ಪ್ರಾಣಕೂ ಲಿಂಗಕೂ ಅನುಸಂಧಾನವ ಮಾಡಬೇಕೆಂಬಲ್ಲಿ
ಮಣಿಯ [ನಿ]ರಾಳದಲ್ಲಿ ಏರುವ ನೂಲೆ ?
ರಾಗಾದಿ ವ್ಯಾಮೋಹ ತಥ್ಯಮಿಥ್ಯ ನಿಶ್ಚಯವಾದಲ್ಲಿಯೆ
ವಸ್ತುವಿನಲ್ಲಿ ಅನುಸಂಧಾನವಾದ ಚಿತ್ತವ
ಸನ್ನೆ ಸಂಜ್ಞೆಯ ಮಾಡಿ ಗೂಡಿಸಲಿಲ್ಲ.
ಆಯದಲ್ಲಿ ಗಾಯವಾದ ಆತ್ಮನ ಸ್ವಸ್ಥದಂತೆ
ಅರಿದಲ್ಲಿಯೆ ಮಾಯಾಮಲ ಕರ್ಮ ಬಿಟ್ಟುದು,
ವೀರಶೂರ ರಾಮೇಶ್ವರಲಿಂಗವನರಿದುದು.