಚಿ ನಿಂದು
ಉತ್ತರ ದ್ವಾರದಲ್ಲಿ ಎಡತಾಕುವ ನಿಶ್ಚಿಂತರ ಮುಚ್ಚಿಸಿ
ಸಚ್ಚಿದಾನಂದದಿ ನಲಿದೊಲಿದು
ಕಲೆ ವಿದ್ಯವನೊಪ್ಪಿಸ ಬಂದೆ.
ಉಲುಹಿನ ಗಿಲಿಕೆಯ ಕೊಂಬಿನಲ್ಲಿ ಸುಳುಹಿನ
ಸೂಕ್ಷ್ಮದ ಕಳೆಯ ಬೆಳಗಿನಲ್ಲಿ
ಅಕ್ಕನ ಗಂಡ ಭಾವಂದಿರ ಧಿಕ್ಕರಿಸ ಬಂದೆ.
ಮೇಖಲೇಶ್ವರಲಿಂಗವನರಿಯ ಹೇಳಿ.