ಒಂದು ವರ್ಣದಿಂದ, ಭೇದಕ್ರಮದಿಂದ ಕೂಡಲಾಗಿ,
ಪಂಚವರ್ಣವಾಯಿತ್ತು.
ಶ್ವೇತವರ್ಣ ಮೊದಲು ಪರಿಕ್ರಮದಿಂದ ಷಡುವರ್ಣವಾಯಿತ್ತು.
ಆ ವರ್ಣದ ಭೇದ ಬಿಳುಹಿನ ಸ್ವಾಯತ್ತೆಯಲ್ಲಡಗಿತ್ತು.
ಇಂತೀ ಪರಮನಿಂದ ಇಂದ್ರಿಯ ವಿಕಾರವಾದುದನರಿಯದೆ,
ಆತ್ಮಂಗೆ ಪರಿಭ್ರಮಣವೆಂದು ಸಂದೇಹವ ಮಾಡುವ
ಬಂಧಮೋಕ್ಷಕರ್ಮಂಗಳಿಗೆ ಪರಮಸಂದ ಹರಿದಲ್ಲದೆ,
ಊಧ್ರ್ವರೇತೋಮೂರ್ತಿ ಶ್ವೇತಸ್ವಯಂಭು
ಕಪಿಲೇಶ್ವರಲಿಂಗವು ಸಾಧ್ಯವಲ್ಲ.